ಆದಾಯ ಎಲ್ಲಿಂದ, ಖರ್ಚು ಎಲ್ಲಿಗೆ: ಪೈಸಾವಾರು ಲೆಕ್ಕದಲ್ಲಿ
ನವದೆಹಲಿ, ಫ್ರೆಬ್ರವರಿ 1: ಬುಧವಾರ, ಲೋಕಸಭೆಯಲ್ಲಿ ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿಯವರು 2017-18ನೇ ವರ್ಷದ ವಿತ್ತೀಯ ಬಜೆಟ್ ಮಂಡಿಸಿದ್ದಾರೆ.
ಬಜೆಟ್ ನಲ್ಲಿ ಮಧ್ಯಮ ವರ್ಗಕ್ಕೆ ಉಪಯೋಗವಾಗುವ ಕೆಲವಾರು ತೆರಿಗೆ ಕಡಿತದಂತಹ ಘೋಷಣೆಗಳನ್ನು ಮಾಡಲಾಗಿದೆ. ಇನ್ನು ತಂಬಾಕು ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲಾಗಿದೆ.
ಇಂಥ ಹಲವಾರು ಸರ್ಕಸ್ ಗಳ ನಡುವೆ ವಿತ್ತ ಸಚಿವ ಅರುಣ್ ಜೇಟ್ಲಿಯವರು ಆದಾಯವನ್ನು ಹೇಗೆ ತರುತ್ತಾರೆ, ಬಂದ ಆದಾಯದಲ್ಲಿ ಖರ್ಚುಗಳನ್ನು ಹೇಗೆ ನಿಭಾಯಿಸುತ್ತಾರೆ. ಆ ನಿಟ್ಟಿನಲ್ಲಿ ಖರ್ಚು ಯಾವ್ಯಾವ ರೀತಿಯಲ್ಲಿ ಇವೆ. ಇದೆಲ್ಲರದ ಸಂಕ್ಷಿಪ್ತ ರೂಪವನ್ನು ಪೈಸೆಗಳ ಆಧಾರದಲ್ಲಿ ಇಲ್ಲಿ ನೀಡಲಾಗಿದೆ. ಇದು ಬಜೆಟ್ ಅನ್ನು ಒಟ್ಟಾರೆಯಾಗಿ ಅರ್ಥ ಮಾಡಿಕೊಳ್ಳಲು ನೆರವಾಗಲಿದೆ.
ಆದಾಯ ಹೀಗಿದೆ: ಕೇಂದ್ರಕ್ಕೆ ಪ್ರಮುಖವಾಗಿ ಆದಾಯ ಹರಿದು ಬರುವ ದಾರಿಯೆಂದರೆ ಅದು ಸಾಲ ವಸೂಲಾತಿ ಹಾಗೂ ಕಾರ್ಪೊರೇಟ್ ತೆರಿಗೆಯಿಂದ. ಅದಾದ ಮೇಲೆ, ವೈಯಕ್ತಿಕ ಆದಾಯ ತೆರಿಗೆಯು ಕೇಂದ್ರಕ್ಕೆ ಮಹತ್ವದ ಆದಾಯ ತಂದುಕೊಡುವ ಮತ್ತೊಂದು ವಿಭಾಗ. ಇನ್ನುಳಿದಂತೆ, ಅಬಕಾರಿ, ಸೇವಾ ತೆರಿಗೆಗಳಿಂದಲೂ ಗಣನೀಯ ಮಟ್ಟದಲ್ಲಿ ಕೇಂದ್ರ ಸರ್ಕಾರಕ್ಕೆ ಆದಾಯ ಹರಿದು ಬರುತ್ತದೆ. ಈ ಆದಾಯದ ಒಟ್ಟಾರೆ ಚಿತ್ರಣ ಪೈಸೆಗಳ ಲೆಕ್ಕದಲ್ಲಿ ಇಲ್ಲಿ ನೀಡಲಾಗಿದೆ.

- ಸಾಲ ವಸೂಲಾತಿ ಹಾಗೂ ಉದ್ದಿಮೆಗಳ ಮೂಲಕ 19 ಪೈ.
- ಕಾರ್ಪೊರೇಟ್ ತೆರಿಗೆಯಿಂದ 19 ಪೈ.
- ಆದಾಯ ತೆರಿಗೆಯಿಂದ 16 ಪೈ.
- ಕೇಂದ್ರ ಅಬಕಾರಿ ಸುಂಕದಿಂದ 14 ಪೈ.
- ಸೇವಾ ತೆರಿಗೆ ಹಾಗೂ ಇತರೆ ತೆರಿಗೆಗಳಿಂದ 10 ಪೈ.
- ತೆರಿಗೆ ವ್ಯಾಪ್ತಿಗೊಳಪಡದ ಕಂದಾಯ 10 ಪೈ.
- ಸಾಲವಲ್ಲದ ಇತರೆ ಮೂಲಗಳಿಂದ ಬರುವ ಆದಾಯ 3 ಪೈ.
ಖರ್ಚು ಹೀಗಿದೆ: ಕೇಂದ್ರ ಸರ್ಕಾರಕ್ಕೆ ಬರುವ ಆದಾಯದಲ್ಲಿ ಶೇ. 24ರಷ್ಟು ಆದಾಯ ರಾಜ್ಯಗಳಿಗೆ ತೆರಿಗೆ ರೂಪದಲ್ಲೇ ಹಂಚಿಹೋಗುತ್ತದೆ. ಇದಾದ ನಂತರ, ವಿವಿಧ ಸಾಲಗಳಿಗಾಗಿ ಭಾರತ ಕಟ್ಟಬೇಕಿರುವ ಬಡ್ಡಿ, ಕೆಲವಾರು ಯೋಜನೆಗಳಿಗಾಗಿ ನೀಡಲಾಗುವ ಅನುದಾನ... ಹೀಗೆ, ನಾನಾ ಕಾರಣಗಳಿಂದಾಗಿ ಹಣ ಹರಿದು ಹೋಗುತ್ತದೆ. ಒಂದು ರುಪಾಯಿಯಲ್ಲಿ ಯಾವ ಯಾವ ವಲಯಗಳಿಗೆ ಎಷ್ಟೆಷ್ಟು ಖರ್ಚು ಇದೆ ಎನ್ನುವುದನ್ನು ಇಲ್ಲಿ ಪೈಸೆಗಳ ಮೂಲಕ ತೋರಿಸಲಾಗಿದೆ.

- ತೆರಿಗೆ ಹಾಗೂ ಸುಂಕಗಳಲ್ಲಿ ರಾಜ್ಯಗಳ ಪಾಲು 24 ಪೈ.
- ಬಡ್ಡಿ ಸಲ್ಲಿಕೆಗೆ 18 ಪೈ.
- ಇತರೆ ಖರ್ಚು ವೆಚ್ಚ 13 ಪೈ.
- ಕೇಂದ್ರೀಯ ವಲಯಾವಾರು ಯೋಜನೆಗಳಿಗೆ 11 ಪೈ.
- ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೆ 10 ಪೈ.
- ಸಬ್ಸಿಡಿಗಳಿಗೆ 10 ಪೈ.
-ಭದ್ರತಾ ಇಲಾಖೆಗೆ 9 ಪೈ.
-ಆರ್ಥಿಕ ಕಮೀಷನ್ ಹಾಗೂ ಇತರೆ ವರ್ಗಾವಣೆಗಳಿಗೆ 5 ಪೈ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications