ಚಿತ್ರಗಳು:ಕೃಷ್ಣ ಜನ್ಮಾಷ್ಟಮಿ ವಿಶೇಷ ದೇಶದ ವಿವಿಧೆಡೆಗಳಲ್ಲಿ ಸಂಭ್ರಮ
ಬೆಂಗಳೂರು, ಆಗಸ್ಟ್ 25: ಕೃಷ್ಣಂ ವಂದೇ ಜಗದ್ಗುರಂ, ಕೃಷ್ಣ ನೀ ಬೇಗನೆ ಬಾರೋ...ಎಂಬ ನಾಮಾಮೃತಗಳು ಭಕ್ತ ಮನೆ ಮನಗಳಲ್ಲಿ ಇಂದು ಮೊಳಗುತ್ತಿದೆ. ಜಗದೇಕ ಪಿತ ಕೃಷ್ಣನ ಹುಟ್ಟುಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದೇಶ, ಭಾಷೆ, ಪ್ರಾಂತ್ಯ, ಗಡಿ ಮೀರಿದ ಭಕ್ತಿ ಭಾವದಿಂದ ಕೃಷ್ಣನ ಭಜನೆ ಮಾಡುತ್ತಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ವೈವಿಧ್ಯತೆ, ಭಿನ್ನತೆ ಕಂಡು ಬಂದರೂ ಭಕ್ತಿಭಾವ ಮಾತ್ರ ಎಲ್ಲೆಡೆ ಒಂದೇ ರೀತಿಯಾಗಿರುತ್ತದೆ. ಉಡುಪಿ, ಮಥುರಾ, ಪಂಡರಾಪುರ, ಗುರುವಾಯೂರು, ದ್ವಾರಕಾ ಸೇರಿದಂತೆ ಅನೇಕ ಕಡೆಗಳಲ್ಲಿ ಕೃಷ್ಣ ದೇಗುಲಗಳು ಸಂಭ್ರಮ, ಸಡಗರ ಮನೆ ಮಾಡಿದೆ. [ಗ್ಯಾಲರಿ: ಜನ್ಮಾಷ್ಟಮಿ ಸಂಭ್ರಮ]
ಮಥುರಾ ನಗರದ್ದಲ್ಲಂತೂ ಹಿಂದೂ ಮುಸ್ಲಿಮರು ಕಲೆತು ಒಟ್ಟಿಗೆ ಕೃಷ್ಣನ ಸೇವೆಗೆ ನಿಲ್ಲುತ್ತಾರೆ, ಕರ್ನಾಟಕದ ವಿವಿಧೆಡೆ ಮುಸ್ಲಿಂ ಬಾಂಧವರ ಮಕ್ಕಳು ಕೂಡಾ ನವನೀತ ಚೋರ ಕೃಷ್ಣನ ವೇಷ ಧರಿಸಿ ಈ ದಿನ ಸಂಭ್ರಮಿಸುತ್ತಾರೆ.[ಈ ಮುಸ್ಲಿಂ ಕುಟುಂಬದಲ್ಲಿ 30ನೇ ಕೃಷ್ಣ ಜನ್ಮಾಷ್ಟಮಿ ಸಂಭ್ರಮ]
ಕೃಷ್ಣನನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದು ದಾಸ್ಯವರೇಣ್ಯರು ಹೇಳುತ್ತಾರೆ. ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಯ ಕೆಲ ಚಿತ್ರಗಳು ಇಲ್ಲಿವೆ ನೋಡಿ ಅನಂದಿಸಿ... ಚಿತ್ರಗಳ ಕೃಪೆ: ಪಿಟಿಐ

ಮೊಸರಿನ ಕುಡಿಕೆ ಒಡೆಯಲು ಸಜ್ಜಾದ ಮಹಿಳಾ ಭಕ್ತರು
ಮುಂಬೈನಲ್ಲಿ ಮೊಸರಿನ ಕುಡಿಕೆ ಒಡೆಯಲು ಸಜ್ಜಾದ ಮಹಿಳಾ ಭಕ್ತರು ಪಿರಿಮೀಡ್ ರಚನೆ ಮಾಡಿದ್ದಾರೆ. ಜೊತೆಗೆ ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂಬ ಸಂದೇಶ ಸಾರಿದ್ದಾರೆ.

ಆಗ್ರಾದಲ್ಲಿ ವಾಸುದೇವನ ಜತೆ ಬಾಲಕೃಷ್ಣ
ಆಗ್ರಾದಲ್ಲಿ ವಾಸುದೇವನಂತೆ ದಿರಿಸು ತೊಟ್ಟ ಭಕ್ತನೊಬ್ಬ ಬಾಲಕೃಷ್ಣನನ್ನು ಹೊತ್ತು ನದಿ ದಾಟುತ್ತಿದ್ದಾರೆ.

ಮಥುರಾನಗರಿ ಜನ್ಮಾಷ್ಟಮಿ ಸಂಭ್ರಮಕ್ಕೆ ಸಜ್ಜು
ಮಥುರಾನಗರಿ ಜನ್ಮಾಷ್ಟಮಿ ಸಂಭ್ರಮಕ್ಕೆ ಸಜ್ಜಾಗಿದ್ದು ಹೀಗೆ

ಪಟಿಯಾಲದಲ್ಲಿ ಫುಟ್ಬಾಲ್ ಆಡಿದ ಬಾಲಕೃಷ್ಣರು
ಪಟಿಯಾಲದಲ್ಲಿ ಬಾಲಕೃಷ್ಣ ವೇಷಧಾರಿಗಳು ಶಾಲೆ ಸಮಯದಲ್ಲಿ ಫುಟ್ಬಾಲ್ ಆಡಿ ಆನಂದಿಸಿದರು.

ಅಜ್ಮೇರ್ ನಲ್ಲಿ ಸೆಲ್ಫಿ ಕೃಷ್ಣ ಹಾಗೂ ರಾಧೆಯರು
ರಾಜಸ್ಥಾನದಲ್ಲಿ ಅಜ್ಮೇರ್ ನಲ್ಲಿ ಕೃಷ್ಣ ಜನ್ಮಾಷ್ಟಮಿಯಲ್ಲಿ ಸೆಲ್ಫಿ ಕೃಷ್ಣ ಹಾಗೂ ರಾಧೆಯರು

ರಾಜಸ್ಥಾನದ ಬೀವಾರ್ ನಲ್ಲಿ ಕೃಷ್ಣ
ರಾಜಸ್ಥಾನದ ಬೀವಾರ್ ನಲ್ಲಿ ಕೃಷ್ಣ ವೇಷ ಸ್ಪರ್ಧೆಗಾಗಿ ತಯಾರಾದ ಪುಟ್ಟ ಬಾಲಕ.

ಶ್ರೀಕೃಷ್ಣ ಚರಿತೆಯನ್ನು ಸಾರುವ ನಾಟಕ
ನವದೆಹಲಿ: ಶ್ರೀಕೃಷ್ಣ ಚರಿತೆಯನ್ನು ಸಾರುವ ನಾಟಕ ಪ್ರದರ್ಶಿಸಿದ ಡಿಎವಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು.

ಕೃಷ್ಣ ರಾಧೆ ವೇಷ ಭೂಷಣ ಸ್ಪರ್ಧೆ
ಕೃಷ್ಣ ರಾಧೆ ವೇಷ ಭೂಷಣ ಸ್ಪರ್ಧೆ ದೇಶದ ವಿವಿಧೆಡೆ ಆಯೋಜಿಸಲಾಗುತ್ತದೆ. ಇದು ರಾಜಸ್ಥಾನಿ ಶೈಲಿ ಜೋಡಿ

ಪಾಟ್ನದಲ್ಲಿ ಪಾಠ ಕಲಿಯುತ್ತಿರುವ ಕೃಷ್ಣ ವೇಷಧಾರಿಗಳು
ಪಾಟ್ನದ ಶಾಲೆಯೊಂದರಲ್ಲಿ ಪಾಠ ಕಲಿಯುತ್ತಿರುವ ಕೃಷ್ಣ ವೇಷಧಾರಿಗಳು
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications