ಅಹ್ಮದಾಬಾದ್, ಜನವರಿ 09: ಬೆಂಗಳೂರಿನ ಕೆ.ಆರ್.ಮಾರ್ಕೇಟ್ ಸೀಪದ ಕೈಲಾಶ್ ಬಾರ್ ನಲ್ಲಿ ನಿನ್ನೆ(ಜ.08) ಸಂಭವಿಸಿದ ಅಗ್ನಿ ಆಕಸ್ಮಿಕಕ್ಕೆ 5 ಜನ ಮೃತರಾದ ಸುದ್ದಿ ಮಾಸುವ ಮುನ್ನವೇ ಗುಜರಾತಿನ ಅಹ್ಮದಾಬಾದಿನ ಅಂಗಡಿಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ 4 ಜನ ಸಾವಿಗೀಡಾಗಿದ್ದಾರೆ.
ಅಹ್ಮದಾಬಾದಿನ ನರಾನ್ಪುರ ಎಂಬಲ್ಲಿ ದಿನಸಿ ಅಂಗಡಿಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಬೆಂಕಿ ದುರಂತ ನಂತರ ಚೇತರಿಕೆಯತ್ತ ಕೆ.ಆರ್. ಮಾರ್ಕೆಟ್: ಚಿತ್ರಗಳು
ಇತ್ತೀಚೆಗೆ ಬೆಂಕಿ ಅವಘಡಗಳು ಪದೇ ಪದೇ ಸಂಭವಿಸುತ್ತಿದ್ದು, 2017 ರ ವರ್ಷಾಂತ್ಯದಲ್ಲಿ ಮುಂಬೈಯ ಕಮಲಾ ಮಿಲ್ ನಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ 14 ಜನ ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ನಿನ್ನೆ ರಾತ್ರಿ (ಜ.08) ಮುಂಬೈಯಲ್ಲಿ ಮತ್ತೆ ಅಗ್ನಿ ದುರಂತ ಸಂಭವಿಸಿದ ಪರಿಣಾಮ ಏಳಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲಾಗಿದ್ದು, ಯಾವುದೇ ಸಾವು ನೋವಿನ ವರದಿಯಾಗಿಲ್ಲ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!