Get Updates
Get notified of breaking news, exclusive insights, and must-see stories!

ಮುರ್ಮು ರಾಷ್ಟ್ರಪತಿಯಾದರೆ ಒಂದೇ ಕಲ್ಲಿನಲ್ಲಿ ಮೂರುಹಕ್ಕಿ ಹೊಡೆಯಬಹುದೇ?

ನವದೆಹಲಿ. ಜೂನ್ 13: ಭಾರತದ ಮುಂದಿನ ರಾಷ್ಟ್ರಪತಿ ಯಾರು ಎಂಬ ಪ್ರಶ್ನೆಗೆ ಇನ್ನು ಒಂದೂವರೆ ತಿಂಗಳಿನಲ್ಲಿ ಉತ್ತರ ದೊರೆಯಲಿದೆ. ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಇದೀಗ ಬಿರುಸಿನ ಚಟುವಟಿಕೆ ಆರಂಭವಾಗಿದ್ದು. ಆಡಳಿತ ಪಕ್ಷ ಬಿಜೆಪಿ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂಬುದು ಈಗಲೂ ಕಗ್ಗಂಟಾಗಿಯೇ ಉಳಿದಿದೆ.

ಹಲವು ಪ್ರಮುಖರ ಹೆಸರು ಬಿಜೆಪಿ ಪಾಳೇಯದಲ್ಲಿ ಕೇಳಿಬರುತ್ತಿದ್ದರೂ, ಯಾವಾಗಲೂ ಅಚ್ಚರಿ ನೀಡುವುದರಲ್ಲಿ ನಿಸ್ಸೀಮರಾದ ಪ್ರಧಾನಿ ನರೇಂದ್ರ ಮೋದಿ, ಒಬ್ಬ ಅನಿರೀಕ್ಷಿತ ಅಭ್ಯರ್ಥಿಯನ್ನು ರಾಷ್ಟ್ರಪತಿ ಹುದ್ದೆಗೆ ಸೂಚಿಸಬಹುದು ಎಂಬುದು ಹಲವರ ಊಹೆ.

ಸುಷ್ಮಾ ಸ್ವರಾಜ್, ಟಿ.ಸಿ.ಗೆಹ್ಲೋಟ್, ಮುಂತಾದ ಗಣ್ಯಾತಿಗಣ್ಯರ ಹೆಸರು ರಾಷ್ಟ್ರಪತಿ ಗಾದಿಗೆ ಕೇಳಿಬರುತ್ತಿದ್ದರೂ, ಜಾರ್ಖಂಡ್ ರಾಜ್ಯಪಾಲರಾದ ದ್ರೌಪದಿ ಮುರ್ಮು ಅವರನ್ನೇ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗಳು ನಿಚ್ಛಳವಾಗಿದೆ. ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇ ಆದಲ್ಲಿ, ಬಿಜೆಪಿಗೆ ಹಲವು ರೀತಿಯಲ್ಲಿ ಉಪಯೋಗವಾಗಲಿದೆ.

ಓಡಿಶಾದ ಉಪರ್ಭೇದ ಎಂಬ ಗ್ರಾಮದ 58 ವರ್ಷದ ಮುರ್ಮು ಶಾಸಕರಾಗಿಯೂ ಕೆಲಸ ನಿರ್ವಹಿಸಿದವರು, ಸದ್ಯಕ್ಕೆ ಜಾರ್ಖಂಡ್ ನ ರಾಜ್ಯಪಾಲರಾಗಿರುವ ಇವರು ರಾಷ್ಟ್ರಪತಿಯಾದರೆ ಈ ಸಾಧನೆ ಮಾಡಿದ ಭಾರತದ ಮೊದಲ ಬುಡಕಟ್ಟು ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಬುಡಕಟ್ಟು ಜನಾಂಗದ ವಿಶ್ವಾಸ ಗಳಿಸಬಹುದು

ಬುಡಕಟ್ಟು ಜನಾಂಗದ ವಿಶ್ವಾಸ ಗಳಿಸಬಹುದು

ಈಗಾಗಲೇ ಬುಡಕಟ್ಟು ಸಮಾಜದ ವಿಶ್ವಾಸವನ್ನು ತೆಗೆದುಕೊಳ್ಳಲು ಹೆಣಗುತ್ತಿರುವ ಬಿಜೆಪಿಗೆ ದ್ರೌಪದಿ ಮುರ್ಮು, ಬುಡಕಟ್ಟು ಸಮುದಾಯದ ಮತವನ್ನು ಬಿಜೆಪಿಯತ್ತ ಸೆಳೆಯಲು ಸಹಾಯಕರಾಗುವುದು ಖಂಡಿತ. ಬುಡಕಟ್ಟು ಸಮುದಾಯಕ್ಕೆ ಬಿಜೆಪಿ ಕುರಿತು ಹೆಚ್ಚೇನೂ ಒಳ್ಳೆಯ ಅಭಿಪ್ರಾಯವಿಲ್ಲ. ಹೀಗಿರುವಾಗ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದರೆ, ಮುಂಬರುವ ಚುನಾವಣೆಗಳಲ್ಲಿ ಮತಕೇಳುವುದಕ್ಕೂ ಒಂದು ಅಸ್ತ್ರ ಸಿಕ್ಕಂತಾಗುತ್ತದೆ. ಬುಡಕಟ್ಟು ಜನಾಂಗದ ಪ್ರತಿನಿಧಿಯನ್ನು ದೇಶದ ಉನ್ನತ ಹುದ್ದೆಗೆ ಆರಿಸಿದ ಕೀರ್ತಿ ಬಿಜೆಪಿಗೆ ಸಿಕ್ಕಂತಾಗುತ್ತದೆ.

ಮಹಿಳೆಯರ ಮತ ಸೆಳೆಯಬಹುದು

ಮಹಿಳೆಯರ ಮತ ಸೆಳೆಯಬಹುದು

ಕೇವಲ ಬುಡಕಟ್ಟು ಜನಾಂಗ ಮಾತ್ರವಲ್ಲದೆ, ಮಹಿಳೆಯರನ್ನು ಓಲೈಸುವುದಕ್ಕೂ ಮುರ್ಮು ಆಯ್ಕೆ ಸಹಾಯಕವಾಗಲಿದೆ. ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಮಹಿಳೆಯನ್ನು ಆರಿಸಿದ ಹೆಗ್ಗಳಿಕೆಯೂ ಬಿಜೆಪಿಗೆ ದಕ್ಕಲಿದೆ.

ದಲಿತರ ಓಲೈಕೆ

ದಲಿತರ ಓಲೈಕೆ

ದ್ರೌಪದಿ ಮುರ್ಮು ದಲಿತ ಸಮುದಾಯದವರೂ ಆಗಿರುವುವದರಿಂದ, ದಲಿತ ಪರ ಎನ್ನುವ ವಿಪಕ್ಷ ಗಳಿಗೂ ಅವರ ವಿರುದ್ಧ ಮತ ಚಲಾಯಿಸುವುದು ಕಷ್ಟವಾಗಬಹುದು. ದಲಿತ ವಿರೋಧಿ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಬಿಜೆಪಿಗೂ ಮುರ್ಮು ಆಯ್ಕೆಯಿಂದ ಆ ಲೇಬಲ್ ಕಳಚಿಕೊಳ್ಳುವುದು ಸುಲಭವಾಗಬಹುದು. ಒಟ್ಟಿನಲ್ಲಿ ಮುರ್ಮು ಆಯ್ಕೆಯಿಂದ ಬಿಜೆಪಿ ಒಂದೇ ಕಲ್ಲಿನಲ್ಲಿ ಬುಡಕಟ್ಟು ಸಮುದಾಯ, ಮಹಿಳೆ ಮತ್ತು ದಲಿತ ಎಂಬ ಮೂರು ಹಕ್ಕಿಯನ್ನು ಹೊಡೆಯಬಹುದು ಎಂಬ ಲೆಕ್ಕಾಚಾರ ಹಾಕುತ್ತಿರುವುದು ದಿಟ.

ಇನ್ಯಾರಿದ್ದಾರೆ ಪಟ್ಟಿಯಲ್ಲಿ

ಇನ್ಯಾರಿದ್ದಾರೆ ಪಟ್ಟಿಯಲ್ಲಿ

ಮುರ್ಮು ಅವರೊಂದಿಗೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತನ್ವರ್ ಚಂದ್ ಗೆಹ್ಲೋಟ್ ಮತ್ತು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೆಸರು ರಾಷ್ಟ್ರಪತಿ ಅಭ್ಯರ್ಥಿ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಆದರೆ ಅರುಣ್ ಜೇಟ್ಲಿ ಅವರನ್ನು ರಾಷ್ಟ್ರಪತಿ ಹುದ್ದೆಗೆ ಸೂಚಿಸುವ ಸಾಧ್ಯತೆಗಳು ಕಡಿಮೆ ಇವೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ರಾಷ್ಟ್ರಪತಿ ಚುನಾವಣೆ ವೇಳಾಪಟ್ಟಿ

ರಾಷ್ಟ್ರಪತಿ ಚುನಾವಣೆ ವೇಳಾಪಟ್ಟಿ

ಅಧಿಸೂಚನೆಯ ದಿನಾಂಕ: ಜೂನ್ 14, 2017
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 28
ನಾಮಪತ್ರ ಪರಿಶೀಲನೆ: ಜೂನ್ 29
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ: ಜುಲೈ 1
ಚುನಾವಣಾ ದಿನಾಂಕ: ಜುಲೈ 17 (ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ)
ಫಲಿತಾಂಶದ ದಿನಾಂಕ: ಜುಲೈ 20

ಅಭ್ಯರ್ಥಿ ಆಯ್ಕೆಗಾಗಿ ತ್ರಿಸದಸ್ಯ ಪೀಠ

ಅಭ್ಯರ್ಥಿ ಆಯ್ಕೆಗಾಗಿ ತ್ರಿಸದಸ್ಯ ಪೀಠ

ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಚಿಸಿದ ತ್ರಿಸದಸ್ಯ ಸಮಿತಿಯಲ್ಲಿ ಘಟಾನುಘಟಿಗಳಾದ ಗೃಹ ಸಚಿವ ರಾಜನಾಥ್ ಸಿಂಗ್, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು, ವಿತ್ತ ಸಚಿವ ಅರುಣ್ ಜೇಟ್ಲಿ ಇದ್ದು, ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇವರ ತೀರ್ಮಾನವೇ ಅಂತಿಮವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+