ಅಂದು ಯುಪಿ ಪೊಲೀಸ್, ಇಂದು ಬಾಬಾ: 100ಕ್ಕೂ ಹೆಚ್ಚು ಜನರ ಸಾವಿಗೆ ಕಾರಣರಾದ ಇವರ ಕಂಪ್ಲೀಟ್ ಪರಿಚರ ಇಲ್ಲಿದೆ
ಯಾವಾಗಲೂ ನೀಟಾಗಿ ತಲೆಕೂದಲನ್ನು ಬಾಚಿಕೊಂಡು, ವೈಟ್ ಶರ್ಟ್ ಹಾಗೂ ವೈಟ್ ಪ್ಯಾಂಟ್ ಹಾಕಿಕೊಂಡು ಕೈಯಲ್ಲಿ ಒಂದು ಮೈಕ್ ಹಿಡಿದರೆ ತನ್ನ ಮಾತು ಕೇಳಲು ಸಾವಿರಾರು ಜನರಿದ್ದಾರೆ ಎಂಬ ನಂಬಿಕೆ.. ಇವರೇ ಯುಪಿಯ ಹತ್ರಾಸ್ನಲ್ಲಿ ಭೋಲೆ ಬಾಬ.
ಇವರ ನಡೆಸುವ ಸತ್ಸಂಗದಲ್ಲಿ ಕಾಲ್ತುಳಿತ ಸಂಭವಿಸಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 122 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಕ್ಕಳು, ವೃದ್ಧರು ಸೇರಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಈಗ ಸಾಮಾಜಿಕ ತಾಣದಲ್ಲಿ ಈ ಘಟನೆ ನಡೆಯಲು ಏನು ಕಾರಣ ಆ ಬಾಬಾ ಯಾರು ಎಂಬ ಬಗ್ಗೆ ಜನ ಹುಡುಕಲು ಆರಂಭಿಸಿದ್ದಾರೆ.

ಯಾರು ಈ ಸನ್ಯಾಸಿ
ಭೋಲೆ ಬಾಬಾ ನಿಜವಾದ ಹೆಸರು ನಾರಾಯಣ ಹರಿ ಇಟಾಹ್ ನಿವಾಸಿ. ಅವರಿಗೂ ರಾಜಕೀಯದ ಸಂಪರ್ಕವಿದೆ. ಕೆಲವು ಸಂದರ್ಭಗಳಲ್ಲಿ ಯುಪಿಯ ಅನೇಕ ದೊಡ್ಡ ನಾಯಕರು ಅವರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಇವರ ಪಕ್ಕದಲ್ಲಿ ಕುಳಿತಿದ್ದರು.
ಭೋಲೆ ಬಾಬಾ ಬಹದ್ದೂರ್ ನಗರಿ ಗ್ರಾಮದ ನಿವಾಸಿ. ಆರಂಭಿಕ ಶಿಕ್ಷಣವನ್ನು ಗ್ರಾಮದಲ್ಲಿ ಮುಗಿಸಿದರು. ಬಿಡುವಿನ ಸಮಯದಲ್ಲಿ ತಂದೆಯೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಪೊಲೀಸ್ ಇಲಾಖೆ ಸೇರಿದರು. 12 ಪೊಲೀಸ್ ಠಾಣೆ, ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ವಿಆರ್ಎಸ್ ಪಡೆದರು. ಈಗ ಅವರು ತಮ್ಮ ಹಳ್ಳಿಯಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.
ಆಧ್ಯಾತ್ಮಿಕ ಲೋಕದ ಪಯಣ ಹೇಗೆ?
ಆಧ್ಯಾತ್ಮದ ಪಡಸಾಲೆಗೆ ಎಂಟ್ರಿ ನೀಡುತ್ತಿದ್ದಂತೆ ಇವರು ತಮ್ಮ ಹೆಸರನ್ನು ಸಹ ಬದಲಿಸಿಕೊಂಡರು. ಇವರು ನಾರಾಯಣ ಹರಿ ಬದಲಿಗೆ ಸಕರ್ ವಿಶ್ವಹರಿ ಎಂದು ಬದಲಾಯಿಸಿಕೊಂಡರು. ಇವರ ಆಧ್ಯಾತ್ಮ ಸ್ಥಳದಲ್ಲಿ ಇವರಿಗೆ ಪತ್ನಿಯ ಸಾಥ್ ಸಹ ಇತ್ತು. ಇವರ ಒಂದು ವಿಶೇಷತೆ ಅಂದರೆ, ಇವರು ಕೇಸರಿ ಧಾರಿ ಬಾಬಾಗಳಲ್ಲ. ಅವರು ತಮ್ಮ ಸತ್ಸಂಗದಲ್ಲಿ ಬಿಳಿ ಸೂಟ್, ಟೈ ಮತ್ತು ಬೂಟುಗಳಲ್ಲಿ ಇನ್ನು ಹಲವು ಬಾರಿ ಕುರ್ತಾ-ಪೈಜಾಮ ಮತ್ತು ತಲೆಯ ಮೇಲೆ ಬಿಳಿ ಟೋಪಿ ಧರಿಸಿ ಸತ್ಸಂಗಕ್ಕೆ ಬರುತ್ತಾರೆ. ಇವರ ಸತ್ಸಂಗವನ್ನು ಕೇಳಲು ಪ್ರತಿದಿನ ಸಾವಿರಾರು ಜನರು ಬರುತ್ತಾರೆ.

ಭೋಲೆ ಬಾಬಾ ಅವರ ಚಮತ್ಕಾರ ಬರೀ ಇಲ್ಲಿಗೆ ಸೀಮಿತವಾಗಿಲ್ಲ. ಇವರು ತಮ್ಮ ಪ್ರಭಾವವನ್ನು ಸುತ್ತು ಮುತ್ತಲಿನ ಪ್ರದೇಶಗಳಲ್ಲೂ ವ್ಯಾಪಿಸಿದ್ದಾರೆ. ಸರ್ಕಾರಿ ನೌಕರಿಯಿಂದ ಅವರನ್ನು ಅಧ್ಯಾತ್ಮದೆಡೆಗೆ ಎಳೆದು ತಂದವರು ಯಾರು ಎಂಬುದು ಬಹಿರಂಗವಾಗಬೇಕಿದೆ. ಇವರೇ ಹೇಳುವಂತೆ ವಿಆರ್ಎಸ್ ಪಡೆದ ಬಳಿಕ ದೇವರ ದರ್ಶನವಾಯಿತು. ಈ ದೇಹವು ಅದೇ ಭಗವಂತನ ಅಂಗವಾಗಿದೆ ಎಂದು ದೇವರ ಪ್ರೇರಣೆಯಿಂದ ತಿಳಿದುಬಂದಿದೆ.
ದೇವರ ಸಾಕ್ಷ್ಯಾತ್ಕಾರದ ಬಳಿಕ ಅವರು ತಮ್ಮ ಜೀವನವನ್ನು ಮಾನವ ಕಲ್ಯಾಣಕ್ಕಾಗಿ ಮೀಸಲಿಡಲು ನಿರ್ಧರಿಸಿದರು. ನಾನೇ ಎಲ್ಲಿಗೂ ಹೋಗುವುದಿಲ್ಲ, ಬದಲಿಗೆ ಭಕ್ತರು ನನ್ನನ್ನು ಕರೆಯುತ್ತಾರೆ. ಭಕ್ತರ ಕೋರಿಕೆಯ ಮೇರೆಗೆ ವಿವಿಧೆಡೆ ಸಂಚರಿಸಿ ಸಭೆ ನಡೆಸುತ್ತೇನೆ ಎಂದು ಹೇಳುತ್ತಾರೆ.
ಇವರ ಸುತ್ತ ವಿವಾದ
ಅದೆಲ್ಲಾ ಏನೆ ಇರಲಿ ಮಂಗಳವಾರ ನಡೆದ ಘಟನೆಗೆ ಹೊಣೆಗಾರರು ಯಾರು? ಈ ರೀತಿ ಭೋಲೆ ಬಾಬಾ ವಿವಾದದ ಸುಳಿಗೆ ಸಿಲುಕಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2022ರಲ್ಲಿ ದೇಶದಲ್ಲಿ ಕೊರೊನಾ ಅಲೆ ಎದ್ದಿದ್ದಾಗ ಫರೂಕಾಬಾದ್ನಲ್ಲಿ ಭೋಲೆ ಬಾಬಾ ಸತ್ಸಂಗ ಆಯೋಜಿಸಿದ್ದರು. ಜಿಲ್ಲಾಡಳಿತ ಕೇವಲ 50 ಮಂದಿಗೆ ಮಾತ್ರ ಸತ್ಸಂಗಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ಕಾನೂನು ಉಲ್ಲಂಘಿಸಿ 50 ಸಾವಿರಕ್ಕೂ ಹೆಚ್ಚು ಜನರು ಸತ್ಸಂಗದಲ್ಲಿ ಪಾಲ್ಗೊಂಡಿದ್ದರು ಈ ಘಟನೆಯಿಂದಲೂ ಸಹ ಅವರು ವಿವಾದಕ್ಕೆ ಆಹಾರವಾಗಿದ್ದರು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications