ಭಾರತಕ್ಕಾಗಿ ಗೂಗಲ್, ಪಿಚ್ಚೈ ಹಂಚಿದ ಕನಸುಗಳೇನು?
ನವದೆಹಲಿ, ಡಿ.16: ಭಾರತ ಪ್ರವಾಸದಲ್ಲಿರುವ ಗೂಗಲ್ ಸಂಸ್ಥೆ ಸಿಇಒ ಸುಂದರ್ ಪಿಚ್ಚೈ ಅವರು ದೆಹಲಿಯಲ್ಲಿ ಭಾರತಕ್ಕಾಗಿ ಗೂಗಲ್ ಕಂಡಿರುವ ಕನಸುಗಳನ್ನು ಹಂಚಿಕೊಂಡರು. ಇಂಟರ್ನೆಟ್, ಆಂಡ್ರಾಯ್ಡ್, ಅತ್ಯಾಧುನಿಕ ಉಪಕರಣಗಳನ್ನು ಹೇಗೆ ಭಾರತದೆಲ್ಲೆಡೆ ತಲುಪಿಸುವ ಕಾರ್ಯ ಯೋಜನೆ ರೂಪಿಸಲಾಗಿದೆ ಎಂಬುದನ್ನು ವಿವರಿಸಿದರು.
ಪ್ರತಿ
ತಿಂಗಳು
ಲಕ್ಷಾಂತರ
ಮಂದಿ
ಭಾರತೀಯರು
ಇಂಟರ್ನೆಟ್
ಬಳಕೆದಾರರಾಗುತ್ತಿದ್ದಾರೆ.
ಭಾರತದಲ್ಲಿ
ಸದ್ಯಕ್ಕೆ
ಡಿಜಿಟಲ್
ಕ್ರಾಂತಿಯಾಗುತ್ತಿದೆ.
ಗೂಗಲ್
ಸಂಸ್ಥೆಯ
ಮುಖ್ಯ
ಉದ್ದೇಶಕ್ಕೆ
ತಕ್ಕಂತೆ
ಗ್ರಾಮೀಣ
ಭಾಗಗಳಿಗೆ
ಇಂಟರ್ನೆಟ್
ಸಂಪರ್ಕ
ಸಾಧಿಸುವ
ನಿಟ್ಟಿನಲ್ಲಿ
ಮೋದಿ
ಅವರ
ಸರ್ಕಾರವೂ
ಕಾರ್ಯನಿರ್ವಹಿಸುತ್ತಿದೆ
ಎಂದರು.[ಫೇಸ್
ಬುಕ್,
ಗೂಗಲ್
ಕಚೇರಿಯಲ್ಲಿ
ಮೋದಿ
ಸಂಚಾರ]
ಸುಂದರ್
ಅವರು
ಹಂಚಿಕೊಂಡ
ಕನಸುಗಳು
ಹೀಗಿವೆ:
*
ಮುಂದಿನ
ಮೂರು
ವರ್ಷಗಳಲ್ಲಿ
ಭಾರತದ
3,00,000
ಗ್ರಾಮಗಳ
ಮಹಿಳೆಯರ
ಸಬಲೀಕರಣ
ಯೋಜನೆ.
*
ಬೆಂಗಳೂರು
ನಂತರ
ಹೈದರಾಬಾದಿನಲ್ಲಿ
ಹೊಸ
ಇಂಜಿನಿಯರಿಂಗ್
ಅಭಿವೃದ್ಧಿ
ಕೇಂದ್ರ
ಸ್ಥಾಪನೆಗೆ
ಗೂಗಲ್
ಮುಂದಾಗಿದೆ.
*
ಗೂಗಲ್
ನಿಂದ
ಭಾರತದ
11
ಭಾಷೆಗಳಿಗೆ
ನೆರವಾಗಬಲ್ಲ
ಇಂಡಿಕ್
ಕೀಬೋರ್ಡ್.
[ಲಿಂಕ್
ಇಲ್ಲಿದೆ]
*
2016ರ
ಅಂತ್ಯಗೊಳಗೆ
ಗೂಗಲ್
ಸರ್ಚ್
ಮೂಲಕ
ಕ್ರಿಕೆಟ್
ಲೈವ್
ಅಪ್ಡೇಟ್
ಸಿಗುವಂತೆ
ಮಾಡಲಾಗುವುದು.[ಸುಂದರ್
ಪಿಚೈ-
ಗೂಗಲ್
ಸಿಇಒ
ಬಗ್ಗೆ
ಒಂದಿಷ್ಟು]
*
ಇಂಟರ್ನೆಟ್
ಸಂಪರ್ಕ
ಎಲ್ಲರಿಗೂ
ಸಿಗುವಂತೆ
ಮಾಡುವುದು.
ಸರಿಯಾದ
ಸಮಯಕ್ಕೆ
ಸರಿಯಾದ
ಮಾಹಿತಿ
ಜನತೆಗೆ
ಸಿಗುವಂತಾಗಬೇಕು.
*
2017ರ
ವೇಳೆಗೆ
ಭಾರತದ
500
ರೈಲ್ವೆ
ನಿಲ್ದಾಣಗಳಲ್ಲಿ
ವೈಫೈ
ಸೌಲಭ್ಯ
ಅಳವಡಿಕೆ.[ವರದಿ
ಇಲ್ಲಿದೆ]
*
2016ರ
ಅಂತ್ಯಕ್ಕೆ
ಯುನೈಟೆಡ್
ಸ್ಟೇಟ್ಸ್
ಗಿಂತ
ಭಾರತದಲ್ಲಿ
ಆಂಡ್ರಾಯ್ಡ್
ಬಳಕೆದಾರರು
ಹೆಚ್ಚಾಗಲಿದ್ದಾರೆ.
*
ಗ್ರಾಮೀಣ
ಭಾಗಕ್ಕೆ
ನೆರವಾಗಬಲ್ಲ
ಕಡಿಮೆ
ದರದಲ್ಲಿ
ಸಂಪರ್ಕ
ಸಾಧ್ಯತೆ
ನೀಡುವ
ಪ್ರಾಜೆಕ್ಟ್
ಲೂನ್
ಭಾರತಕ್ಕೂ
ತರಲಾಗುವುದು.
ಭಾರತದಿಂದ
ನಾನು
ಹೆಚ್ಚು
ಪಡೆದುಕೊಂಡಿದ್ದೇನೆ
ಈಗ
ಗೂಗಲ್
ಮೂಲಕ
ಭಾರತಕ್ಕೆ
ವಾಪಸ್
ಕೊಡುವ
ಅವಕಾಶ
ಸಿಕ್ಕಿರುವುದು
ನನ್ನ
ಅದೃಷ್ಟ
ಎಂದು
ತಮ್ಮ
ಭಾಷಣ
ಮುಗಿಸಿದರು.
ಮಹಿಳಾ
ಸಬಲೀಕರಣಕ್ಕಾಗಿ
'ಇಂಟರ್ನೆಟ್
ಸಾಥಿ'
ಯೋಜನೆಯ
ಬಗ್ಗೆ
ವಿಡಿಯೋ: