ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ: ಸಮಜಾಯಿಷಿ ನೀಡಿದ ಫೋರ್ಟೀಸ್ ಆಸ್ಪತ್ರೆ
ಗುರ್ಗಾಂವ್, ನವೆಂಬರ್ 22: ಡೆಂಗ್ಯೂ ಪೀಡಿತ ಏಳು ವರ್ಷದ ಮಗುವಿನ ಸಾವು ಮತ್ತು ದುಬಾರಿ ಬಿಲ್ಲಿಗೆ ಸಂಬಂಧಿಸಿದಂತೆ ಫೋರ್ಟಿಸ್ ಆಸ್ಪತ್ರೆಯ ಮೇಲೆ ಬಂದಿರುವ ಆರೋಪವನ್ನು ಫೋರ್ಟೀಸ್ ಹೆಲ್ತ್ ಕೇರ್ ತಳ್ಳಿಹಾಕಿದೆ.
ಲಿಖಿತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಫೋರ್ಟೀಸ್ ಆಸ್ಪತ್ರೆ, 'ನಮಗೆ ತಂದೆ-ತಾಯಿಗಳ ನೋವು ಅರ್ಥವಾಗುತ್ತದೆ. ಮಗುವಿನ ಸಾವಿನ ದುಃಖದಲ್ಲಿ ಅವರು ಈ ರೀತಿ ಆರೋಪ ಮಾಡುತ್ತಿರಬಹುದು. ಆದರೆ ನಮ್ಮಲ್ಲಿ ಯಾವುದೇ ರೀತಿಯ ಬೇಜವಾಬ್ದಾರಿ ವರ್ತನೆ ನಡೆದಿಲ್ಲ, ಜೊತೆಗೆ ದುಬಾರಿ ಬಿಲ್ಲು ಪಾವತಿಸುವಂತೆ ಹೇಳಿಲ್ಲ. ಮಾಧ್ಯಮಗಳಲ್ಲಿ ಅವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆಯಷ್ಟೆ. ನಾವು ಆಸ್ಪತ್ರೆಯ ನೀತಿ-ನಿಯಮಕ್ಕನುಗುಣವಾಗಿಯೇ ನಡೆದುಕೊಂಡಿದ್ದೇವೆ' ಎಂದಿದೆ.

'ಮಗುವನ್ನು ಆಸ್ಪತ್ರೆಗೆ ಸೇರಿಸುವಾಗಲೇ ಅದು ಗಂಭೀರ ಸ್ಥಿತಿಯಲ್ಲಿತ್ತು. ಆದ್ದರಿಂದ ಚಿತಿತ್ಸೆ ಫಲಕಾರಿಯಾಗಿಲ್ಲ' ಎಂದು ಆಸ್ಪತ್ರೆಯ ವ್ಯವಸ್ಥಾಪಕ ಮಂಡಳಿ ಸಮಜಾಯಿಷಿ ನೀಡಿದೆ.
ಐಎಂಎ ಸಮರ್ಥನೆ
18 ಲಕ್ಷ ರೂ. ಬಿಲ್ಲು ತೆಗೆದುಕೊಂಡ ಫೋರ್ಟೀಸ್ ಆಸ್ಪತ್ರೆ ಕ್ರಮವನ್ನು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಸಮರ್ಥಿಸಿಕೊಂಡಿದೆ. ಮಗುವನ್ನು ಬದುಕಿಸಲು ನಾವು ಎಲ್ಲ ರೀತಿಯ ವೈದ್ಯಕೀಯ ಸಾಧ್ಯತೆಗಳನ್ನೂ ಪಾಲಿಸುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಹೆಚ್ಚು ವೆಚ್ಚವಾಗಿದ್ದರೆ ಅದನ್ನು ಆಸ್ಪತ್ರೆಯ ತಪ್ಪು ಎನ್ನುವುದಕ್ಕಾಗುವುದಿಲ್ಲ ಎಂದು ಐಎಂಎ ಯ ರಾಷ್ಟ್ರೀಯ ಅಧ್ಯಕ್ಷ ಕೆ.ಕೆ.ಅಗರ್ವಾಲ್ ಹೇಳಿದ್ದಾರೆ.
ಆದ್ಯಾ ಸಿಂಗ್ ಎಂಬ 7 ವರ್ಷದ ಮಗುವನ್ನು ಡೆಂಗ್ಯೂ ಚಿಕಿತ್ಸೆಗಾಗಿ ಗುರ್ಗಾಂವ್ ನ ಫೋರ್ಟೀಸ್ ಮೆಮೋರಿಯಲ್ ಆಸ್ಪತ್ರೆಗೆ ಆಗಸ್ಟ್ 31 ರಂದು ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, 15 ದಿನಗಳ ನಂತರ ಮಗು ಅಸುನೀಗಿತ್ತು. ಮಗು ಮೊದಲೇ ಸತ್ತಿದ್ದರೂ ಹಣಕ್ಕಾಗಿ ವೈದ್ಯರು ಸುಳ್ಳು ಹೇಳುತ್ತಿದ್ದಾರೆಂಬ ಅನುಮಾನವನ್ನು ಮಗುವಿನ ಪಾಲಕರು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಕೇವಲ 15 ದಿನದ ಚಿಕಿತ್ಸೆಗೆ 18 ಲಕ್ಷ ರೂ. ಬಿಲ್ಲು ಮಾಡಿದ ಆರೋಪವೂ ಆಸ್ಪತ್ರೆಯ ಮೇಲಿತ್ತು. ಈ ಕುರಿತು ತನಿಖೆ ನಡೆಸುವ ಭರವಸೆಯನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ನೀಡಿದ್ದರು.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications