ಖಾನ್ ಗಳ ಚಿತ್ರಗಳನ್ನು ನಿಷೇಧಿಸಿ: ಸಾಧ್ವಿ ಪ್ರಾಚಿ ಕರೆ
ಡೆಹ್ರಾಡೂನ್, ಮಾ.2: ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ಸಾಧ್ವಿ ಪ್ರಾಚಿ ಅವರು ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಬಾಲಿವುಡ್ ನ ಖಾನ್ ತ್ರಯರು 'ಲವ್ ಜಿಹಾದ್' ಹಬ್ಬಿಸುತ್ತಿದ್ದಾರೆ ಅವರ ಚಿತ್ರಗಳನ್ನು ನಿಷೇಧಿಸಿ ಎಂದು ಸಾಧ್ವಿ ಕರೆ ನೀಡಿದ್ದರು.
ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ಅವರು ತಮ್ಮ ಚಿತ್ರಗಳ ಮೂಲಕ 'ಲವ್ ಜಿಹಾದ್' ಹರಡುತ್ತಿದ್ದಾರೆ. ಭಾರತದ ಯುವ ಜನತೆ ಹಾಳಾಗಲು ಇವರ ಚಿತ್ರಗಳೇ ಕಾರಣವಾಗಿದೆ. ['ಲವ್ ಜಿಹಾದ್' ವಿವಾದದಲ್ಲಿ ಯೋಗಿ ಆದಿತ್ಯಾನಾಥ್]
ಭಾನುವಾರ ಇಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸಮ್ಮೇಳನದಲ್ಲಿ ಮಾತನಾಡುತ್ತಾ, ಈ ಖಾನ್ ಗಳ ಚಿತ್ರಗಳ ಪೋಸ್ಟರ್ ಗಳನ್ನು ಗೋಡೆ ಮೇಲೆ ಬಿಡಬೇಡಿ ಎಂದು ಕರೆ ನೀಡಿದ್ದರು.
ಈ ಹಿಂದೆ ಯೋಗಿ ಆದಿತ್ಯಾನಾಥ್ ಅವರು ಕೂಡಾ ಲವ್ ಜಿಹಾದ್ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ಯೋಗಿ ಆದಿತ್ಯಾನಾಥ್ ವಿಡಿಯೋವೊಂದರಲ್ಲಿ ಮಾತನಾಡುತ್ತಾ 'ಅವರು ಒಬ್ಬ ಹಿಂದು ಹುಡುಗಿಯನ್ನು ತೆಗೆದುಕೊಂಡರೆ, ನಾವು 100 ಹುಡುಗಿಯನ್ನು ತೆಗೆದುಕೊಳ್ಳುತ್ತೇವೆ" ಎಂದಿದ್ದರು.[ವಿವಾದಾತ್ಮಕ 'ಲವ್ ಜಿಹಾದ್'? ಎಂದರೇನು]
ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾಧ್ಯಮಗಳು ದನಿ ಎತ್ತುತ್ತಿಲ್ಲ ಏಕೆ, ರಾಷ್ಟ್ರೀಯ ಕ್ರೀಡಾಪಟುವೊಬ್ಬರ ಲವ್ ಜಿಹಾದ್ ಪ್ರಕರಣ ನಮ್ಮ ಕಣ್ಮುಂದೆ ಇದೆ. ಸರಿಯಾದ ನ್ಯಾಯ ಸಿಗಬೇಕಿದೆ ಎಂದು ಹೇಳಿದ್ದು ವಿವಾದ ಎಬ್ಬಿಸಿತ್ತು.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹಿಂದೂ ಯುವತಿಯನ್ನು ಮದುವೆಯಾಗುವುದು ಒಳ್ಳೆಯದು. ಕುಟುಂಬ ಯೋಜನೆ ಬಗ್ಗೆ ಸಾಕ್ಷಿ ಮಹಾರಾಜ್ ಹೇಳಿಕೆಗೆ ನನ್ನ ಬೆಂಬಲವಿದೆ ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆ.
ಇದಕ್ಕೂ ಮುನ್ನ ಜ.11 ರಂದು ಸಾಧ್ವಿ ಪ್ರಾಚಿ ಅವರು, ಸಿಂಹ ಕೇವಲ ಒಂದು ಮಗುವನ್ನು ಹೊಂದಿರುವುದಿಲ್ಲ. ನಾಲ್ಕಾರು ಮಕ್ಕಳಿದ್ದರೆ ಚೆನ್ನ. ಗಡಿಯಲ್ಲಿ ಯುದ್ಧ ಮಾಡಲು, ಸಂತರಾಗಲು, ವಿಶ್ವ ಹಿಂದೂ ಪರಿಷತ್ ಸೇರಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಲು ತಲಾ ಒಬ್ಬ ಮಗುವನ್ನು ಹಿಂದೂಗಳು ಹೆರಬೇಕಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. [ಲವ್ ಜಿಹಾದ್ ಗೊತ್ತಿಲ್ಲದವರು ಅವರೆಂಥ ಗೃಹ ಸಚಿವರು?]
2012ರಲ್ಲಿ ಉತ್ತರಪ್ರದೇಶದ ಪುರ್ಕಾಜಿ ಅಸೆಂಬ್ಲಿಗೆ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಪ್ರಾಚಿ ಅವರ ಮೇಲೆ ಮುಜಾಫರ್ ನಗರ ಗಲಭೆ ಪ್ರಕರಣದ ಆರೋಪ ಕೇಳಿ ಬಂದಿತ್ತು. ಆದರೆ, ನಂತರ ಜಾಮೀನು ಪಡೆದುಕೊಂಡಿದ್ದರು. ಬಲವಂತದ ಮತಾಂತರ ನಿಷೇಧಿಸುವಂತೆ ಆಗ್ರಹಿಸುತ್ತಿರುವ ಸಾಧ್ವಿ ಅವರು ಘರ್ ವಾಪಸಿ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.