ಒಂದು ಏಟಿಗೆ ಎರಡು ಏಟು : ಅಜಿತನ ತಿರುಗೇಟು
ನವದೆಹಲಿ, ಸೆ.30: 'ಒಂದು ಏಟಿಗೆ ಎರಡು ಏಟು' ಎಂಬ ನೀತಿಯನ್ನು ಗಡಿ ಭದ್ರತಾ ಪಡೆಗಳಿಗೆ ತಿಳಿಸಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್ ಎಸ್ ಎ) ಅಜಿತ್ ಡೋವಲ್. ಗಡಿಯಾಚೆಗಿನ ಕಿರುಕುಳವನ್ನು ಹತ್ತಿಕ್ಕಲು ಅಜಿತ್ ಅನುಸರಿಸಿದ ತಂತ್ರಗಳು ಎನ್ಎಸ್ಎ ನೀತಿ ನಿಯಮಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇದರ ಪರಿಣಾಮವೇ ಪಾಕಿಸ್ತಾನದ ಗಡಿಭಾಗದಲ್ಲಿ ನಡೆದ ಸರ್ಜಿಕಲ್ ಸ್ಟೈಕ್.
ಮಿಲಿಟರಿ ಕಾರ್ಯಾಚರಣೆಯ ಪ್ರಧಾನ ನಿರ್ದೇಶಕರು ಗುರುವಾರ ನೀಡಿದ ಮಾಹಿತಿಯನ್ನು ಗಮನಿಸಿದರೆ ಈ ನಾಜೂಕಾದ ದಾಳಿಯ ಹಿಂದಿನ ಶಕ್ತಿ ಅಜಿತ್ ಡೋವಲ್ ಎಂದು ತಿಳಿದು ಬರುತ್ತದೆ. ಅತ್ಯಂತ ಸೂಕ್ಷ್ಮವಾಗಿ ತಂತ್ರ ಹೆಣೆದು ಪೂರ್ವ ನಿಯೋಜಿತವಾಗಿ ದಾಳಿ ನಡೆಸಲಾಗಿದೆ.

ಯುಎಸ್ ಬೆಂಬಲ ಸಿಕ್ಕಿತು: ಅಜಿತ್ ಡೋವಲ್ ಹಾಗೂ ಯುಎಸ್ ನ ಸುಸಾನ್ ರೈಸ್ ನಡುವೆ ಇತ್ತೀಚೆಗೆ ನಡೆದ ಮಾತುಕತೆಯಲ್ಲಿ ಉರಿಯಲ್ಲಿ ನಡೆದ ಉಗ್ರರ ದಾಳಿ ಅದಕ್ಕೆ ಭಾರತ ಪ್ರತಿಕ್ರಿಯಿಸಬೇಕಾಗಿರುವ ರೀತಿಯ ಬಗ್ಗೆ ಚರ್ಚೆ ನಡೆಯಿತು. ಭಾರತ ತನ್ನ ಯೋಜನೆಯನ್ನು ಮೆಚ್ಚಿದ ಯುಎಸ್, ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗೆ ಬೆಂಬಲ ಇದೆ ಎಂದಿತ್ತು.
ಭಾರತದ ಕಾರ್ಯಾಚರಣೆಯನ್ನು ಯುಎಸ್ ವಕ್ತಾರ ಜಾನ್ ಕಿರ್ಬಿ ಕೂಡಾ ಟೀಕಿಸಿಲ್ಲ. ಉರಿ ಆಘಾತಕ್ಕೆ ಭಾರತ ನೀಡಿದ ಪ್ರತ್ಯುತ್ತರ ಭಯೋತ್ಪಾದನೆ ವಿರುದ್ಧವಾಗಿರುವುದರಿಂದ ಯುಎಸ್ ಬೆಂಬಲಿಸುತ್ತದೆ. ಆದರೆ, ಉಭಯ ಬಣಗಳು ನಿಯಂತ್ರಣದಲ್ಲಿರಲಿ ಎಂದಿದ್ದರು.
ಭಾರತದ ನಿಯಮದಲ್ಲಿ ಅಕ್ರಮಣಕಾರಿ: ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ವಿಷಯದಲ್ಲಿ ಭಾರತ ಅನುಸರಿಸುತ್ತಿದ್ದ ಅಲಿಪ್ತ ನೀತಿಯನ್ನು ಬದಿಗೊತ್ತಿ, ಭಾರತದ ನೀತಿ ನಿಯಮಗಳಲ್ಲಿ ಆಕ್ರಮಣಕಾರಿ ಬದಲಾವಣೆ ತರುವಲ್ಲಿ ಅಜಿತ್ ಡೋವಲ್ ಯಶಸ್ವಿಯಾಗಿದ್ದಾರೆ. ಗಡಿ ಭದ್ರತೆ ವಿಷಯದಲ್ಲಿ, ಭಯೋತ್ಪಾದನೆ ಹತ್ತಿಕ್ಕುವಲ್ಲಿ ವಿಳಂಬ ನೀತಿ ಅನುಸರಿಸಬಾರದು ಎಂಬ ಕಟ್ಟಾಜ್ಞೆ ಭಾರತೀಯ ಸೈನಿಕರಿಗೆ ಸಿಕ್ಕಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications