ತ್ವರಿತ ಅಲರ್ಟ್ ಗಳಿಗಾಗಿ
For Daily Alerts
21ನೇ ಸಿಇಸಿಯಾಗಿ ಎಕೆ ಜ್ಯೋತಿ ಅವರಿಂದ ಅಧಿಕಾರ ಸ್ವೀಕಾರ
ನವದೆಹಲಿ, ಜುಲೈ 06: ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿ ಗುಜರಾತ್ ಮೂಲದ ಐಎಎಸ್ ಅಧಿಕಾರಿ ಅಚಲ್ ಕುಮಾರ್ ಜ್ಯೋತಿ ಅವರು ಗುರುವಾರ(ಜುಲೈ 06) ದಂದು ಅಧಿಕಾರ ಸ್ವೀಕರಿಸಿದ್ದಾರೆ.
ಹಾಲಿ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ಅವಧಿ ಮುಗಿಯಲಿರುವ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಹಾಲಿ ಚುನಾವಣಾ ಆಯುಕ್ತರಾಗಿರುವ ಎ.ಕೆ ಜ್ಯೋತಿ(64 ವರ್ಷ) ಅವರನ್ನು ನೇಮಿಸಲಾಗಿದೆ. ಚುನಾವಣಾ ಆಯೋಗದ 21ನೇ ಮುಖ್ಯಚುನಾವಣಾ ಆಯುಕ್ತರಾಗಿ ಅಧಿಕಾರಕ್ಕೇರಿದ್ದಾರೆ.
1953ರ ಜನವರಿ 23ರಂದು ಹಟ್ಟಿದ ಎಕೆ ಜ್ಯೋತಿ ಗುಜರಾತ್ ಕೇಡರ್ ನ್ ಐಎಎಸ್ ಅಧಿಕಾರಿಯಾಗಿದ್ದಾರೆ. ಗುಜರಾತ್ ಸರಕಾರದ ಮುಖ್ಯ ಕಾರ್ಯದರ್ಶಿ, ಕಾಂಡ್ಲಾ ಬಂದರು ಟ್ರಸ್ಟ್ ಅಧ್ಯಕ್ಷರಾಗಿ, ಸರ್ದಾರ್ ಸರೋವರ ನರ್ಮದಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಗುಜರಾತ್ ಮುಖ್ಯ ಕಾರ್ಯದರ್ಶಿಯಾಗಿ 2013ರಲ್ಲಿ ನಿವೃತ್ತರಾದ ನಂತರ ಅವರನ್ನು ಗುಜರಾತ್ ಜಾಗೃತ ದಳದ ಆಯುಕ್ತರನ್ನಾಗಿ ನೇಮಿಸಲಾಗಿತ್ತು.
Comments
English summary
Achal Kumar Jyoti has taken charge as the 21st Chief Election Commissioner of India. He was appointed on Monday as the CET.
Story first published: Thursday, July 6, 2017, 12:26 [IST]