ಆಕ್ಸಿಸ್ ಬ್ಯಾಂಕ್ ನ 20 ನಕಲಿ ಖಾತೇಲಿ 60 ಕೋಟಿ ಪತ್ತೆ
ನೋಟು ನಿಷೇಧ ಘೋಷಣೆ ನಂತರ ಆಕ್ಸಿಸ್ ಬ್ಯಾಂಕ್ ನ ಶಾಖೆಗಳಲ್ಲಿ ಪದೇಪದೇ ಅವ್ಯವಹಾರ ಕಂಡುಬರುತ್ತಿದೆ. ಚಾಂದಿನಿ ಚೌಕ್ ಶಾಖೆಯ ನಕಲಿ ಖಾತೆಗಳಲ್ಲಿ ನೂರು ಕೋಟಿ ಪತ್ತೆಯಾಗಿತ್ತು. ಈಗ ನೋಯಿಡಾದಲ್ಲಿ ಅರವತ್ತು ಕೋಟಿಯಷ್ಟು ಸಿಕ್ಕಿ ಹಾಕಿಕೊಂಡಿದೆ
ನೋಯಿಡಾ, ಡಿಸೆಂಬರ್ 15: ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ನಡೆದಿರುವ ಮತ್ತೊಂದು ಹಗರಣ ಬೀದಿಗೆ ಬಂದಿದೆ. ಇಪ್ಪತ್ತು ನಕಲಿ ಖಾತೆಗಳನ್ನು ಮಾಡಿ, ಅದರಲ್ಲಿ ಹಾಕಿದ್ದ 60 ಕೋಟಿ ರುಪಾಯಿಯನ್ನು ಪತ್ತೆ ಹಚ್ಚಿದ್ದಾರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು. ಈ ಹಗರಣ ಪತ್ತೆಯಾಗಿರುವುದು ಗುರುವಾರ, ಆಕ್ಸಿಸ್ ಬ್ಯಾಂಕ್ ನ ನೋಯಿಡಾ ಶಾಖೆಯಲ್ಲಿ.
ಈ ಖಾತೆಗಳಲ್ಲಿ ಕ್ರಮಬದ್ಧವಾಗಿ ಹಣ ತುಂಬಲಾಗಿದೆ. ಆದರೆ ಈ ಖಾತೆಗಳು ಇದ್ದಿದ್ದು ಕಡಿಮೆ ಆದಾಯದ ನೌಕರರು ಹಾಗೂ ಕೆಲಸಗಾರರ ಹೆಸರಿನಲ್ಲಿ. ಈ ಖಾತೆಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಗೆ ಗುಮಾನಿ ಬಂದಿದ್ದು ಕೂಡ ಆಸಕ್ತಿಕರವಾಗಿದೆ. ನೋಯಿಡಾದ ಆಭರಣ ವ್ಯಾಪಾರಿಯೊಬ್ಬರು ನವೆಂಬರ್ 8ರ ನಂತರ 600 ಕೋಟಿ ಮೊತ್ತದ ಚಿನ್ನ ಮಾರಿದ್ದರು. ಆ ಹಣವನ್ನು ಇದೇ ನೋಯಿಡಾ ಶಾಖೆಯಲ್ಲಿ ತುಂಬಿದ್ದರು.[ಆಕ್ಸಿಸ್ ಬ್ಯಾಂಕ್ ಪರವಾನಗಿ ರದ್ದು ಸುದ್ದಿ ರದ್ದಿ]

ಸಾಂದರ್ಭಿಕ ಚಿತ್ರ
ಮಧ್ಯಾಹ್ನ 12.30ರ ವೇಳೆಯಲ್ಲೂ ಪರಿಶೀಲನೆ ಮುಂದುವರಿದಿತ್ತು. ಬ್ಯಾಂಕ್ ಶಾಖೆ ಹೊರಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ಹಾಕಲಾಗಿತ್ತು. ಕೆಲ ದಿನಗಳ ಹಿಂದೆ ಚಾಂದಿನಿ ಚೌಕ್ ನ ಆಕ್ಸಿಸ್ ಬ್ಯಾಂಕ್ ಶಾಖೆಯ ನಲವತ್ನಾಲ್ಕು ಅನುಮಾನಾಸ್ಪದ ಖಾತೆಗಳಲ್ಲಿ ನೂರು ಕೋಟಿ ರುಪಾಯಿ ಪತ್ತೆ ಹಚ್ಚಲಾಗಿತ್ತು.[ಚಾಂದಿನಿ ಚೌಕ್ ಶಾಖೆ ಬ್ಯಾಂಕ್ ನಕಲಿ ಖಾತೆಗಳಲ್ಲಿ ಸಿಕ್ಕಿದ್ದು 100 ಕೋಟಿ!]
ನೋಟು ಬದಲಾವಣೆ ವೇಳೆ ಆಕ್ಸಿಸ್ ಬ್ಯಾಂಕ್ ನಲ್ಲಿ ಪದೇ ಪದೇ ಇಂಥ ನಿಯಮಬಾಹಿರ ಸಂಗತಿಗಳು ನಡೆಯುತ್ತಿರುವುದರಿಂದ, 'ಎಲ್ಲವೂ ಸರಿಯಾಗಿ ಇರೋ ಹಾಗೆ ನೋಡಿಕೊಳ್ಳಿ' ಎಂದು ಸರಕಾರ ಆ ಬ್ಯಾಂಕ್ ಗೆ ಎಚ್ಚರಿಕೆ ನೀಡಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications