India Vs Pakistan: ಗಡಿಯಲ್ಲಿ ಮುಂದುವರಿದ ಸೂಕ್ಷ್ಮ ಪರಿಸ್ಥಿತಿ, ಗಡಿ ಗ್ರಾಮದ ಜನರಲ್ಲಿ ಭಯ!
ಭಾರತ & ಪಾಕಿಸ್ತಾನ ನಡುವೆ ಯಾವ ಕ್ಷಣದಲ್ಲಿ ಬೇಕಾದರೂ ಯುದ್ಧ ಆರಂಭ ಆಗುತ್ತದೆ, ಆ ಮೂಲಕ ದೊಡ್ಡ ಸಂಚಲನ ಗ್ಯಾರಂಟಿ ಎಂಬ ಭಯ ಇದೀಗ ಆವರಿಸಿದೆ. ಇದೇ ಕಾರಣಕ್ಕೆ ಇದೀಗ ಎರಡೂ ದೇಶಗಳು ಜಮ್ಮು & ಕಾಶ್ಮೀರ ಗಡಿಯಲ್ಲಿ ಗನ್ ಹಿಡಿದು ನಿಂತಿವೆ. ಅಲ್ಲದೇ ತಮ್ಮ ತಮ್ಮ ಬಳಿ ಇರುವ ಬಾಂಬ್ ಹಾಗೂ ಮಿಸೈಲ್ ರೆಡಿ ಮಾಡಿಕೊಂಡಿವೆ. ಯುದ್ಧಕ್ಕೆ ಅಂತಾನೇ ವಿಮಾನಗಳು ಕೂಡ ಸಿದ್ಧವಾಗಿವೆ, ಇಂತಹ ಸಮಯದಲ್ಲೇ ಗಡಿ ಗ್ರಾಮದ ಜನರಲ್ಲಿ ಭಯ ಶುರುವಾಗಿದೆ.
ಯುದ್ಧ ಶುರುವಾದರೆ ದೊಡ್ಡ ನಷ್ಟ ಗ್ಯಾರಂಟಿ, ಆದರೆ ಭಾರತದ ಕಾಶ್ಮೀರಕ್ಕೆ ಉಗ್ರರು ನುಗ್ಗಿ ಸೃಷ್ಟಿ ಮಾಡಿದ್ದ ಅವಾಂತರ ದೊಡ್ಡ ತಲ್ಲಣ ಎಬ್ಬಿಸಿದೆ. ಹೀಗಿದ್ದಾಗ, ಅಲರ್ಟ್ ಆಗಿರುವ ಭಾರತೀಯ ಸೇನೆ ಈ ಬಾರಿ ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ನಿರ್ಧರಿಸಿದೆ. ಆದರೆ ಪಾಕಿಸ್ತಾನ ಯುದ್ಧ ಶುರುವಾಗುವುದಕ್ಕೂ ಮೊದಲೇ ಭಯಗೊಂಡು ಕೂತಿದೆ, ಇಷ್ಟೆಲ್ಲದರ ನಡುವೆ ಗಡಿಯಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಕಿಚ್ಚು ಹೊತ್ತಿಕೊಳ್ಳಬಹುದು ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಹಣ ಇರುವ ಸ್ಥಿತಿವಂತರು ಬೇರೆ ಬೇರೆ ಪ್ರದೇಶಗಳಿಗೆ ಎಸ್ಕೇಪ್ ಆಗಿದ್ದಾರೆ, ಆದರೆ ದುಡ್ಡೇ ಇಲ್ಲದ ಬಡವರು ಮಾತ್ರ ಅದೇ ಕಾಶ್ಮೀರದ ಗಡಿಯಲ್ಲಿ ನರಳುತ್ತಿದ್ದಾರೆ.

ಪರಿಸ್ಥಿತಿ ಭೀಕರ, ಯುದ್ಧ ಗ್ಯಾರಂಟಿ?
ಯುದ್ಧ ಶುರುವಾಗುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಗದೇ ಇದ್ದರೂ, ಆದಷ್ಟು ಬೇಗ ದೊಡ್ಡದಾಗಿ ಕಾರ್ಯಾಚರಣೆ ನಡೆಯಲಿದೆ ಎಂಬುದು ಗ್ಯಾರಂಟಿ. ಇದೇ ಕಾರಣಕ್ಕೆ ಗಡಿಯಲ್ಲಿ ಎರಡೂ ದೇಶಗಳು ಅಲರ್ಟ್ ಆಗಿ ನಿಂತಿವೆ, ಯಾವುದೇ ಪರಿಸ್ಥಿತಿ ಬಂದರೂ ಅದನ್ನ ಎದುರಿಸುವಂತೆ ಭಾರತ ಸರ್ಕಾರ ಭಾರತೀಯ ಸೇನೆಗೆ ಸ್ವತಂತ್ರ ನೀಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ ಗಡಿಯಲ್ಲಿರುವ ಜನರು ಮಾತ್ರ ಯುದ್ಧಕ್ಕೆ ಹೆದರಿ ಕೂತಿದ್ದಾರೆ, ಮುಂದೆ ಏನಪ್ಪಾ ಪರಸ್ಥಿತಿ ಅಂತಿದ್ದಾರೆ.












Click it and Unblock the Notifications