ನಮಗಿಲ್ಲಿ ಸೂರ್ಯನ ಬೆಳಕು, ಕಾಶ್ಮೀರದಲ್ಲೆಲ್ಲೂ ಮಂಜಿನ ಮುಸುಕು!
ಜಮ್ಮು ಕಾಶ್ಮೀರ ಅಕ್ಷರಶಃ ಹಿಮಾವೃತವಾಗಿದೆ. ಅಗಾಧವಾಗಿ ಸುರಿಯುತ್ತಿರುವ ಹಿಮದಿಂದ ಅಲ್ಲಿನ ಚಿತ್ರಣವೇ ಬದಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಇಷ್ಟು ಅಗಾಧವಾಗಿ ಹಿಮ ಸುರಿಯುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಮೋಡಗಳು ಬಂದು ಭುವಿಯನ್ನು ತಬ್ಬಿದ ಹಾಗೆ ಎಂಬ ಕವಿವಾಣಿಯಂತೆ ಜಮ್ಮು-ಕಾಶ್ಮೀರದಲ್ಲಿ ಈಗ ಎಲ್ಲೆಲ್ಲೂ ಮಂಜಿನ ಸುರಿಮಳೆ. ಅಲ್ಲಿನ ಮಂದಿ ಸೂರ್ಯನನ್ನು ನೋಡಿ ಅದೆಷ್ಟು ದಿನಗಳಾದವೋ.
ಇಲ್ಲಿ ದಕ್ಷಿಣ ಭಾರತದಲ್ಲಿ ನಮಗೆ ಅಂಥ ಪರಿಸ್ಥಿತಿಯಿಲ್ಲ. ಬೆಂಗಳೂರಿನಲ್ಲೂ ಚುಮುಚುಮು ಚಳಿಯಿದೆ. ಆದರೆ, ಅದರ ಜತೆಗೆ ಸೂರ್ಯನ ಹೊಂಬಿಲಿಸಿದೆ. ಇದೊಂದು ರೀತಿಯಲ್ಲಿ ಸಮಶೀತೋಷ್ಣತೆಯನ್ನು ಏಕಕಾಲದಲ್ಲಿ ಅನುಭವಿಸುವ ಅನುಭೂತಿ. ಇದಕ್ಕೇ ಹಲವರಿಗೆ ಬೆಂಗಳೂರು ಇಷ್ಟವಾಗೋದು.[ಗ್ಯಾಲರಿ: ದೇಶದೆಲ್ಲೆಡೆ 68ನೇ ಗಣತಂತ್ರ ಸಂಭ್ರಮ]

ಆದರೆ, ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಹಾಗಿಲ್ಲ. ಅಕ್ಷರಶಃ ರೆಫ್ರಿಜರೇಟರ್ ಆದ ಜಮ್ಮು ಕಾಶ್ಮೀರ! ನಾವದನ್ನು ನೋಡಿ ವ್ಹಾವ್ ಎನ್ನುತ್ತೇವೆ. ಆದರೆ, ಅಲ್ಲಿ ಆ ಮಂಜನ್ನು ಅನುಭವಿಸಿದವರಿಗೇ ಗೊತ್ತು ಅದರ ಕಷ್ಟವೇನೆಂದು.
ಕೆಲವಾರು ದಿನಗಳಿಂದ ಸುರಿಯುತ್ತಿರುವ ಈ ಮಂಜಿನಿಂದಾಗಿ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಜನರ ದೈನಂದಿನ ಬದುಕಿಗೆ ಬೇಕಾದ ಅಗತ್ಯ ವಸ್ತುಗಳ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ವಿಮಾನ, ಟ್ರಕ್ ಸಂಚಾರ ಸ್ಥಬ್ಧಗೊಂಡಿವೆ. ಅದಕ್ಕಿಂತ ಹೆಚ್ಚಾಗಿ ಪರಿಸರದ ತಾಪಮಾನ ಶೂನ್ಯ ಡಿಗ್ರಿಗೆ ಇಳಿದಿರುವುದು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಜನವರಿ 26ರ ಬೆಳಗ್ಗೆ ಇಡೀ ದೇಶ ಲಗುಬಗೆಯಲ್ಲಿ ಗಣರಾಜ್ಯೋತ್ಸವದ ಸಡಗರದಲ್ಲಿ ಭಾಗಿಯಾಗಲು ತಯಾರಾಗುತ್ತಿರುವಾಗ ಭಾರತದ ಮುಕುಟಪ್ರಾಯವಾದ ಕಾಶ್ಮೀರದಲ್ಲಿ ಜನಜೀವನ ಹೇಗಿತ್ತು ಎಂಬುದರ ಝಲಕ್ ಇಲ್ಲಿದೆ.

ಇಕ್ಕೆಲಗಳಲ್ಲಿ ಹಿಮದ ಸೊಬಗು
ಇದು ಶ್ರೀನಗರ, ಸೋನಾಮಾರ್ಗದಲ್ಲಿ ಕಂಡು ಬಂದ ದೃಶ್ಯ. ಮರಗಳೆಲ್ಲ ಮಂಜಿನ ಸ್ಪರ್ಶದಿಂದ ಮಂಕಾಗಿವೆ. ರಸ್ತೆಯಲ್ಲಿ ವಾಹನಗಳ ಸಂಚಾರವಿಲ್ಲ.

ದೈನಂದಿನ ವ್ಯವಹಾರ ಸ್ತಬ್ಧ
ಇದು ಗುಂಡರ್ ಬಾಲ್ ಜಿಲ್ಲೆಯ ಪ್ರಮುಖ ರಸ್ತೆಯೊಂದ ಚಿತ್ರ. ನೋಡಲು ಐರೋಪ್ಯ ದೇಶದ ವಾತಾವರಣದಂತೆ ಕಾಣುವ ಇಲ್ಲಿ ಜನರ ದೈನಂದಿನ ಚಟುವಟಿಕೆ ಬಹುತೇಕ ಸ್ತಬ್ಧವಾಗಿವೆ.

ಅಗತ್ಯ ವಸ್ತುಗಳ ಪೂರೈಕೆಯೂ ಸ್ಥಗಿತ
ಶ್ರೀನಗರದ ಪ್ರಮುಖ ರಸ್ತೆಗಳಲ್ಲಿ ಸರಕು ಸಾಗಣೆ ಟ್ರಕ್ಕುಗಳು ಸದ್ದಿಲ್ಲದೆ ನಿಂತುಬಿಟ್ಟಿವೆ. ಹೀಗಾಗಿ, ದಿನನಿತ್ಯದ ಸಾಮಾನುಗಳಿಗೆ ಅಭಾವ ಉಂಟಾಗಿದೆ.

ಸಂಸಾರದ ಗಾಡಿ ಎಳೆಯಲೇಬೇಕಲ್ಲ?
ಚಳಿಯಾದರೇನು, ಮಳೆಯಾದರೇನು, ಹಿಮವಾದರೇನು.... ಸಂಸಾರ ಸಾಗಲೇಬೇಕಲ್ಲ? ದಟ್ಟ ಹಿಮ, ಕೊರೆಯುವ ಚಳಿಯ ನಡುವೆಯೂ ಶ್ರೀನಗರದಲ್ಲಿ ಯುವಕನೊಬ್ಬ ತನ್ನ ಮನೆಗಾಗಿ ಗ್ಯಾಸ್ ಸಿಲಿಂಡರ್ ಒಯ್ಯುತ್ತಿರುವ ದೃಶ್ಯ.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬಿಗಿಭದ್ರತೆ
ಹಿಮಪಾತನ ನಡುವೆಯೂ ಜಮ್ಮು ಕಾಶ್ಮೀರದಲ್ಲೂ ರಾಷ್ಟ್ರೀಯ ಹಬ್ಬದ ಸಡಗರ ಮನೆ ಮಾಡಿತ್ತು. ಹಿಮದ ನಡುವೆಯೂ ಅಲ್ಲಿನ ಭದ್ರತಾ ಸಿಬ್ಬಂದಿಯಿಂದ ವಾಹನ ತಪಾಸಣೆ ನಡೆಸುತ್ತಿದ್ದುದು ಸಾಮಾನ್ಯವಾಗಿತ್ತು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications