ಸೋಲುವ ಭೀತಿಯಲ್ಲಿ ಛತ್ತೀಸ್ಘಡ ಸಿಎಂ, ವಸುಂಧರಾ ರಾಜೆಗೆ ಅಲ್ಪ ಮುನ್ನಡೆ
ರಾಯಪುರ, ಡಿಸೆಂಬರ್ 11: ಛತ್ತೀಸ್ಘಡದಲ್ಲಿ ಮತದಾರರು ಸ್ಪಷ್ಟವಾಗಿ ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ. ಅಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.
ಛತ್ತೀಸ್ಘಡದಲ್ಲಿ ಯಾವ ಪರಿ ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆಂದರೆ ಅಲ್ಲಿ ಪ್ರಸ್ತುತ ಮುಖ್ಯಮಂತ್ರಿ ರಮಣ ಸಿಂಗ್ ಅವರೇ ಸೋಲುವ ಭೀತಿ ಎದುರಿಸುತ್ತಿದ್ದಾರೆ.

ಸಿಎಂ ರಮಣ ಸಿಂಗ್ ಅವರು ರಾಜ್ನಂದ್ ಗಾಂವ್ ನಿಂದ ಸ್ಪರ್ಧಿಸಿದ್ದು ಕಾಂಗ್ರೆಸ್ನ ಕರುಣಾ ಶುಕ್ಲಾ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯೇ ಸೋಲುವ ಸಾಧ್ಯತೆ ಇದೆ. ಛತ್ತೀಸ್ಘಡದ ಮಾಜಿ ಸಿಎಂ ಅಜಿತ್ ಜೋಗಿ ಸೋಲುವ ಭಯದಲ್ಲಿದ್ದಾರೆ. ಅವರು ತೀವ್ರ ಹಿನ್ನಡೆ ಅನುಭವಿಸಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ನ ಸಿಎಂ ಅಭ್ಯರ್ಥಿಗಳಾದ ಸಚಿನ್ ಪೈಲೆಟ್ ಭಾರಿ ಮುನ್ನಡೆ ಸಾಧಿಸಿದ್ದಾರೆ. ಜೊತೆಗೆ ಮತ್ತೊಬ್ಬ ಅಭ್ಯರ್ಥಿ ಅಶೋಕ್ ಗೆಹ್ಲೋಟ್ ಸಹ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಸಿಎಂ ವಸುಂಧರಾ ರಾಜೆ ಅಲ್ಪ ಮುನ್ನಡೆಯಲ್ಲಿದ್ದಾರೆ.

ಮಧ್ಯಪ್ರದೇಶದ ಮೂರು ಬಾರಿ ಸಿಎಂ ಶಿವರಾಝ್ ಸಿಂಗ್ ಚೌಹಾಣ್ ಅವರು ನಿರೀಕ್ಷೆಯಂತೆಯೇ ಜಯ ಗಳಿಸುತ್ತಿದ್ದಾರೆ. ಆದರೆ ಅವರ ಸಂಪುಟದಲ್ಲಿದ್ದ ಹಲವು ಸಚಿವರು ಹಿನ್ನಡೆ ಅನುಭವಿಸಿದ್ದು, ಸೋಲುವ ಭೀತಿಯಲ್ಲದ್ದಾರೆ. ಆರಂಭದಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದ ಬಿಜೆಪಿ ನಂತರ ಚೇತರಿಸಿಕೊಂಡು ಇದೀಗ ಕಾಂಗ್ರೆಸ್ ಜೊತೆ ಸಮವಾಗಿ ನಿಂತಿದೆ.












Click it and Unblock the Notifications