Get Updates
Get notified of breaking news, exclusive insights, and must-see stories!

ಎ.ಸಿ. ಕ್ಯಾಬಿನ್ ಗಳಿಂದ ಹೊರಬನ್ನಿ, ಕೆಲ್ಸ ಮಾಡಿ: ಕೇಜ್ರಿ ಗುಡುಗು

ತುಕ್ಕು ಹಿಡಿದಿರುವ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ ಅರವಿಂದ್ ಕೇಜ್ರಿವಾಲ್ ಅವರು, ತಮ್ಮ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಸೋಮಾರಿತನ ತೊರೆದು ಕೆಲಸ ಮಾಡುವಂತೆ ತಾಕೀತು ಮಾಡಿದ್ದಾರೆ.

ನವದಹೆಲಿ, ಮೇ 31: ಕೆಲಸ ಮಾಡದೇ ಸೋಮಾರಿಗಳಾಗಿರುವ ತಮ್ಮ ಸರ್ಕಾರದ ಅಧಿಕಾರಿಗಳ ವಿರುದ್ಧ ದೆಹಲಿ ಮುಖ್ಯಮಂತ್ರಿ ಗುಟುರು ಹಾಕಿದ್ದಾರೆ. ಈ ಎಲ್ಲಾ ಅಪಮಾನಗಳನ್ನು ಮೀರಿ ಮುಂದಿನ ವಿಧಾನಸಭೆ ಚುನಾವಣೆಯೊಳಗೆ ಪಕ್ಷಕ್ಕೊಂದು ಇಮೇಜ್ ತಂದುಕೊಡುವ ನಿಟ್ಟಿನಲ್ಲಿ ಕೇಜ್ರಿವಾಲ್ ಎಂದಿನಂತೆ ಪ್ರಯತ್ನ ಮುಂದುವರಿಸಿದ್ದಾರೆಂಬುದು ಅವರ ಈ ಆಣತಿಯಿಂದ ಸಾಬೀತಾಗಿದೆ.

ಎಲ್ಲಾ ಉನ್ನತ ಮಟ್ಟದ ಅಧಿಕಾರಿಗಳು ತಮ್ಮ ಹವಾ ನಿಯಂತ್ರಿತ ಕ್ಯಾಬಿನ್ ಗಳಿಂದ ಹೊರಬಂದು ಕೆಳ ಮಟ್ಟದ ಅಧಿಕಾರಿಗಳ ಜತೆ ಸಂಪರ್ಕ ಬೆಳೆಸಬೇಕು. ಚುರುಕಾಗಿ, ಅಚ್ಚುಕಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ತಾಕೀತು ಮಾಡಿದ್ದಾರೆ.[ಕಪಿಲ್ ಮಿಶ್ರಾ ಉಚ್ಛಾಟನೆಗೇಕೆ ಕೇಜ್ರಿ ಮುಂದಾಗುತ್ತಿಲ್ಲ?]

Get Out of AC Cabins: Avind Kejriwal's New Orders for Top Officials

ಯಾವುದೇ ಕಾನೂನು, ಶಾಸನಗಳು ಜಾರಿಯಾಗಬೇಕಿದ್ದರೆ ಅಧಿಕಾರಿ ವರ್ಗದ ಸಹಕಾರ, ನಿಷ್ಠೆ ಬೇಕೇ ಬೇಕು. ಹಾಗಾಗಿ, ಅಧಿಕಾರಿಗಳು ತಮ್ಮ ಆಲಸ್ಯವನ್ನು ಬದಿಗೊತ್ತಿ ಬಂದು ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.[ಅರವಿಂದ್ ಕೇಜ್ರಿವಾಲ್ ಒಬ್ಬ 420 : ಸುಬ್ರಮಣಿಯನ್ ಸ್ವಾಮಿ]

ಇತ್ತೀಚೆಗೆ, ತಮ್ಮ ಪಕ್ಷದಲ್ಲಿನ ಒಡಕು, ಖುದ್ದು ಆಮ್ ಆದ್ಮಿ ಪಾರ್ಟಿ (ಆಪ್) ಸರ್ಕಾರದ ಸಚಿವರುಗಳೇ ಹಗರಣಗಳಲ್ಲಿ ಸಿಲುಕಿ ಹಾಕಿಕೊಂಡಿದ್ದಲ್ಲದೆ, ಖುದ್ದು ಅರವಿಂದ್ ಕೇಜ್ರಿವಾಲ್ ಅವರೇ ಲಂಚ ಆರೋಪಕ್ಕೆ ಗುರಿಯಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+