ಕಾವಡಿ ಯಾತ್ರಿಗಳಿಗೆ ಹೂವು, ನಮಗಾದರೆ ಬುಲ್ಡೋಜರಾ...! ಯೋಗಿಗೆ ಓವೈಸಿ ತರಾಟೆ
ಲಕ್ನೋ, ಜುಲೈ. 27: ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ತಾರತಮ್ಯವನ್ನು ಮಾಡುತ್ತಿದೆ ಎಂದು ಆರೋಪಿಸಿದ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಕಾವಡಿ ಯಾತ್ರಿಗಳಿಗೆ (Kanwar Piligrims) ವೈಮಾನಿಕ ಹೂವಿನ ಮಳೆಯಿಂದ ಸ್ವಾಗತಿಸಿದರೆ, ಮುಸ್ಲಿಮರಿಗಾದರೆ ಬೊಲ್ಡೋಜರ್ನಿಂದ ಮನೆಗಳನ್ನು ಕೆಡವುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಂಸತ್ತಿನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಗಿ ಅವರೇ ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ ಮಾಡಲು ತೆರಿಗೆದಾರರ ಹಣವನ್ನು ಬಳಸುತ್ತಿದ್ದೀರಿ, ತುಂಬಾ ಚೆನ್ನಾಗಿದೆ, ನಮ್ಮ ಮೇಲೂ ಸ್ವಲ್ಪ ಕರುಣೆ ತೋರಿ, ನಮ್ಮನ್ನೂ ಸಮಾನವಾಗಿ ಪರಿಗಣಿಸಿ ಎಂದು ನಾವು ಹೇಳುತ್ತಿದ್ದೇವೆ. ಅವರ ಮೇಲೆ ಹೂವಿನ ಮಳೆ ಸುರಿಸುತ್ತಿದ್ದೀರಿ, ಕನಿಷ್ಠ ನಮ್ಮ ಮನೆಗಳನ್ನಾದರೂ ಉಳಿಸಿ ಎಂದರು.
ಮೀರತ್ನ ಪೊಲೀಸ್ ಮುಖ್ಯಸ್ಥರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಕಾವಡಿ ಯಾತ್ರಿಗಳ ಮೇಲೆ ಹೂವಿನ ಮಳೆ ಸುರಿಸುತ್ತಿರುವ ಹಾಗೂ ಹಾಪುರ್ನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಕಾವಡಿ ಯಾತ್ರಿಯೊಬ್ಬರ ಕಾಲುಗಳ ಮೇಲೆ ನೋವು ನಿವಾರಕ ಸ್ಪ್ರೇ ಅನ್ನು ಹಾಕುತ್ತಿರುವ ದೃಶ್ಯಗಳು ವೈರಲ್ ಆದ ನಂತರ ಓವೈಸಿ ಈ ಹೇಳಿಕೆ ನೀಡಿದ್ದಾರೆ.
ನೀವು ಅವರ ಕಾಲಿಗೆ ಮಸಾಜ್ ಮಾಡುತ್ತಿರುವುದು ಒಳ್ಳೆಯದು, ಆದರೆ ನೀವು ಸಹರಾನ್ಪುರದಲ್ಲಿ ಮುಸ್ಲಿಂ ಯುವಕನನ್ನು ಕರೆದೊಯ್ದು ಹೊಡೆದಿದ್ದೀರಿ. ಹೀಗೆ ತಾರತಮ್ಯ ಮಾಡಬೇಡಿ. ಅದಕ್ಕೆ ಸಂವಿಧಾನ ಅವಕಾಶ ನೀಡುವುದಿಲ್ಲ. ಲಕ್ನೋದ ಲುಲು ಮಾಲ್ ಬಳಿ ನಮಾಜ್ ಗಲಾಟೆಯನ್ನು ಉಲ್ಲೇಖಿಸಿದ ಓವೈಸಿ ಅಲ್ಲಿ ನಮಾಜ್ ಮಾಡುತ್ತಿದ್ದವರು ಆ ದಿಕ್ಕಿಗೆ ಮುಖಮಾಡಿ ಯಾವ ದೇವರನ್ನು ಪ್ರಾರ್ಥಿಸುತ್ತಿದ್ದರು ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಏಕೆಂದರೆ ಅವರು 18 ಸೆಕೆಂಡುಗಳಲ್ಲಿ ನಮಾಜ್ ಮುಗಿಸಿದರು ಎಂಬುದೇ ಆಶ್ಚರ್ಯ ಎಂದರು.
ಇದಕ್ಕೂ ಮೊದಲು ಅಸಾದುದ್ದೀನ್ ಓವೈಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಕಾವಡಿ ಯಾತ್ರೆ ಕುರಿತು ಸುದ್ದಿ ವರದಿಗಳನ್ನು ಹಂಚಿಕೊಂಡು ಒಂದು ಧರ್ಮಕ್ಕೆ ಸಂಚಾರ ವ್ಯತ್ಯಯ ಮತ್ತು ಇನ್ನೊಂದು ಧರ್ಮಕ್ಕೆ ಬುಲ್ಡೋಜರ್ ಕ್ರಮ. ಏಕೆ?" ಎಂದು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ರೆವಿಡಿ ಸಂಸ್ಕೃತಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿದೆ ಎಂದು ಅವರು ಹೇಳಿದರು.

