ಭಾರತದ 15 ಬಡ ರಾಜ್ಯಗಳು: ರಾಜ್ಯಕ್ಕೆ ಎಷ್ಟನೇ ಸ್ಥಾನ?
ನವದೆಹಲಿ, ಜು 2: ದೇಶದಲ್ಲಿರುವ ಒಟ್ಟು 29 ರಾಜ್ಯಗಳ ಪೈಕಿ (ಕೇಂದ್ರಾಡಳಿತ ಪ್ರದೇಶಗಳನ್ನು ಹೊರತು ಪಡಿಸಿ) ಬಡತನ ರೇಖೆಗಿಂತ ಕೆಳಗಿರುವ ಹದಿನೈದು ರಾಜ್ಯಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದೆ.
ವಿಶ್ವದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಬಡವರು ಭಾರತದಲ್ಲಿ ನೆಲೆಸಿದ್ದಾರೆ. 2004-2005ರ ಅವಧಿಯಲ್ಲಿ ದೇಶದ ಒಟ್ಟು ಬಡವರ ಸಂಖ್ಯೆ ಅಂದಾಜು 396 ಮಿಲಿಯನ್ ಆಗಿತ್ತು. 2014ರಲ್ಲಿ ಈ ಸಂಖ್ಯೆ 148 ಮಿಲಿಯನಿಗೆ ಇಳಿದಿದೆ ಎಂದು ಆರ್ಬಿಐ ತಿಳಿಸಿದೆ.
2011-12ರ ಅವಧಿಯಲ್ಲಿ ಯೋಜನಾ ಆಯೋಗ ನಡೆಸಿದ ಅಧ್ಯಯನದ ಅನ್ವಯ ಗ್ರಾಮೀಣ ಪ್ರದೇಶದಲ್ಲಿನ ಜನರ ಸರಾಸರಿ ಮಾಸಿಕ ತಲಾ ಆದಾಯ (per capita income) ರೂಪಾಯಿ 816, ನಗರವಾಸಿಗಳ ಸರಾಸರಿ ಮಾಸಿಕ ತಲಾ ಆದಾಯ ರೂಪಾಯಿ 1 ಸಾವಿರ. (ಪಿಎಂ, ಬಡತನ, ಮದುವೆ ಬಗ್ಗೆ ರಾಹುಲ್)
ಭಾರತೀಯ ರಿಸರ್ವ ಬ್ಯಾಂಕ್ ಪ್ರಕಟಣೆಯ ಪ್ರಕಾರ ದೇಶದ ಹದಿನೈದು ಬಡ ರಾಜ್ಯಗಳು ಯಾವುವು? ಆ ರಾಜ್ಯಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಶೇಕಡಾವಾರು ಪ್ರಮಾಣವೆಷ್ಟು? ಈ 15 ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯವಿದೆಯೇ ಎನ್ನುವುದನ್ನು ಸ್ಲೈಡಿನಲ್ಲಿ ನೀಡಲಾಗಿದೆ.

ನಕ್ಸಲ್ ಪೀಡಿತ ಛತ್ತೀಸಗಢ ಮೊದಲನೇ ಸ್ಥಾನದಲ್ಲಿ
1. ಛತ್ತೀಸ್ ಗಢ - ಶೇ. 39.93
2. ಜಾರ್ಖಂಡ - ಶೇ. 36.96
3. ಮಣಿಪುರ - ಶೇ. 36.89

ಈ ಪಟ್ಟಿಯಲ್ಲಿ ನಂತರದ ರಾಜ್ಯಗಳಾವುವು?
4. ಅರುಣಾಚಲ ಪ್ರದೇಶ - ಶೇ. 34.67
5. ಬಿಹಾರ - ಶೇ. 33.74
6. ಒರಿಸ್ಸಾ - ಶೇ. 32.59

ಈಶಾನ್ಯ ಭಾರತದ ರಾಜ್ಯ ಅಸ್ಸಾಂ
7. ಅಸ್ಸಾಂ - ಶೇ. 31.98
8. ಮಧ್ಯಪ್ರದೇಶ - ಶೇ. 31.65
9. ಉತ್ತರಪ್ರದೇಶ - ಶೇ. 29.43

ಹತ್ತನೇ ಸ್ಥಾನದಲ್ಲಿ ನಮ್ಮ ರಾಜ್ಯ
10. ಕರ್ನಾಟಕ - ಶೇ. 20.91
11. ಮಿಜೋರಾಂ - ಶೇ. 20.40
12. ಪಶ್ಚಿಮ ಬಂಗಾಳ - ಶೇ. 19.98

ಕೊನೆಯ ಐದು ಸ್ಥಾನಗಳಲ್ಲಿ ದಕ್ಷಿಣದ ರಾಜ್ಯಗಳಿಲ್ಲ
13. ನಾಗಾಲ್ಯಾಂಡ್ - ಶೇ. 18.88
14. ಮಹಾರಾಷ್ಟ - ಶೇ. 17.35
15. ಗುಜರಾತ್ - ಶೇ. 16.63
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications