Get Updates
Get notified of breaking news, exclusive insights, and must-see stories!

ಮಣಿಪುರದಲ್ಲಿ ಕಾನೂನು ಜಾರಿ ಸಂಸ್ಥೆಗಳ ಮೌನ ಮತ್ತು ನಿರಾಸಕ್ತಿಯನ್ನು ಖಂಡಿಸಿದ ಬಿಷಪ್‌ಗಳು

ಇಂಫಾಲ, ಜುಲೈ. 25: ಕಲಹ ಪೀಡಿತ ಮಣಿಪುರ ಎರಡು ದಿನಗಳ ಭೇಟಿ ನೀಡಿದ್ದ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ ತಂಡವು ರಾಜ್ಯದಲ್ಲಿ "ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಕಾನೂನು ಜಾರಿ ಸಂಸ್ಥೆಗಳ ಸುದೀರ್ಘ ಮೌನ ಮತ್ತು ನಿರಾಸಕ್ತಿ" ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಮಣಿಪುರದ ಪರಿಸ್ಥಿತಿ ಬಗ್ಗೆ ಹೇಳಿಕೆ ನೀಡಿರುವ ಅವರು, "ಮಣಿಪುರದಲ್ಲಿ ದೀರ್ಘಕಾಲದ ಹಿಂಸಾಚಾರದ ಪರಿಸ್ಥಿತಿಯ ಬಗ್ಗೆ ನಾವು ತೀವ್ರ ದುಃಖಿತರಾಗಿದ್ದೇವೆ. ನಾವು ಎಲ್ಲಾ ರೀತಿಯ ಹಿಂಸೆ, ವಿಶೇಷವಾಗಿ ನಮ್ಮ ಸಂಸ್ಥೆಗಳು, ಪೂಜಾ ಸ್ಥಳಗಳು ಮತ್ತು ಮಹಿಳೆಯರು ಮತ್ತು ಮಕ್ಕಳಂತಹ ಸಮಾಜದ ದುರ್ಬಲ ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮತ್ತು ದಾಳಿಗಳನ್ನು ಖಂಡಿಸುತ್ತೇವೆ. ಹಿಂಸಾಚಾರವನ್ನು ಒಳಗೊಂಡಿರುವ ಕಾನೂನು ಜಾರಿ ಸಂಸ್ಥೆಗಳ ಸುದೀರ್ಘ ಮೌನ ಮತ್ತು ನಿರಾಸಕ್ತಿಯ ಬಗ್ಗೆ ನಾವು ಅಷ್ಟೇ ಚಿಂತಿತರಾಗಿದ್ದೇವೆ" ಎಂದಿದ್ದಾರೆ.

group-of-bishops-condemns-silence

"ಆಡಳಿತ ವ್ಯವಸ್ಥೆಯು ನಮ್ಮ ದೇಶದ ಜಾತ್ಯತೀತ ರಚನೆಯನ್ನು ಎತ್ತಿಹಿಡಿಯಬೇಕು. ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸಬೇಕು ಮತ್ತು ವಿವಿಧ ಸಮುದಾಯಗಳ ಶಾಂತಿಯುತ ಸಹಬಾಳ್ವೆಯ ವಾತಾವರಣವನ್ನು ಬೆಳೆಸಬೇಕು ಎಂಬುದು ನಮ್ಮ ಮನವಿ. ಭಾರತದಲ್ಲಿ ಮತ್ತು ನಿರ್ದಿಷ್ಟವಾಗಿ ಮಣಿಪುರ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರಲು ಎಲ್ಲಾ ವರ್ಗಗಳ ಜನರ ಅಭಿವೃದ್ಧಿಗಾಗಿ ಸಂವಾದ ನಡೆಸಲು ಮತ್ತು ಹಿಂಸಾಚಾರ ನಿಯಂತ್ರಿಸಲು ಸಂಬಂಧಿತ ವ್ಯಕ್ತಿಗಳಿಗೆ ಕರೆ ನೀಡುತ್ತೇವೆ" ಎಂದು ತಿಳಿಸಿದ್ದಾರೆ.

ಸಿಬಿಸಿಐ (CBCI) ಅಧ್ಯಕ್ಷ ಮತ್ತು ಆರ್ಚ್‌ಬಿಷಪ್ ಆಂಡ್ರ್ಯೂಸ್ ಥಾಜತ್ ನೇತೃತ್ವದ ನಾಲ್ಕು ಸದಸ್ಯರ ತಂಡವು ಜನಾಂಗೀಯ ಘರ್ಷಣೆಗಳಿಂದ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದೆ. ಮೇ 3 ರಿಂದ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರದಲ್ಲಿ 150 ಜೀವಗಳು ಬಲಿಯಾಗಿವೆ ಮತ್ತು ಸುಮಾರು 60,000 ಜನರನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕಳೆದ ವಾರ, ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೀಡಿಯೊ ವೈರಲ್ ಆದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 78 ದಿನಗಳ ಮೌನವನ್ನು ಮುರಿದು ಈ ಬಗ್ಗೆ ಮಾತನಾಡಿದ್ದಾರೆ. ಪ್ರಧಾನ ಮಂತ್ರಿಯವರು ಸದನದಲ್ಲಿ ಈ ಬಗ್ಗೆ ಹೇಳಿಕೆ ನೀಡುವಂತೆ ಪ್ರತಿಪಕ್ಷಗಳು ಬೇಡಿಕೆಯಿಟ್ಟಿದ್ದು, ಗದ್ದಲದ ನಂತರ ಪ್ರಸ್ತುತ ಸಂಸತ್ತು ಸ್ಥಗಿತಗೊಂಡಿದೆ.

group-of-bishops-condemns-silence

ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ ತಂಡವು ಕಕ್ಚಿಂಗ್‌ನಲ್ಲಿನ ಶಿಬಿರದಲ್ಲಿ ಪರಿಹಾರ ವಸ್ತುಗಳನ್ನು ವಿತರಿಸಿತು ಮತ್ತು ಸುಗ್ನುವಿನ ಪುಖೌನಲ್ಲಿ 1,000 ಕ್ಕೂ ಹೆಚ್ಚು ಕುಟುಂಬಗಳಿಗೆ ವಾಸಿಸಲು ಸಾಧ್ಯವಾಗುವ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದ್ದಾರೆ.

"ದಾಳಿಕೋರರು ನಮ್ಮ ಮನೆಗಳು ಮತ್ತು ಆಸ್ತಿಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾರೆ. ಕುಕಿ-ಜೋ, ನಾಗಾ, ಮೈತೇಯಿ ಸೇರಿದಂತೆ ಎಲ್ಲಾ ಸಮುದಾಯಗಳಿಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಅಭಿವೃದ್ಧಿ ಸೇವೆಯನ್ನು ಸಲ್ಲಿಸಿದ ಸೇಂಟ್ ಜೋಸೆಫ್ಸ್ ಹೈಯರ್ ಸೆಕೆಂಡರಿ ಶಾಲೆ ಮತ್ತು ಪ್ಯಾರಿಷ್ ಅನ್ನು ಧ್ವಂಸ ಮಾಡಿದ್ದಾರೆ. ಕಾಂಚಿಪುರದ ಕ್ಯಾಥೋಲಿಕ್ ಶಾಲೆಯ ಕ್ಯಾಂಪಸ್‌ನಲ್ಲಿರುವ ಹೋಲಿ ರಿಡೀಮರ್ ಚರ್ಚ್ ಮತ್ತು ಪ್ರಾದೇಶಿಕ ಗ್ರಾಮೀಣ ತರಬೇತಿ ಕೇಂದ್ರ ಮತ್ತು ಸಂಗೈಪ್ರೌನಲ್ಲಿರುವ ಸೇಂಟ್ ಪಾಲ್ಸ್ ಪ್ಯಾರಿಷ್ ಕೂಡ ಸಂಪೂರ್ಣವಾಗಿ ನಾಶವಾಗಿದೆ. ಈ ಸ್ಥಳಗಳು ನಿರ್ಜನವಾಗಿ ಕಾಣುತ್ತಿದ್ದು, ಪರಸ್ಪರ ಅಪನಂಬಿಕೆ ಮತ್ತು ಭಯದ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಜನವಸತಿ ಇಲ್ಲದಂತಾಗಿದೆ" ಎಂದು ಸಿಬಿಸಿಐ ತಂಡ ಹೇಳಿದೆ.

"ಈ ಎಲ್ಲಾ ಸಮಸ್ಯೆಗಳ ನಡುವೆ, ಈ ಸ್ಥಳಗಳಿಂದ ಪಲಾಯನ ಮಾಡಿದವರ ನಿಜವಾದ ಪರಿಸ್ಥಿತಿ ಮತ್ತು ಅವರ ಭವಿಷ್ಯ ಮತ್ತು ಅವರ ಮಕ್ಕಳ ಭವಿಷ್ಯ ಏನು ಎಂದು ನಾವು ಚಿಂತಿತರಾಗಿದ್ದೇವೆ. ನಾವು ಕೆಲವು ಶಾಲೆಗಳು ಮತ್ತು ಹಾಸ್ಟೆಲ್‌ಗಳಿಗೆ ಭೇಟಿ ನೀಡುವ ಅವಕಾಶವನ್ನು ಪಡೆದೆವು. ಅದರಲ್ಲಿ ನಾವು ಮಕ್ಕಳ ಆತಂಕಗಳು ಮತ್ತು ಸಂಕಟಗಳನ್ನು ನೋಡಿದ್ದೇವೆ" ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ರಾಜ್ಯದ ಹೆಚ್ಚಿನ ಪರಿಹಾರ ಶಿಬಿರಗಳನ್ನು ರಾಜ್ಯಕ್ಕಿಂತ ಹೆಚ್ಚಾಗಿ ಸಾಮಾಜಿಕ ಸಂಸ್ಥೆಗಳು ನಡೆಸುತ್ತಿವೆ ಎಂದು ಬಹು ಸತ್ಯಶೋಧನಾ ತಂಡಗಳು ಕಂಡುಕೊಂಡಿವೆ. ಕ್ಯಾಥೋಲಿಕ್ ರಿಲೀಫ್ ಏಜೆನ್ಸಿ ಕ್ಯಾರಿಟಾಸ್ ಇಂಡಿಯಾ ಇದುವರೆಗೆ 3 ಕೋಟಿ ರೂ.ಗಳ ನೆರವು ನೀಡಿದೆ. ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜವು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕರೆ ನೀಡಿದೆ. ಕುಕಿ ಬುಡಕಟ್ಟು ಗುಂಪುಗಳು ಪ್ರತ್ಯೇಕ ಆಡಳಿತಕ್ಕೆ ಬೇಡಿಕೆ ಇಟ್ಟಿವೆ. ಆದರೆ ಮೈತೇಯಿ ಅವರು ಹಿಂಸಾಚಾರಕ್ಕೆ ಕಾರಣರಾದ ಮ್ಯಾನ್ಮಾರ್‌ನಿಂದ ಅಕ್ರಮ ಕುಕಿ ವಲಸಿಗರನ್ನು ನಿಶ್ಯಸ್ತ್ರಗೊಳಿಸುವುದು ಮತ್ತು ಹೊರಹಾಕಬೇಖು ಎಂದು ಬೇಡಿಕೆಯಿಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+