Goods Train: ಚಾಲಕನಿಲ್ಲದೇ ಬರೊಬ್ಬರಿ 70ಕಿ.ಮೀ. ಚಲಿಸಿದ ರೈಲು: ವಿಡಿಯೋ ವೈರಲ್
ನವದೆಹಲಿ, ಫೆಬ್ರವರಿ 27: ತಂತ್ರಜ್ಞಾನ ಯುಗದಲ್ಲಿ ಡ್ರೈವರ್ಲೆಸ್ ಟ್ರೈನ್ಗಳು ಸೇವೆ ನೀಡುತ್ತಿವೆ. ಆದರೆ ಇಲ್ಲೊಂದು ಚಾಲಕ ಸಹಿತ ರೈಲು ಚಾಲಕನಿಲ್ಲದೇ ಬಹುದೂರ ಸಾಗಿದ ಅಪರೂಪದ ಘಟನೆ ನಡೆದಿದೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತೀ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿಯೇ ಇದೊಂದು ಗಂಭೀರ ಪ್ರಕರಣ ಎನ್ನಬಹುದು. ಜಮ್ಮು ಮತ್ತು ಕಾಶ್ಮಿರದಲ್ಲಿ ನಡೆದಿದೆ. ಜಲ್ಲಿಕಲ್ಲು ತುಂಬಿದ್ದ ಸರಕು ಸಾಗಣೆ ರೈಲು ಚಾಲಕನಿಲ್ಲದೇ 70 ಕಿಲೋ ಮೀಟರ್ ಪ್ರಯಾಣ ಮಾಡಿದ ಘಟನೆ ಜರುಗಿದೆ. ಸದ್ಯ ಪ್ರಕರಣ ಹೇಗಾಯ್ತು? ಯಾಕಾಯಿತು ಎಂದು ತನಿಖೆಗೆ ಆದೇಶಿಸಿರುವುದಾಗಿ ಭಾರತೀಯ ರೈಲ್ವೇ ಸೋಮವಾರ ಮಾಹಿತಿ ನೀಡಿದೆ.

ಮರದ ದಿಮ್ಮಿಗಳ ಸಹಾಯದಿಂದ ನಿಂತಿದ್ದ ರೈಲು
ಸುಮಾರು 50 ಬೋಗಿಗಳು ಗೂಡ್ಸ್ ಗಾಡಿ ಇದಾಗಿದ್ದು, ಜಮ್ಮು ಮತ್ತು ಕಾಶ್ಮೀರದಿಂದ ಪಂಜಾಬ್ ಕಡೆಗೆ ಹೊರಡಬೇಕಿತ್ತು. ಈ ಉದ್ದೇಶದಿಂದ ಜಲ್ಲಿಕಲ್ಲು ಲೋಡ್ ಮಾಡಲಾಗಿತ್ತು. ಭಾನುವಾರ ಹಳಿಗಳ ಮೇಲೆ ಮರ ದಿಮ್ಮಿಗಳ ಸಹಾಯದಿಂದ ನಿಲ್ಲಿಸಲಾಗಿದ್ದ ಈ ರೈಲು ಯಾವೊಬ್ಬ ಚಾಲಕನಿಲ್ಲದೇ ಸುಮಾರು 70 ಕಿಲೋ ಮೀಟರ್ ತನ್ನಷ್ಟಕ್ಕೆ ತಾನೇ ಸಂಚರಿಸಿದೆ.
ಅಧಿಕಾರ ನಿರ್ಲಕ್ಷೆಯಿಂದ ಹೀಗಾಗಯಿತೆ, ಸೂಕ್ತವಾಗಿ ಮರ ದಿಮ್ಮೆಯಿಂದ ನಿಲ್ಲಿಸಿರಲಿಲ್ಲವೇ, ತಾಂತ್ರಿಕ ದೋಷವಿದೆಯೆ? ಎಂಬೆಲ್ಲ ಆಯಾಮಗಳ ಮೇಲೆ ಕೇಂದ್ರ ರೈಲ್ವೆ ಇಲಾಖೆ ತನಿಖೆ ಕೈಗೊಳ್ಳಲು ಆದೇಶಿಸಿದೆ ಎಂದು ಉತ್ತರ ರೈಲ್ವೆ ವಕ್ತಾರ ದೀಪಕ್ ಕುಮಾರ್ ಎಎಫ್ಪಿಗೆ ಮಾಹಿತಿ ನೀಡಿದ್ದಾರೆ.
A Goods train ran 70 Kms without a driver in Punjab. The train wanted to prove that it too has the potential to run without a driver. pic.twitter.com/KnrD0MU65u
— Luv Datta #INC (@LuvDatta_INC) February 25, 2024
ಗಂಟೆಗೆ 100 ಕಿಮೀ ವೇಗ ಸಂಚಾರ
ಈ ಜಲ್ಲಿಕಲ್ಲು ಹೊತ್ತು ರೈಲು ಪ್ರತಿ ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯವಾಗಿಲ್ಲ. ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಜಮ್ಮುವಿನ ರೈಲು ನಿಲ್ದಾಣದಲ್ಲಿ ಈ ಗೂಡ್ಸ್ ರೈಲು ನಿಲ್ಲಿಸಲಾಗಿದೆ. ರೈಲು ಸಿಬ್ಬಂದಿಯ (ಚಾಲಕ) ಬದಲಾವಣೆ ವೇಳೆ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ರೈಲಿನ ಚಾಲಕ ಮತ್ತು ಅವರ ಸಹಾಯಕ ಇಳಿದ ನಂತರ ಅದು ಇಳಿಜಾರಿನಲ್ಲಿದ್ದ ಕಾರಣ ಚಲಿಸಲು ಆರಂಭಿಸಿತು.
ರಸ್ತೆ ಗೇಟ್ ತುರ್ತು ಬಂದ್ಗೆ ಸೂಚನೆ
ಕೂಡಲೇ ತುರ್ತು ಕರೆಗಳ ಮೂಲಕ ರೈಲು ಸಂಚಾರದ ಮಾರ್ಗದಲ್ಲಿನ ಎಲ್ಲ ರಸ್ತೆ ಗೇಟುಗಳನ್ನು ಮುಚ್ಚಲು ಸೂಚಿಸಲಾಯಿತು. ಯಾರೊಬ್ಬ ಸಾರ್ವಜನಿಕರು ಈ ವೇಳೆ ರಸ್ತೆ ದಾಟದಂತೆ ನೋಡಿಕೊಳ್ಳಲಾಯಿತು. ಹೀಗಾಗಿ ಬೃಹತ್ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರತಿ ದಿನ ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುವ ಭಾರತದ ಕ್ರೀಕಿಂಗ್ ರೈಲು ಜಾಲದಲ್ಲಿ ಆಧುನಿಕ ನಿಲ್ದಾಣಗಳು ಮತ್ತು ಎಲೆಕ್ಟ್ರಾನಿಕ್ ಸಿಗ್ನಲಿಂಗ್ ವ್ಯವಸ್ಥೆಗಳೊಂದಿಗೆ ನೆಟ್ವರ್ಕ್ ಅನ್ನು ನವೀಕರಿಸಲು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದೆ. ಈ ಘಟನೆಯು ಅಧಿಕಾರಿಗಳನ್ನು ಮತ್ತು ಇಲಾಖೆಯನ್ನು ಚಿಂತೆಗೀಡು ಮಾಡುವಂತೆ ಮಾಡಿದೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ











Click it and Unblock the Notifications