ಮಥುರಾ ಸಂಸದೆ ಹೇಮಾ ಮಾಲಿನಿ ಟ್ವೀಟ್ ಡಿಲೀಟ್!
ಮಥುರಾ, ಜೂನ್ 03: ಮಥುರಾ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವಾಗ ಕ್ಷೇತ್ರದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಶೂಟಿಂಗ್ ಮಾಡುವ ಚಿತ್ರವೊಂದರನ್ನು ಟ್ವಿಟ್ಟರ್ ನಲ್ಲಿ ಹಾಕಿ, ಛೀಮಾರಿ ಹಾಕಿಸಿಕೊಂಡಿದ್ದರು. ನಂತರ ತಪ್ಪಿನ ಅರಿವಾಗಿ ಸರಣಿ ಟ್ವೀಟ್ ಮೂಲಕ ಮಥುರಾ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಡೆದ ಹಿಂಸಾಚಾರ, ಗಲಭೆಯಿಂದಾಗಿ ಎಸ್.ಪಿ.,ಎಸ್ಐ ಸೇರಿ 21ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆಯ ಆಘಾತದಿಂದ ಸಾರ್ವಜನಿಕರು ಚೇತರಿಸಿಕೊಳ್ಳುತ್ತಿರುವಾಗ, ಸಂಸದೆ ಹೇಮಾಮಾಲಿನಿ ಅವರು ಫೋಟೋ ಶೂಟಿಂಗ್ ಮಾಡುತ್ತಿರುವ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಇದು ಸಾರ್ವಜನಿಕರನ್ನು ಕೆರಳಿಸಿತ್ತು.
ನಂತರ ಪ್ರಮಾದವನ್ನು ಸರಿಪಡಿಸಿಕೊಳ್ಳಲು ಆ ಚಿತ್ರಗಳನ್ನು ಡಿಲೀಟ್ ಮಾಡಿದ ಹೇಮ ಮಾಲಿನಿ ಅವರು ಮಥುರಾ ಘಟನೆ ಬಗ್ಗೆ ಅಪ್ಡೇಟ್ಸ್ ನೀಡಿದ್ದಾರೆ.
ನಾನು
ಈಗಷ್ಟೆ
ಮಥುರಾದಿಂದ
ಬಂದಿದ್ದೇನೆ.ಅಲ್ಲಿ
ಹಿಂಸಾಚಾರ
ನಡೆದಿರುವುದು,ಪೊಲೀಸರು
ಪ್ರಾಣ
ಕಳೆದುಕೊಂಡಿರುವುದು
ನನಗೆ
ತಿಳಿದು
ಬಂದಿದೆ.
ಈ
ವಿಚಾರ
ನನಗೆ
ತುಂಬಾ
ನೋವು
ತರಿಸಿದೆ.ನಾನು
ಮತ್ತೆ
ಅಲ್ಲಿಗೆ
ತೆರಳುತ್ತೇನೆ'
'ಮೃತ
ಪೊಲೀಸರಿಗೆ
ಸಂತಾಪ
ಸೂಚಿಸಿದ್ದು
,ಮಥುರಾದ
ಜನರು
ಶಾಂತಿಯಿಂದ
ಇರಬೇಕೆಂದು
ಎಂದು
ಟ್ವೀಟ್
ಮಾಡಿ
ಕೋರಿದ್ದಾರೆ.
ಕಾನೂನು
ಮತ್ತು
ಸುವ್ಯವಸ್ಥೆ
ನೋಡಿಕೊಳ್ಳುವುದು
ರಾಜ್ಯ
ಸರ್ಕಾರ
ಆದರೆ
ಇದುವರೆಗೆ
ಮುಖ್ಯಮಂತ್ರಿ
ಅಖೀಲೇಶ್
ಯಾದವ್
ಅವರು
ಸ್ಥಳಕ್ಕೆ
ಏಕೆ
ಭೇಟಿ
ನೀಡಿಲ್ಲ
'ಎಂದು
ಬಿಜೆಪಿ
ವಕ್ತಾರ
ಸಂಬೀತ್
ಪ್ರಶ್ನಿಸಿದ್ದರು.
So so upset by ths news frm a place which is so dear to me Will go there again if my presence is required.My heart goes out to the bereaved
— Hema Malini (@dreamgirlhema) June 3, 2016
ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್ ಅವರು ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿ, ಮೃತ ಪೊಲೀಸರ ಕುಟುಂಬಗಳಿಗೆ 20 ಲಕ್ಷ ರು ಪರಿಹಾರ ಧನ ಘೋಷಿಸಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಘಟನೆ ಬಗ್ಗೆ ವಿವರಗಳನ್ನು ಕೇಳಿದ್ದಾರೆ.
I fervently appeal to the people of Mathura to remain calm & not get misguided by violent elements 🙏
— Hema Malini (@dreamgirlhema) June 3, 2016
ಅಲಹಾಬಾದ್ ಹೈಕೋರ್ಟ್ ಆದೇಶದ ಅನ್ವಯ ಮಥುರಾ ಜಿಲ್ಲೆಯ ಜವಾಹರ್ಬಾಗ್ನಲ್ಲಿ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸಲು ಪೊಲೀಸರು ಮುಂದಾದರು.
Heartfelt condolences to families of SP City Mukul Dwivedi & SHO Santosh Kumar who laid down their lives in the line of duty.
— Hema Malini (@dreamgirlhema) June 3, 2016
ಈ ಸಂದರ್ಭದಲ್ಲಿ ಅಜಾದ್ ಭಾರತ್ ವಿಧಿಕ್ ವೈಚಾರಿಕ್ ಕ್ರಾಂತಿ ಸತ್ಯಾಗ್ರಹಿ ಸಂಘದ ಕಾರ್ಯಕರ್ತರು ಎನ್ನಲಾದ ಗುಂಪೊಂದು ಗಲಭೆ ನಡೆಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ಇಬ್ಬರು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೇದೆ ಸೇರಿದಂತೆ ಒಟ್ಟು 21 ಮಂದಿ ಸಾವಿಗೀಡಾಗಿದರು.
I just came bk frm Mathura & got the news of the violence tht has taken place there in which policemen have lost their lives.
— Hema Malini (@dreamgirlhema) June 3, 2016