ಧರ್ಮಕ್ಕಾಗಿ ಗುಂಡಿನ ದಾಳಿ, ಕಸ್ಟಡಿಯಲ್ ಟಾರ್ಚರ್
ಮುಸಲ್ಮಾನರು ಕೆಲವು ನಿಮಿಷಗಳ ಕಾಲ ನಮಾಜ್ ಮಾಡಿದರೆ ಅವ್ಯವಸ್ಥೆ ಎನ್ನಲಾಗುತ್ತದೆ. ಮುಸ್ಲಿಮರು ಕೇವಲ ಅವರ ಧರ್ಮಕ್ಕಾಗಿ ಗುಂಡಿನ ದಾಳಿ, ಕಸ್ಟಡಿಯಲ್ ಟಾರ್ಚರ್, ಎನ್ಎಸ್ಎ, ಯುಎಪಿಎ, ಮತ್ತು ಬುಲ್ಡೋಜರ್ ದಾಳಿಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

2013ರಲ್ಲಿ 62 ಸಾವುಗಳು
ಮತ್ತೊಂದು ಇತ್ತೀಚಿನ ಘಟನೆಯಲ್ಲಿ, ಮೀರತ್ನ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ವ್ಯಕ್ತಿಯೊಬ್ಬರು ನಮಾಜ್ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಂಡು ಬಂದಿದೆ. 2013ರಲ್ಲಿ ಆಗಸ್ಟ್ನಿಂದ ಸೆಪ್ಟೆಂಬರ್ ನಡುವೆ ಉತ್ತರ ಪ್ರದೇಶ ರಾಜ್ಯದ ಮುಜಾಫರ್ನಗರ ಜಿಲ್ಲೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಘರ್ಷಣೆಗಳಿಂದ 42 ಮುಸ್ಲಿಮರು ಮತ್ತು 20 ಹಿಂದೂಗಳು ಸೇರಿದಂತೆ 62 ಸಾವುಗಳು ಸಂಭವಿದಿವೆ. ಅಲ್ಲದೆ ಈ ವೇಳೆ 200 ಮಂದಿ ಗಾಯಗೊಂಡು 50,000ಕ್ಕೂ ಹೆಚ್ಚು ಸ್ಥಳಾಂತರಗೊಂಡಿದ್ದಾರೆ.

100 ಮುಸ್ಲಿಂ ಹುಡುಗಿಯರನ್ನು ಗುರಿ ಮಾಡುತ್ತೇವೆ
ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಪಾಲಿನ ವಿವಾದಕ್ಕಿಂತ ಹೆಚ್ಚಿನದನ್ನು ಮಾಡಿದ್ದಾರೆ. ಆಗಸ್ಟ್ 2014 ರಲ್ಲಿ ಯೂಟ್ಯೂಬ್ನಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ ಆದಿತ್ಯನಾಥ್ ಅವರು ಅಜಂಗಢದಲ್ಲಿ ಸಾರ್ವಜನಿಕ ಭಾಷಣದಲ್ಲಿ ಅಂತರ್-ಧರ್ಮೀಯ ವಿವಾಹಗಳಿಂದಾಗಿ ಧಾರ್ಮಿಕ ಮತಾಂತರವಾಗುತ್ತಿವೆ. ಅವರು ಒಬ್ಬ ಹಿಂದೂ ಹುಡುಗಿಯನ್ನು ಮದುವೆಯಾದರೆ ನಾವು 100 ಮುಸ್ಲಿಂ ಹುಡುಗಿಯರನ್ನು ಗುರಿ ಮಾಡುತ್ತೇವೆ. ಅವರು ಒಬ್ಬ ಹಿಂದೂವನ್ನು ಕೊಂದರೆ, ನಾವು 100 ಮಂದಿಗೆ ಗುರಿ ಮಾಡುತ್ತೇವೆ ಎಂದು ಹೇಳುವ ವಿಡೀಯೋ ಹರಿದಾಡಿತ್ತು.

ಹಿಂದೂಸ್ತಾನವನ್ನು ತೊರೆಯಬಹುದು
ಫೆಬ್ರವರಿ 2015 ರಲ್ಲಿ ವಿಶ್ವ ಹಿಂದೂ ಪರಿಷತ್ತಿನ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಮಾತನಾಡುವಾಗ ಯೋಗಿ ಆದಿತ್ಯನಾಥ್, ಅವಕಾಶ ಸಿಕ್ಕರೆ, ನಾವು ಗೌರಿ, ಗಣೇಶ ಮತ್ತು ನಂದಿ ದೇವಿಯ ಪ್ರತಿಮೆಗಳನ್ನು ಪ್ರತಿ ಮಸೀದಿಯಲ್ಲಿ ಸ್ಥಾಪಿಸುತ್ತೇವೆ ಎಂದು ಹೇಳಿದ್ದರು. ಜೂನ್ 2015 ರಲ್ಲಿ ಆದಿತ್ಯನಾಥ್ ಅವರು ಸೂರ್ಯ ನಮಸ್ಕಾರದ ಬಗ್ಗೆ ಮಾತನಾಡುತ್ತಾ, ಯೋಗವನ್ನು ತಪ್ಪಿಸಲು ಬಯಸುವವರು ಹಿಂದೂಸ್ತಾನವನ್ನು ತೊರೆಯಬಹುದು. ಸೂರ್ಯದೇವನಲ್ಲಿ ಕೋಮುವಾದವನ್ನು ಕಾಣುವವರು ಸಮುದ್ರದಲ್ಲಿ ಮುಳುಗಬಹುದು ಅಥವಾ ತಮ್ಮ ಜೀವನದುದ್ದಕ್ಕೂ ಕತ್ತಲೆಯ ಕೋಣೆಯಲ್ಲಿ ವಾಸಿಸಬಹುದು ಎಂದು ವಿನಂತಿ ಮಾಡಿದ್ದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications