ಇರಾಕಿ ಉಗ್ರರ ಕಣ್ಣು ಈಗ ಭಾರತದ ಮೇಲೆ!
ನವದೆಹಲಿ, ಜೂ.18: ಇರಾಕಿನ ಉಗ್ರ ಸಂಘಟನೆ ಐಎಸ್ಐಎಸ್ ಕಣ್ಣು ಈಗ ಭಾರತದತ್ತ ಬಿದ್ದಿದೆ. ಬೆಂಗಳೂರು ಸೇರಿದಂತೆ ದೇಶಾದ್ಯಂತ ಭಯೋತ್ಪಾದಕ ದಾಳಿಗಳ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ವಿಧಿಸಲಾಗಿದೆ.
ಬೆಂಗಳೂರು,
ಮುಂಬೈ,
ದೆಹಲಿ,
ಚೆನ್ನೈ,
ಹೈದ್ರಾಬಾದ್,
ಕೋಲ್ಕತ್ತಾ
ಹಾಗೂ
ಅಹ್ಮದಾಬಾದ್
ಸೇರಿದಂತೆ
ಅನೇಕ
ಮಹಾನಗರಗಳಲ್ಲಿ
ಕಟ್ಟೆಚ್ಚರದ
ಬಿಗಿ
ಭದ್ರತೆ
ಘೋಷಿಸಲಾಗಿದೆ.
ದೇಶದ
ಪ್ರಮುಖ
ಸ್ಥಳಗಳ
ವಿಮಾನ
ನಿಲ್ದಾಣ,
ರೈಲ್ವೇ
ನಿಲ್ದಾಣ,
ಸ್ಟಾರ್
ಹೊಟೇಲ್ಗಳು
ಸೇರಿದಂತೆ
ವಿವಿಧ
ಪ್ರದೇಶಗಳಲ್ಲಿ
ಕಟ್ಟೆಚ್ಚರ
ವಹಿಸಲಾಗಿದೆ.
ದೇಶದ ಅಲ್ಪಸಂಖ್ಯಾತ ಸಮುದಾಯದ ಹಲವಾರು ಯುವಕರಿಗೆ ಐಎಸ್ಐಎಸ್ ಉಗ್ರ ಸಂಘಟನೆಯಿಂದ ಭಾರೀ ಆಮಿಷಗಳು ಬರುತ್ತಿದ್ದು, ಅವರನ್ನೆಲ್ಲ ಸಂಘಟನೆಗೆ ಸೇರುವಂತೆ ಉತ್ತೇಜಿಸಲಾಗುತ್ತಿದೆ. ಆದರೆ ಐಸೀಸ್ ಸಂಘಟನೆಯ ಚಟುವಟಿಕೆಗಳಿಗೆ ದೇಶವಾಸಿ ಜನತೆಯಿಂದ ಹೆಚ್ಚಿನ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಇಲಾಖೆ ಹೇಳಿದೆ.
ಇರಾಕಿ ಉಗ್ರ ಸಂಘಟನೆಯ ಪರ ಟ್ವಿಟ್ಟರ್ ಖಾತೆ ನಿರ್ವಹಣೆ ನಡೆಸುತ್ತಿದ್ದ ಮೆಹದಿ ಬೆಂಗಳೂರಿನಲ್ಲಿ ಬಂಧನವಾಗಿದ್ದು ಎಂಬುದನ್ನು ಮರೆಯುವಂತಿಲ್ಲ.
ಮುಂಬೈಯ ಕಲ್ಯಾಣ್ನಿಂದ ಸಿರಿಯಾಕ್ಕೆ ತೆರಳಿದ್ದ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೈಕಿ ಆರೀಬ್ ಮಜೀದ್ ಎಂಬ ಯುವಕ ಅಲ್ಲಿಂದ ಮುಂಬೈಗೆ ಹಿಂದಿರುಗಿದ್ದು ಸಧ್ಯ ಪೊಲೀಸರ ವಶದಲ್ಲಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ ಈ ಬಗ್ಗೆ ತೀವ್ರ ತನಿಖೆ ನಡೆಸುತ್ತಿದೆ.