ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕಿಲ್ಲ ಉತ್ತರ
ಬೆಂಗಳೂರು, ಮಾ, 18: ದೇಶದೆಲ್ಲೆಡೆ ದಕ್ಷ ಅಧಿಕಾರಿ ಸಾವಿನ ಬಗ್ಗೆಯೇ ಚರ್ಚೆ. ಸಿಬಿಐ ಗೆ ಒಪ್ಪಿಸಬೇಕು ಎಂಬ ಒತ್ತಾಯ. ರಾಜಕಾರಣಿಗಳ ಆರೋಪ-ಪ್ರತ್ಯಾರೋಪ, ವಿಭಿನ್ನ ಹೇಳಿಕೆಗಳು ಊಹಾಪೋಹಗಳು ಇವೇ ಮೊದಲಾದ ಸಂಗತಿಗಳು ಡಿಕೆ ರವಿ ಸಾವಿನ ಸುತ್ತ ಗಿರಕಿ ಹೊಡೆಯುತ್ತಿವೆ.
ಆದರೆ ಒಡೆಯನ ಅಗಲಿಕೆಯಿಂದ ತತ್ತರಿಸಿದ್ದ ಡಿ.ಕೆ. ರವಿ ಅವರ ಪ್ರೀತಿಯ ಶ್ವಾನ ರೋನಿ ಏನನ್ನು ಹೇಳುತ್ತಿದೆ? ಯಾರಿಗೂ ಗೊತ್ತಿಲ್ಲ. ಶವಪೆಟ್ಟಿಗೆಗೆ ಒರಗಿ ತನ್ನದೇ ಮೂಕ ಭಾಷೆಯಲ್ಲಿ ಆಕ್ರಂದನ ಮಾಡುತ್ತಿದ್ದ ದೃಶ್ಯಕ್ಕೆ ಅರ್ಥ ಹುಡುಕಲು ಹೋದರೆ ಅತಿದೊಡ್ಡ ಮುರ್ಖತನವಾದೀತು.[ಅಂತಿಮ ಯಾತ್ರೆಯ ಚಿತ್ರಗಳು]

ಡಿಕೆ ರವಿಯವರ ಅಂತಿಮ ದರ್ಶನದ ವೇಳೆ ಸಾಕು ನಾಯಿ ನಡೆದುಕೊಂಡ ರೀತಿ ವಾತಾವರಣದಲ್ಲಿ ತುಂಬಿದ್ದ ದುಃಖಕ್ಕೆ ಸಾಕ್ಷಿಭೂತವಾಗಿ ನಿಂತಿತ್ತು. ರೋನಿಯ ಕಣ್ಣೀರು ಮನೆಯೊಡೆಯನ ಅಗಲಿಕೆಯ ನೋವನ್ನು ಸಾರಿ ಸಾರಿ ಹೇಳುತ್ತಿತ್ತು. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]
ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದಾರೆ. ಡಿಕೆ ರವಿ ಪ್ರಕರಣವನ್ನು ತಮ್ಮ ತಮ್ಮ ಲಾಭಕ್ಕೆ ಬಳಸಿಕೊಳ್ಳಲು 'ಹೊಂಚು; ಹಾಕಿರುವವರ ಸಂಖ್ಯೆಗೂ ಕಡಿಮೆಯಿಲ್ಲ. ಸಿನಿಮಾ ಮಾಡಲು ಸಿದ್ಧತೆ ಆರಂಭವಾಗಿದೆ. ಸಿಬಿಐ ತನಿಖೆಗೆ ಒಪ್ಪಿಸಿ ಎಂಬ ಬಲವಾದ ಕೂಗು ಕೇಳಿ ಬರುತ್ತಿದೆ. ಆದರೆ ನಾಯಕರು ಹಾಕುತ್ತಿರುವ ಮೊಸಳೆ ಕಣ್ಣೀರಿಗಿಂತ ನಾಯಿಯ ಮೌನವೇ ಎಷ್ಟೋ ವಾಸಿ![ಮರಣೋತ್ತರ ಪರೀಕ್ಷೆ ವರದಿ :ಡಿಕೆ ರವಿ ಉಸಿರುಗಟ್ಟಿ ಸಾವು]

ಡಿಕೆ ರವಿ ಅಂತಿಮ ದರ್ಶನದ ವೇಳೆ ಒಡೆಯನ ಪೆಟ್ಟಿಗೆ ಕಾಲು ನೀಡಿ ತಲೆ ಅಲ್ಲಾಡಿಸುತ್ತಿದ್ದ ಶ್ವಾನಕ್ಕೆ ಯಾವ ಭಾಷೆಯಲ್ಲಿ ಸಮಾಧಾನ ಹೇಳಲು ಸಾಧ್ಯ? ರವಿ ಮಣ್ಣಾಗಿ ಹೋಗಿದ್ದಾರೆ. ಆದರೆ ನೋವಿನ್ನು ಹಾಗೆ ಉಳಿದುಕೊಂಡಿದೆ. ಮನೆಯ ಸದಸ್ಯರಲ್ಲಿಯೇ ಒಬ್ಬಳಾದ ರೋನಿಗೂ ಅಗಲಿಕೆಯ ಅನುಭವವಾಗಿದೆ.
ಯಾವ ಬಗೆಯಲ್ಲೂ ಅರ್ಥೈಸಿದರೂ ನಾಯಿಯ ಭಾವನೆಗೆ, ಪ್ರಶ್ನೆಗೆ ಉತ್ತರ ದೊರೆಯಲಾರದು. ಇಷ್ಟು ದಿನ ಓಡಾಡಿಕೊಂಡಿದ್ದ ಯಜಮಾನ ಇದ್ದಕ್ಕಿದ್ದ ಹಾಗೆ ಕಣ್ಮರೆಯಾದುದಕ್ಕೆ ಕಾರಣವೇನು? ನಾಯಕನ ದುರ್ಮರಣದ ಹಿಂದಿನ ಕಾಣದ ಕೈಗಳು ಯಾವವು? ಅಪರಾಧಿಗಳನ್ನು ಕೂಡಲೇ ಹಿಡಿಯಿರಿ? ಎಂದು ಕೂಗಾಡಲು ನಾಯಿಗೆ ಮಾತು ಬರಲ್ಲ. ಆದರೆ ರೋನಿಯ ಮೌನವೇ ಈ ಎಲ್ಲ ಒತ್ತಾಯಗಳನ್ನೂ ಮೀರಿದ್ದು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications