Get Updates
Get notified of breaking news, exclusive insights, and must-see stories!

ಬಜೆಟ್ 2017: ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ ಮುಖ್ಯಾಂಶಗಳು

ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್ ನಲ್ಲಿ ಮಾಡಿದ 2017ರ ಬಜೆಟ್ ನ ಪ್ರಮುಖ ಘೋಷಣೆಗಳು ಇಲ್ಲಿವೆ.

*20 ಲಕ್ಷ ಆಧಾರ್ ಬೇಸ್ಡ್ ಸ್ವೈಪ್ ಮಷೀನ್ 2020ರ ವೇಳೆಗೆ

*1 ಕೋಟಿ ರುಪಾಯಿಗಿಂತ ಹೆಚ್ಚಿನ ಆದಾಯ ಇರುವವರಿಗೆ ಶೇ 15ರಷ್ಟು ಸರ್ ಚಾರ್ಜ್[ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE]

*50 ಲಕ್ಷದಿಂದ 1 ಕೋಟಿ ರುಪಾಯಿ ಮಧ್ಯೆ ಆದಾಯ ಇರುವವರಿಗೆ ಶೇ 10ರಷ್ಟು ಸರ್ ಚಾರ್ಜ್

*2.5 ಲಕ್ಷದಿಂದ 5 ಲಕ್ಷದ ಆದಾಯಕ್ಕೆ ಶೇ 5ರಷ್ಟು ತೆರಿಗೆ[ರಾಜಕೀಯ ಪಕ್ಷಗಳ ದೇಣಿಗೆ 2 ಸಾವಿರ ರು.ಗಳಿಗೆ ಇಳಿಕೆ]

*3 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರ ಮಾಡುವಂತಿಲ್ಲ

*ಐವತ್ತು ಕೋಟಿಗಿಂತ ಕಡಿಮೆ ಆದಾಯ ಇರುವ ಕಂಪನಿಗಳ ಕಾರ್ಪೋರೇಟ್ ತೆರಿಗೆ ಶೇ 25ಕ್ಕೆ ಇಳಿಕೆ

*2017-18 ಸಾಲಿಗೆ 21.74 ಟ್ರಿಲಿಯನ್ ಬಜೆಟ್[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]

*ರಕ್ಷಣಾ ವಲಯಕ್ಕೆ 2.74 ಲಕ್ಷ ಕೋಟಿ ಮೀಸಲು

*ವೆಬ್ ಮೂಲಕ ಸೈನಿಕರ ಪಿಂಚಣಿ ವಿತರಣೆ[ಒಂದಷ್ಟು ಹೊಸ ಘೋಷಣೆ, ಹಳೆ ಯೋಜನೆಗಳ ಮುಂದುವರಿಕೆ; ಓಡದ ಜೇಟ್ಲಿ ರೈಲು]

*ಆರ್ಥಿಕ ತಪ್ಪಿತಸ್ಥರ ಆಸ್ತಿ ಜಪ್ತಿಗೆ ಹೊಸ ಕಾನೂನು ಜಾರಿ

*ಐನೂರು ರೈಲು ನಿಲ್ದಾಣದಲ್ಲಿ ಲಿಫ್ಟ್, ಎಸ್ಕಲೇಟರ್

*ರಾಜಕೀಯ ಪಕ್ಷಗಳು ಚೆಕ್ ಅಥವಾ ಡಿಜಿಟಲ್ ವ್ಯವಹಾರ ಮೂಲಕ ಮಾತ್ರ ದೇಣಿಗೆ ಸಂಗ್ರಹಿಸಬಹುದು

*ಎಲ್ ಎನ್ ಜಿ ಮೇಲೆ ಅಬಕಾರಿ ಸುಂಕ ಶೇ 5ರಿಂದ ಶೇ 2.5ಗೆ ಇಳಿಕೆ[ಅಪನಗದೀಕರಣ ಪರಿಣಾಮ ಜಿಡಿಪಿ ಪಾರದರ್ಶಕ, ದೈತ್ಯ: ಜೇಟ್ಲಿ]

*ರಿಯಲ್ ಎಸ್ಟೇಟ್: ತೆರಿಗೆ ಹಾಕಲು ಕ್ಯಾಪಿಟಲ್ ಗೇನ್ಸ್ ಅವಧಿ 3ರಿಂದ 2 ವರ್ಷಕ್ಕೆ ಇಳಿಕೆ

Highlights of Budget 2017

*ಆಯ್ದ ಟಯರ್ -2 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ.[ಟ್ವಿಟ್ಟರ್: 2018ರೊಳಗೆ ಎಲ್ಲಾ ಗ್ರಾಮಕ್ಕೂ ವಿದ್ಯುತ್ ಪೂರೈಕೆ?]

*1.5 ಲಕ್ಷಕ್ಕೂ ಹೆಚ್ಚು ಗ್ರಾಮಗಳಿಗೆ ವೇಗದ ಬ್ರ್ಯಾಡ್ ಬಾಂಡ್ ಇಂಟರ್ ನೆಟ್.

*ಪರಿಶಿಷ್ಟ ಜಾತಿಯವರಿಗೆ ಮೀಸಲಾದ ಮೊತ್ತ 55,393 ಕೋಟಿ ರುಪಾಯಿಗೆ ಏರಿಕೆ

*ಬ್ಯಾಂಕ್ ಗಳಿಗೆ ಹತ್ತು ಸಾವಿರ ಕೋಟಿ ರುಪಾಯಿ ಪುನರ್ ಬಂಡವಾಳ

*ಷೇರು ಮಾರುಕಟ್ಟೆ ಪ್ರವೇಶಿಸಲಿರುವ ಐಆರ್ ಸಿಟಿಸಿ

*ಹೊಸ ಮೆಟ್ರೋ ರೈಲು ನೀತಿ ರಚನೆ

*ರಾಷ್ಟ್ರೀಯ ಹೆದ್ದಾರಿಗಳಿಗಾಗಿ ಇರುವ ಮೊತ್ತ 64 ಸಾವಿರ ಕೋಟಿಗೆ ಏರಿಕೆ

*ಆರೋಗ್ಯ ಪರಿಶೀಲನೆಗಾಗಿ ಹಿರಿಯ ನಾಗರಿಕರಿಗೆ ಆಧಾರ್ ಮೂಲದ ಸ್ಮಾರ್ಟ್ ಕಾರ್ಡ್ ವಿತರಣೆ

*ಐಆರ್ ಸಿಟಿಸಿ ಮೂಲಕ ರೈಲು ಟಿಕೆಟ್ ಬುಕ್ ಮಾಡುವಾಗ ಇರುವ ಸೇವಾ ತೆರಿಗೆ ವಾಪಸ್

*2025ರ ವೇಳೆಗೆ ಸಂಪೂರ್ಣ ಕ್ಷಯರೋಗ ನಿವಾರಣೆ ಗುರಿ

*ನರೇಗಾ ಯೋಜನೆಗೆ 38ರಿಂದ 48 ಸಾವಿರ ಕೋಟಿ ರುಪಾಯಿಗೆ ಏರಿಕೆ

*ಪ್ರೌಢಶಿಕ್ಷಣಕ್ಕಾಗಿ ಇನೊವೇಟಿವ್ ಫಂಡ್

*ಪ್ರಧಾನಮಂತ್ರಿ ಆವಾಸ್ ಯೋಜನೆಗೆ 23 ಸಾವಿರ ಕೋಟಿ ಮೀಸಲು

*2017-18ನೇ ಸಾಲಿನಲ್ಲಿ ಗ್ರಾಮೀಣ ವಲಯಕ್ಕೆ 1,87,200 ಕೋಟಿ ರುಪಾಯಿ. ಇದು ದಾಖಲೆ ಮೊತ್ತವಾಗಿದ್ದು, ಶೇ 24ರಷ್ಟು ಏರಿಕೆಯಾಗಿದೆ.

*ರಾಷ್ಟ್ರೀಯ ಕೃಷಿ ಮಾರುಕಟ್ಟೆಗಳು : 585 ಮಾರುಕಟ್ಟೆಗೆ ವಿಸ್ತರಣೆ

*ರಸ್ತೆ ನಿರ್ಮಾಣ: ದಿನಕ್ಕೆ 133 ಕಿ.ಮೀ. ಹೆಚ್ಚಳ.

*ನೀರಾವರಿ ನಿಧಿ 40 ಸಾವಿರ ಕೋಟಿ ರುಪಾಯಿಗೆ ಹೆಚ್ಚಳ.

*ಮೇ 1, 2018ರ ವೇಳೆಗೆ ಶೇ 100ರಷ್ಟು ಗ್ರಾಮೀಣ ವಿದ್ಯುದ್ದೀಕರಣ.

*ನಬಾರ್ಡ್ ನಿಂದ ಸೂಕ್ಷ್ಮ ನೀರಾವರಿ ನಿಧಿ ಸ್ಥಾಪನೆ, ಆರಂಭ ಬಂಡವಾಳವಾಗಿ ಐದು ಸಾವಿರ ಕೋಟಿ ರುಪಾಯಿ.

*ಕೃಷಿ ಸಾಲಕ್ಕಾಗಿ ಈ ವರ್ಷ 10 ಸಾವಿರ ಕೋಟಿ ರುಪಾಯಿ ನಿಗದಿ, ಅರವತ್ತು ದಿನ ಬಡ್ಡಿಯಿಂದ ವಿನಾಯಿತಿ

*ಡೇರಿ ಪ್ರೊಸೆಸಿಂಗ್ ಗೆ ಆರಂಭಿಕವಾಗಿ ಎರಡು ಸಾವಿರ ಕೋಟಿ ರುಪಾಯಿ

*ಗ್ರಾಮೀಣ ಭಾಗದಲ್ಲಿ ಮೂರು ಲಕ್ಷ ಕೋಟಿ ಹೂಡಿಕೆ. ಐವತ್ತು ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಐವತ್ತು ಸಾವಿರ ಕುಟುಂಬಗಳನ್ನು ಬಡತನದಿಂದ ಹೊರತರುವ ಗುರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+