ಎಎಪಿಗೆ ಸೊನ್ನೆ, ಬಿಜೆಪಿಗೆ ಬಹುಮತ- ಸಂಚಲನ ಮೂಡಿಸಿದ ಗುಜರಾತ್ ಚುನಾವಣೆ ಸಮೀಕ್ಷೆ!
ಅಹಮದಾಬಾದ್, ಅಕ್ಟೋಬರ್ 3: ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಪ್ರಧಾನಿ ಮೋದಿಯವರ ಜನ್ಮಸ್ಥಳವಾದ ಗುಜರಾತ್ನಲ್ಲಿ ಬಿಜೆಪಿಯ ಸ್ಥಿತಿ ಹೇಗಿದೆ? ಅದರ ರಾಜಕೀಯ ಬೆಳವಣಿಗೆಗೆ ಕಾರಣವೇನು? ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ ಎಂಬೆಲ್ಲಾ ಲೆಕ್ಕಾಚಾರ ಮಾಡಲಾಗುತ್ತಿದೆ. ಒಂದು ವೇಳೆ ಬಿಜೆಪಿ ಗುಜರಾತ್ನಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಹೊಸ ದಾಖಲೆಯಾಗಲಿದೆ. ಈಗ ಎಎಪಿ ಗುಜರಾತ್ನಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗಿ ಬಿಜೆಪಿಯೊಂದಿಗೆ ಪೈಪೋಟಿಗಿಳಿದಿದೆ. ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದ ನಂತರ ಕೇಜ್ರಿವಾಲ್ ಹೆಚ್ಚು ಆತ್ಮವಿಶ್ವಾಸದಿಂದ ಗುಜರಾತ್ನಲ್ಲೂ ಹೆಜ್ಜೆ ಇಟ್ಟಿದ್ದಾರೆ. ಕೇಜ್ರಿವಾಲ್ ಈಗಾಗಲೇ ಗುಜರಾತ್ನಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಗೆ ಎಎಪಿ ಭರ್ಜರಿ ತಯಾರಿ ನಡೆಸಿದೆ. ಬಿಜೆಪಿ ಭದ್ರಕೋಟೆಯಾದ ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆಗೆ ಗೆಲುವು ಸಾಧಿಸಲು ಆಮ್ ಆದ್ಮಿ ಪಕ್ಷ ತೊಡೆ ತಟ್ಟಿ ನಿಂತಿದೆ. ಜೊತೆಗೆ ಮತದಾರರನ್ನು ಸೆಳೆಯಲು ಹಲವಾರು ಚುನಾವಣಾ ಪೂರ್ವ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ಪದೇ ಪದೇ ಎಎಪಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಗುಜರಾತ್ಗೆ ಭೇಟಿ ನೀಡಿತ್ತಿದ್ದು, ಗುಜರಾತ್ನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಜೊತೆಗೆ ಹಲವಾರು ಭರವಸೆಗಳನ್ನು ನೀಡುವ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಆದರೆ ಎಬಿಪಿ ನ್ಯೂಸ್ - ಸಿ ವೋಟರ್ ಒಪಿನಿಯನ್ ಪೋಲ್ ಚುನಾವಣೆಗೆ ಸಂಬಂಧಿಸಿದ ಫಲಿತಾಂಶಗಳನ್ನು ಬಹಿರಂಗಗೊಳಿಸಿದ್ದು, ಫಲಿತಾಂಶದಲ್ಲಿ ಎಎಪಿಗೆ ಗುಜರಾತ್ನಲ್ಲಿ ಬೆರಳೆಣಿಕೆಯಷ್ಟು ಸ್ಥಾನಗಳು ಸಿಗುವುದು ಕಠಿಣ ಎಂದಿದೆ.

ಗುಜರಾತ್ ನಲ್ಲಿ ಯಾರಿಗೆ ಜಯ? ಸಮೀಕ್ಷೆ ಹೇಳುವುದೇನು?
ಗುಜರಾತ್ ತನ್ನ ಕೈ ತಪ್ಪದಂತೆ ಪ್ರಧಾನಿ ಮೋದಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಗುಜರಾತ್ ಜೊತೆಗೆ ಹಿಮಾಚಲ ಪ್ರದೇಶದಲ್ಲೂ ಚುನಾವಣೆ ನಡೆಯಲಿದೆ. ಈಗ ಎಬಿಪಿ ನ್ಯೂಸ್ - ಸಿ ವೋಟರ್ ಒಪಿನಿಯನ್ ಪೋಲ್ ಈ ಚುನಾವಣೆಗೆ ಸಂಬಂಧಿಸಿದ ಫಲಿತಾಂಶಗಳನ್ನು ಬಹಿರಂಗಪಡಿಸಿದೆ. 182 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಗುಜರಾತ್ನಲ್ಲಿ ಎಎಪಿ ಈ ಬಾರಿ ಗೆಲ್ಲುವುದು ಕಷ್ಟಕರ ಎಂದು ಹೇಳುತ್ತದೆ. ಎಎಪಿ ಜೊತೆಗೆ ವಿವಿಧ ಪಕ್ಷಗಳಿಗೆ ಕೆಲ ಸ್ಥಾನಗಳು ಸಿಗಲಿವೆ ಎಂದು ವಿವಿಧ ವಿಶ್ಲೇಷಣೆಗಳು ಕೇಳುತ್ತಿವೆ. ಈ ಸಮೀಕ್ಷೆಯಲ್ಲಿ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಲಾಗಿದೆ. ಆದಾಗ್ಯೂ, ಎಎಪಿ ಗೆಲ್ಲುವ ಸ್ಥಾನಗಳ ಸಂಖ್ಯೆ, ಪ್ರಮುಖ ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಪಂಜಾಬ್ನಲ್ಲಿ ಸುಲಭವಾಗಿ ಗೆದ್ದಿರುವ ಎಎಪಿ, ಪ್ರಧಾನಿ ಮೋದಿ ಅವರ ತವರು ರಾಜ್ಯದಲ್ಲಿ ಸ್ಥಾನಗಳನ್ನು ಗೆಲ್ಲುವುದು ಸುಲಭವಲ್ಲ ಎಂದು ಸ್ಪಷ್ಟಪಡಿಸಿದೆ.

ಆಪ್ ನಲ್ಲಿ ಆಸಕ್ತಿ.. ಸಮೀಕ್ಷೆ ತೋರಿಸಿದ್ದೇನು?
ಎಎಪಿ ಒಂದೇ ಸೀಟು ಗೆಲ್ಲಲಿದೆ ಎಂದು ಸಮೀಕ್ಷೆ ಸಂಸ್ಥೆ ಅಂದಾಜಿಸಿದೆ. ಇದು ಬಿಜೆಪಿ-ಕಾಂಗ್ರೆಸ್ ಮತಗಳ ಶೇಕಡಾವಾರು ಮೇಲೆ ಮಾತ್ರ ನಿರ್ಧರಿಸಬಹುದು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಶೇ.46.8 ಮತ್ತು ಕಾಂಗ್ರೆಸ್ ಶೇ.32.3 ಮತಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತೀರ್ಮಾನಿಸಿದೆ. ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ 135 ರಿಂದ 143 ಸ್ಥಾನಗಳನ್ನು ಪಡೆಯುತ್ತದೆ. ಕಾಂಗ್ರೆಸ್ 36 ರಿಂದ 44 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಇತರರು 36.5 ಪ್ರತಿಶತ ಮತಗಳೊಂದಿಗೆ 0-3 ಸ್ಥಾನಗಳನ್ನು ಪಡೆದುಕೊಳ್ಳುತ್ತಾರೆ. ಈಗಿನ ಸಿಎಂ ಭೂಪೇಂದ್ರ ಪಟೇಲ್ ಮತ್ತೊಮ್ಮೆ ಆ ಹುದ್ದೆಯಲ್ಲಿ ಮುಂದುವರಿಯಬೇಕು ಎಂದು ಹೆಚ್ಚಿನವರು ಬಯಸುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. 2017ರಲ್ಲಿ ಬಿಜೆಪಿ 99 ಸ್ಥಾನ ಪಡೆದು ಅಧಿಕಾರಕ್ಕೆ ಬಂದಿತ್ತು. ಈ ಬಾರಿ ಆ ಸ್ಥಾನಗಳು ಹೆಚ್ಚಾಗಲಿವೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಸ್ಪಷ್ಟಪಡಿಸಿದೆ.

ಸಮೀಕ್ಷೆ ಪ್ರಕಾರ ಮುಂದುವರೆಯಲಿದೆ ಮೋದಿ ಹವಾ
ಗುಜರಾತ್ ಸಿಎಂ ಆಗಿ ದೇಶದ ಜನರನ್ನು ಸೆಳೆದ ಪ್ರಧಾನಿ, ಈಗ ಎಂಟು ವರ್ಷಕ್ಕೂ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲು ಈಗಾಗಲೇ ಕಾರ್ಯತಂತ್ರಗಳನ್ನು ಅಳವಡಿಸಲಾಗಿದೆ. ಪಕ್ಷ ದುರ್ಬಲವಾಗಿರುವ 200 ಸ್ಥಾನಗಳನ್ನು ಗುರುತಿಸಿ ವಿಶೇಷ ಕ್ರಮಗಳನ್ನು ಆರಂಭಿಸಲಾಗಿದೆ. ಇದೀಗ, ಪ್ರಧಾನಿಯವರು ತಮ್ಮ ರಾಜ್ಯದಲ್ಲಿಯೇ ಭರ್ಜರಿ ಗೆಲುವಿನ ಮೂಲಕ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶಿಸುವ ಗುರಿಯನ್ನು ಹೊಂದಿರುವಂತಿದೆ. ಇದೇ ತಿಂಗಳಲ್ಲೇ ಗುಜರಾತ್ ಚುನಾವಣಾ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂಬ ವರದಿಗಳಿವೆ. ಇದೀಗ ಗುಜರಾತ್ ಚುನಾವಣೆ ಕುರಿತು ಬಹಿರಂಗವಾಗಿರುವ ಈ ಸಮೀಕ್ಷೆ ಇದೀಗ ಸಂಚಲನ ಮೂಡಿಸಿದೆ.

ಬಂಡಾಯ ಚುವುಟುವ ಪ್ರಯತ್ನದಲ್ಲಿ ಬಿಜೆಪಿ
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ತನ್ನ ಲೆಕ್ಕಾಚಾರಗಳನ್ನು ಬುಡಮೇಲು ಮಾಡಬಹುದಾದ ಯಾವುದೇ ಬಂಡಾಯವನ್ನು ಚಿವುಟಿ ಹಾಕಲು ಗುಜರಾತ್ನ ಭಾರತೀಯ ಜನತಾ ಪಕ್ಷವು ಒಂದು ವಿನೂತನ ಮಾರ್ಗವನ್ನು ಕಂಡುಹಿಡಿದಿದೆ. ಸಂಭಾವ್ಯ ಬಂಡುಕೋರರನ್ನು ಮನವೊಲಿಸಲು ಸಹಾಯ ಮಾಡಲು ಅವರಿಗೆ ಹತ್ತಿರವಿರುವವರ ಸಹಾಯವನ್ನು ತೆಗೆದುಕೊಳ್ಳುತ್ತದೆ. ಡಿಸೆಂಬರ್ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಹಲವಾರು ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ ನಂತರ, ಬಿಜೆಪಿ ತನ್ನ ಹಲವಾರು ಸಂಸದರು ಮತ್ತು ಪಕ್ಷದ ಹಿರಿಯ ನಾಯಕರನ್ನು ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲು ಕೇಳಿದೆ ಎಂದು ಪಕ್ಷದ ಮೂಲಗಳು ದಿ ಪ್ರಿಂಟ್ಗೆ ತಿಳಿಸಿವೆ.
ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯ ಹೊರತಾಗಿ, ಸಂಭಾವ್ಯರಿಗೆ ಹತ್ತಿರವಾಗಿರುವ ಮತ್ತು ಟಿಕೆಟ್ ಸಿಗದಿದ್ದಲ್ಲಿ ಅವರನ್ನು ಮನವೊಲಿಸಲು ಸಹಾಯ ಮಾಡುವವರ ಮತ್ತೊಂದು ಪಟ್ಟಿಯನ್ನು ಪಕ್ಷ ಕೇಳಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಟಿಕೆಟ್ ನಿರಾಕರಿಸಿದವರು ಪಕ್ಷದ ಒಟ್ಟಾರೆ ಕಾರ್ಯನಿರ್ವಹಣೆಯಲ್ಲಿ ಹಳ್ಳ ಹಿಡಿಯಬಹುದು ಎಂದು ಬಿಜೆಪಿ ಕಳವಳ ವ್ಯಕ್ತಪಡಿಸಿದೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications