ಈ ಫೋಟೋ ನೋಡಪ್ಪಾ ಮಗು, ಇವರು ನಿನ್ನ ತಂದೆಯಾ?
ಕಾನ್ಪುರ, ನವೆಂಬರ್ 21: ಆ ರೈಲು ದುರಂತ ಎಷ್ಟೋ ಮಂದಿ ಬದುಕನ್ನು ಕಸಿದುಕೊಂಡಿದೆ. ಅದರಲ್ಲಿ ಈ ನಾಲ್ಕು ವರ್ಷದ ಬಾಲಕನ ಕಥೆ ಮತ್ತೂ ಚಿಂತಾಜನಕ. ಈಗ ಹೇಳಹೊರಟಿರುವುದು ಅದೇ ಇಂದೋರ್-ಪಾಟ್ನಾ ರೈಲು ದುರಂತದ ಕಥೆಯನ್ನೇ. ಅದರಲ್ಲಿ ಬದುಕುಳಿದ ಬಾಲಕ ಎದುರಿಸಿದ ಸ್ಥಿತಿಯ ಬಗ್ಗೆಯೇ.
ಆದರ್ಶ್ ಪಾಂಡೆ ಆ ಬಾಲಕನ ಹೆಸರು. ತನ್ನ ತಂದೆ-ತಾಯಿ ಹಾಗೂ ಅಣ್ಣನ ಜತೆಗೆ ಮದುವೆಗೆ ಹೊರಟಿದ್ದ. ಅಪಘಾತವಾಯಿತು, ಆ ಹುಡುಗನ ಬಲಗಾಲು ಮುರಿಯಿತು, ಬಲಗೈಗೆ ಗಾಯವಾಯಿತು. ಚಿಕಿತ್ಸೆಗೆ ಪುಕ್ರಾಯನ್ ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಾಂಡೆಗೆ ಚಿಕಿತ್ಸೆ ಕೂಡ ನೀಡಲಾಗುತ್ತಿದೆ.[IN PICS: ಕಾನ್ಪುರ ರೈಲು ದುರಂತದ ಮನಸ್ಸು ಕಲಕುವ ಚಿತ್ರ..]

ಅತನ ತಂದೆ-ತಾಯಿ ಹಾಗೂ ಅಣ್ಣ ಏನಾದರು ಅಂತ ಗೊತ್ತಾಗಬೇಕಲ್ಲ, ಸ್ಥಳೀಯ ಪೊಲೀಸರು ಯಾವುದೇ ಪುರುಷರ ಶವ ಪತ್ತೆ ಹಚ್ಚಲಿ, ಅದರ ಫೋಟೋ ತೆಗೆದು ತಂದು ಈ ಬಾಲಕನ ಮುಂದೆ ಹಿಡೀತಾರೆ. ಇವರಾ ನಿನ್ನ ತಂದೆ ಅಂತ ಪ್ರಶ್ನೆ ಮಾಡ್ತಾರೆ. ಆದರೆ ದುರಂತದಿಂದ ಆ ಹುಡುಗ ಆಘಾತಕ್ಕೆ ಒಳಗಾಗಿದ್ದಾನೆ.[ಕ್ಯಾನ್ಸರ್ ನಿಂದ ಸತ್ತ 14ರ ಬಾಲಕಿಯ ದೇಹ ಇನ್ನೂ 'ಜೀವಂತ'!]
ನಾವು ಕಾನ್ಪುರಕ್ಕೆ ಹೋಗ್ತಿದ್ದಿವಿ. ಅಮ್ಮನ ಸಂಬಂಧಿ ಮನೆಗೆ ಹೋಗ್ತಿದ್ದಿವಿ ಎಂಬುದನ್ನೇ ಪದೇ ಪದೇ ಹೇಳ್ತಿದ್ದಾನೆ ಆದರ್ಶ್ ಪಾಂಡೆ. ಟಿವಿಯಲ್ಲಿ ಆದರ್ಶ್ ನನ್ನು ನೋಡಿದ ಸಂಬಂಧಿ ಮನೋಜ್ ಕುಮಾರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಧಾವಿಸಿದ್ದಾರೆ. ಅವರನ್ನು ಈ ಬಾಲಕ ಗುರುತು ಹಿಡಿದಿದ್ದಾನೆ. ಆದರೆ ಅತನ ತಂದೆ, ಅಣ್ಣ, ಅಮ್ಮ ಇನ್ನೂ ಯಾರೂ ಪತ್ತೆಯಾಗಿಲ್ಲ. ಈ ಕುಟುಂಬ ಭೋಪಾಲ್ ನಿಂದ ವಾರಣಾಸಿಗೆ ಮದುವೆಯೊಂದಕ್ಕೆ ಹೊರಟಿತ್ತು.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications