ಎಐ ಆಧಾರಿತ ಪಿಂಚಣಿ ವೆಬ್ ಪೋರ್ಟಲ್ ಶೀಘ್ರವೇ ಬಿಡುಗಡೆ?
ಬೆಂಗಳೂರು ಜೂ.16: ದೇಶದ ಪಿಂಚಣಿದಾರರ ಅನುಕೂಲಕ್ಕಾಗಿ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಕೃತಕ ಬುದ್ಧಿಮತ್ತೆ (ಎಐ) ಸಹಿತ ವೆಬ್ ಪೋರ್ಟಲ್ ಅನ್ನು ಆದಷ್ಟು ಶೀಘ್ರವೇ ಆರಂಭಿಸಲಿದೆ ಎಂದು ಕೇಂದ್ರ ಸಚಿವ ಜೀತೆಂದ್ರ ಸಿಂಗ್ ತಿಳಿಸಿದ್ದಾರೆ.
ಪಿಂಚಣಿ ಪಾವತಿ ಮತ್ತು ಟ್ರ್ಯಾಕಿಂಗ್ ಪೋರ್ಟಲ್ ಆಗಿರುವ 'ಭವಿಷ್ಯ' ಪೋರ್ಟಲ್ ನ ಫಲಾನುಭವಿಗಳ ಜತೆಗೆ ಸಂವಾದ ನಡೆಸಿದ ನಂತರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜೀವನ್ ಸುಲಭ ಘೋಷ ವ್ಯಾಕ್ಯದಡಿ ಕೃತಕ ಬುದ್ಧಿಮತ್ತೆವುಳ್ಳ ವೆಬ್ ಪೋರ್ಟಲ್ ಅನ್ನು ಆರಂಭಿಸಲಿದ್ದೇವೆ. ಇದು ಪಿಂಚಣಿದಾರರಿಗೆ ಪಿಂಚಣಿ ಕುರಿತು ಸ್ವಯಂಚಾಲಿತ ಸಂದೇಶ ಕಳುಹಿಸಲು ಸಹಾಯವಾಗಲಿದೆ ಎಂದರು.
ಈ ಉದ್ದೇಶಿತ ನೂತನ ಪಿಂಚಣಿ ಪೋರ್ಟಲ್ ನಲ್ಲಿ ದೇಶಾದ್ಯಂತ ಇರುವ ಪಿಂಚಣಿದಾರರನ್ನು ಹಾಗೂ ಮತ್ತವರ ಸಂಘಗಳನ್ನು ನೋಂದಾವಣೆ ಮಾಡಿಕೊಂಡು ಪರರಸ್ಪರ ಪಿಂಚಣಿದಾರರ ಸಕ್ರಿಯರಾಗಿರುವಂತೆ ನೋಡಿಕೊಳ್ಳಲಿದ್ದೇವೆ. ಇದರಿಂದ ಸಮಸ್ಯೆ, ಸಲಹೆ ಸ್ವೀಕರಿಸಲು ಸಾಧ್ಯವಾಗುತ್ತದೆ ಎಂದು ಭವಿಷ್ಯ ಯೋಜನೆಗಳ ಕುರಿತು ಅವರು ವಿವರಿಸಿದರು.

'ಭವಿಷ್' ಕುರಿತು ಶ್ಲಾಘನೆ ವ್ಯಕ್ತ:
ಪಿಂಚಣಿದಾರರಿಗೆ ಸಮರ್ಪಕ ಸೇವೆ ನೀಡಲೆಂದು ಆರಂಭಿಸಿದ ಪಿಂಚಣಿ ಪಾವತಿ ಮತ್ತು ಟ್ರ್ಯಾಕಿಂಗ್ ಪೋರ್ಟಲ್ ಆದ 'ಭವಿಷ್ಯ' ಆನ್ ಲೈನ್ ವೇದಿಕೆಯ ಕಾರ್ಯಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ನಿವೃತ್ತ ಅರೆ ಸೈನಿಕ ಸಿಬ್ಬಂದಿ, ನಿವೃತ್ತಿ ಹೊಂದಲಿರುವ ನಾಗರಿಕರು ಸೇರಿದಂತೆ ಅನೇಕರು ಈ ಆನ್ ಲೈನ್ ವೇದಿಕೆಯಿಂದ ತ್ವರಿತ ಪಿಂಚಣಿ ಸೇವೆ ಮತ್ತು ತಡೆರಹಿತ, ಸಮಸ್ಯೆಗಳಿಲ್ಲದೇ ಸೇವೆ ನೀಡುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾರದರ್ಶಕ ಸೇವೆಗೆ ಆದ್ಯತೆ ಆಗಲಿ:
ಪಿಂಚಣಿ ಪಾವತಿ ಸೇರಿದಂತೆ ವಿವಿಧ ವಿಚಾರದಲ್ಲಿ ಉಂಟಾಗುತ್ತಿರುವ ಬ್ಯಾಂಕಿಂಗ್ ಸಮಸ್ಯೆಗಳನ್ನು ಇಲಾಖೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಈ ಸಮಸ್ಯೆ ನನ್ನ ಗಮನಕ್ಕೂ ಬಂದಿದ್ದು, ಎಐ ಆಧಾರಿತ ಪೋರ್ಟಲ್ ಆರಂಭಿದ ಮೇಲೆ ಈ ತಾಂತ್ರಿಕ ಕೆಲ ಸಮಸ್ಯೆಗಳು ಸ್ವಯಂ ಪರಿಹಾರವಾಗಲಿವೆ. ಏನೇ ಸಮಸ್ಯೆಗಳಿದ್ದು ಡಿಜಿಟಲೀಕರಣದಂತ ಇಂದಿನ ವ್ಯವಸ್ಥೆಯಲ್ಲಿ ಜನರಿಗೆ ಪಾರದರ್ಶಕ ಸೇವೆ ನೀಡುವುದು ನಮ್ಮ ಕರ್ತವ್ಯವಾಗಬೇಕು. ನಿವೃತ್ತಿ ಪೂರ್ವ ನಡೆಸಲಾಗುವ ಕಾರ್ಯಾಗಾರದಲ್ಲಿ ನೀಡುವ ಅಭಿಪ್ರಾಯ, ಸಲಹೆಗಳನ್ನು ಪರಿಗಣಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖೆಯ ಕಾರ್ಯದರ್ಶಿ ವಿ. ಶ್ರೀನಿವಾಸ್ ಮಾತನಾಡಿ, ಡಿಜಿಲಾಕರ್ ನಲ್ಲಿರುವ ಪಿಂಚಣಿ ಪಾವತಿ ಆದೇಶ ಫಲಾನುಭವಿ ಪಿಂಚಣಿದಾರರಿಗೆ ಕಳುಹಿಸುವಲ್ಲಿ ವಿಳಂಬವಾಗುತ್ತಿದೆ. ಇದು ಸೇವೆಯ ದಕ್ಷತೆಗೆ ಅಡ್ಡಿ ಆಗುತ್ತಿದ್ದು, ಪಾವತಿಯ ಆದೇಶದ ಆನ್ ರವಾನೆಗಿಂತ ಪ್ರತಿ ರವಾನಿಸುವುದು ಅವಶ್ಯಕವಾಗಿದೆ. ನಿಗದಿತ ಗುಡವಿನಲ್ಲಿ ದತ್ತಾಂಶ ಸಂಗ್ರಹ, ಮಾಹಿತಿ ಮತ್ತಿತರ ಪಿಂಚಣಿ ಪ್ರಕ್ರಿಯೆ ಪೂರ್ಣ ಗೊಳಿಸಲಾಗುತ್ತಿದೆ. ಈ ಹಂತದಲ್ಲಿ ಪಿಂಚಣಿದಾರರಿಗೆ ಪಿಂಚಣಿ ಪ್ರಕ್ರಿಯೆಯ ಪ್ರಗತಿ ಬಗ್ಗೆ ಸಂದೇಶ ರವಾನೆಯಾಗುವಂತೆ ನೋಡಿಕೊಳ್ಳಲಾಗಿದೆ. ಇದು ಪಿಂಚಣಿದಾರನ ನಿವೃತ್ತಿ ಮೊದಲು ಒಂದು ತಿಂಗಳಲ್ಲೇ ನಡೆಯುವುದರಿಂದ ನಿವೃತ್ತಿ ನಂತರ ಆತ ಕಚೇರಿಗೆ ಅಲೆದಾಡುವುದು ತಪ್ಪಲಿದೆ ಎಂದು ಅವರು ತಿಳಿಸಿದರು.
Recommended Video
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್












Click it and Unblock the Notifications