ಈ ಫೋಟೋ ನೋಡಪ್ಪಾ ಮಗು, ಇವರು ನಿನ್ನ ತಂದೆಯಾ?
ಕಾನ್ಪುರ, ನವೆಂಬರ್ 21: ಆ ರೈಲು ದುರಂತ ಎಷ್ಟೋ ಮಂದಿ ಬದುಕನ್ನು ಕಸಿದುಕೊಂಡಿದೆ. ಅದರಲ್ಲಿ ಈ ನಾಲ್ಕು ವರ್ಷದ ಬಾಲಕನ ಕಥೆ ಮತ್ತೂ ಚಿಂತಾಜನಕ. ಈಗ ಹೇಳಹೊರಟಿರುವುದು ಅದೇ ಇಂದೋರ್-ಪಾಟ್ನಾ ರೈಲು ದುರಂತದ ಕಥೆಯನ್ನೇ. ಅದರಲ್ಲಿ ಬದುಕುಳಿದ ಬಾಲಕ ಎದುರಿಸಿದ ಸ್ಥಿತಿಯ ಬಗ್ಗೆಯೇ.
ಆದರ್ಶ್ ಪಾಂಡೆ ಆ ಬಾಲಕನ ಹೆಸರು. ತನ್ನ ತಂದೆ-ತಾಯಿ ಹಾಗೂ ಅಣ್ಣನ ಜತೆಗೆ ಮದುವೆಗೆ ಹೊರಟಿದ್ದ. ಅಪಘಾತವಾಯಿತು, ಆ ಹುಡುಗನ ಬಲಗಾಲು ಮುರಿಯಿತು, ಬಲಗೈಗೆ ಗಾಯವಾಯಿತು. ಚಿಕಿತ್ಸೆಗೆ ಪುಕ್ರಾಯನ್ ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಾಂಡೆಗೆ ಚಿಕಿತ್ಸೆ ಕೂಡ ನೀಡಲಾಗುತ್ತಿದೆ.[IN PICS: ಕಾನ್ಪುರ ರೈಲು ದುರಂತದ ಮನಸ್ಸು ಕಲಕುವ ಚಿತ್ರ..]
ಅತನ ತಂದೆ-ತಾಯಿ ಹಾಗೂ ಅಣ್ಣ ಏನಾದರು ಅಂತ ಗೊತ್ತಾಗಬೇಕಲ್ಲ, ಸ್ಥಳೀಯ ಪೊಲೀಸರು ಯಾವುದೇ ಪುರುಷರ ಶವ ಪತ್ತೆ ಹಚ್ಚಲಿ, ಅದರ ಫೋಟೋ ತೆಗೆದು ತಂದು ಈ ಬಾಲಕನ ಮುಂದೆ ಹಿಡೀತಾರೆ. ಇವರಾ ನಿನ್ನ ತಂದೆ ಅಂತ ಪ್ರಶ್ನೆ ಮಾಡ್ತಾರೆ. ಆದರೆ ದುರಂತದಿಂದ ಆ ಹುಡುಗ ಆಘಾತಕ್ಕೆ ಒಳಗಾಗಿದ್ದಾನೆ.[ಕ್ಯಾನ್ಸರ್ ನಿಂದ ಸತ್ತ 14ರ ಬಾಲಕಿಯ ದೇಹ ಇನ್ನೂ 'ಜೀವಂತ'!]
ನಾವು ಕಾನ್ಪುರಕ್ಕೆ ಹೋಗ್ತಿದ್ದಿವಿ. ಅಮ್ಮನ ಸಂಬಂಧಿ ಮನೆಗೆ ಹೋಗ್ತಿದ್ದಿವಿ ಎಂಬುದನ್ನೇ ಪದೇ ಪದೇ ಹೇಳ್ತಿದ್ದಾನೆ ಆದರ್ಶ್ ಪಾಂಡೆ. ಟಿವಿಯಲ್ಲಿ ಆದರ್ಶ್ ನನ್ನು ನೋಡಿದ ಸಂಬಂಧಿ ಮನೋಜ್ ಕುಮಾರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಧಾವಿಸಿದ್ದಾರೆ. ಅವರನ್ನು ಈ ಬಾಲಕ ಗುರುತು ಹಿಡಿದಿದ್ದಾನೆ. ಆದರೆ ಅತನ ತಂದೆ, ಅಣ್ಣ, ಅಮ್ಮ ಇನ್ನೂ ಯಾರೂ ಪತ್ತೆಯಾಗಿಲ್ಲ. ಈ ಕುಟುಂಬ ಭೋಪಾಲ್ ನಿಂದ ವಾರಣಾಸಿಗೆ ಮದುವೆಯೊಂದಕ್ಕೆ ಹೊರಟಿತ್ತು.