ಅಪನಗದೀಕರಣವನ್ನು ಅನಾಹುತ ಎಂದು ಕರೆದು ಅಂಕಿ-ಅಂಶ ತೆರೆದಿಟ್ಟ ಚಿದಂಬರಂ
Recommended Video
ಅಪನಗದೀಕರಣ ಘೋಷಣೆಯ ನಂತರದ ಸ್ಥಿತಿಯ ಬಗ್ಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರದ ವಿರುದ್ಧ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅಂಕಿ-ಅಂಶಗಳ ಸಹಿತ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಮಾಹಿತಿಗಳು ಇಲ್ಲಿವೆ.
* ಜಿಡಿಪಿ ಅಭಿವೃದ್ಧಿ ದರದ ಲೆಕ್ಕಾಚಾರದಲ್ಲಿ ಹೇಳಬೇಕು ಅಂದರೆ 1.5 ಪರ್ಸೆಂಟ್ ನಷ್ಟು ಭಾರತದ ಆರ್ಥಿಕತೆಯು ನಷ್ಟವಾಗಿದೆ. ಇದೊಂದರ ಲೆಕ್ಕಾಚಾರವನ್ನೇ ಹಿಡಿದು ಹೇಳುವುದಾದರೆ ವರ್ಷಕ್ಕೆ 2.25 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ.
'ಅಪನಗದೀಕರಣದಿಂದ ಅತೀ ಹೆಚ್ಚು ನಷ್ಟವಾಗಿದ್ದು ಗಾಂಧಿ ಕುಟುಂಬಕ್ಕೆ!'
* ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 15 ಕೋಟಿ ದಿನಗೂಲಿ ಕಾರ್ಮಿಕರು ಹಲವು ವಾರಗಳ ಕಾಲ ತಮ್ಮ ದುಡಿಮೆ ಕಳೆದುಕೊಂಡರು. ಸಾವಿರಾರು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳು ಬಾಗಿಲು ಹಾಕಿದವು. ಲಕ್ಷಾಂತರ ಉದ್ಯೋಗಗಳು ನಾಶವಾದವು.
* ಇನ್ನು ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ಅಮಾನ್ಯ ಮಾಡಲು ಸಾಧ್ಯವಾಗಿದ್ದು 13 ಸಾವಿರ ಕೋಟಿ ರುಪಾಯಿ ಮಾತ್ರ ಮತ್ತು ಅದಕ್ಕಾಗಿ ದೇಶವೇ ದೊಡ್ಡ ಬೆಲೆ ತೆರಬೇಕಾಯಿತು
* ನನಗನಿಸುತ್ತದೆ ಆ 13 ಸಾವಿರ ಕೋಟಿ ರುಪಾಯಿ ನೋಟುಗಳು ನೇಪಾಳ ಮತ್ತು ಭೂತಾನ್ ನಲ್ಲಿ ಇದ್ದಿರಬಹುದು. ಮತ್ತಷ್ಟು ಕಳೆದುಹೋಗಿರಬಹುದು ಅಥವಾ ಹಾಳಾಗಿರಬಹುದು.
ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ ಮೇಲೆ ಸಿಬಿಐ ಚಾರ್ಜ್ ಶೀಟ್
* 15.42 ಲಕ್ಷ ಕೋಟಿಯಲ್ಲಿ ಪ್ರತಿ ರುಪಾಯಿಯೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ವಾಪಸಾಗಿದೆ (ಕೇವಲ 13,000 ಕೋಟಿ ರುಪಾಯಿ ಬಯಲಿಗೆಳೆಯಲು ಇಷ್ಟೆಲ್ಲ ಮಾಡಿದ್ದಾರೆ).
* ಈಗ ನೆನಪಿಸಿಕೊಳ್ಳಿ, 3 ಲಕ್ಷ ಕೋಟಿ ರುಪಾಯಿ ಹಣ ವಾಪಸಾಗುವುದಿಲ್ಲ ಮತ್ತು ಇದು ಸರಕಾರಕ್ಕೆ ಲಾಭ ಅಂತ ಹೇಳಿದ್ದರು