ಭಾರತದ 15 ಬಡ ರಾಜ್ಯಗಳು: ರಾಜ್ಯಕ್ಕೆ ಎಷ್ಟನೇ ಸ್ಥಾನ?
ನವದೆಹಲಿ, ಜು 2: ದೇಶದಲ್ಲಿರುವ ಒಟ್ಟು 29 ರಾಜ್ಯಗಳ ಪೈಕಿ (ಕೇಂದ್ರಾಡಳಿತ ಪ್ರದೇಶಗಳನ್ನು ಹೊರತು ಪಡಿಸಿ) ಬಡತನ ರೇಖೆಗಿಂತ ಕೆಳಗಿರುವ ಹದಿನೈದು ರಾಜ್ಯಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದೆ.
ವಿಶ್ವದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಬಡವರು ಭಾರತದಲ್ಲಿ ನೆಲೆಸಿದ್ದಾರೆ. 2004-2005ರ ಅವಧಿಯಲ್ಲಿ ದೇಶದ ಒಟ್ಟು ಬಡವರ ಸಂಖ್ಯೆ ಅಂದಾಜು 396 ಮಿಲಿಯನ್ ಆಗಿತ್ತು. 2014ರಲ್ಲಿ ಈ ಸಂಖ್ಯೆ 148 ಮಿಲಿಯನಿಗೆ ಇಳಿದಿದೆ ಎಂದು ಆರ್ಬಿಐ ತಿಳಿಸಿದೆ.
2011-12ರ ಅವಧಿಯಲ್ಲಿ ಯೋಜನಾ ಆಯೋಗ ನಡೆಸಿದ ಅಧ್ಯಯನದ ಅನ್ವಯ ಗ್ರಾಮೀಣ ಪ್ರದೇಶದಲ್ಲಿನ ಜನರ ಸರಾಸರಿ ಮಾಸಿಕ ತಲಾ ಆದಾಯ (per capita income) ರೂಪಾಯಿ 816, ನಗರವಾಸಿಗಳ ಸರಾಸರಿ ಮಾಸಿಕ ತಲಾ ಆದಾಯ ರೂಪಾಯಿ 1 ಸಾವಿರ. (ಪಿಎಂ, ಬಡತನ, ಮದುವೆ ಬಗ್ಗೆ ರಾಹುಲ್)
ಭಾರತೀಯ ರಿಸರ್ವ ಬ್ಯಾಂಕ್ ಪ್ರಕಟಣೆಯ ಪ್ರಕಾರ ದೇಶದ ಹದಿನೈದು ಬಡ ರಾಜ್ಯಗಳು ಯಾವುವು? ಆ ರಾಜ್ಯಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಶೇಕಡಾವಾರು ಪ್ರಮಾಣವೆಷ್ಟು? ಈ 15 ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯವಿದೆಯೇ ಎನ್ನುವುದನ್ನು ಸ್ಲೈಡಿನಲ್ಲಿ ನೀಡಲಾಗಿದೆ.

ನಕ್ಸಲ್ ಪೀಡಿತ ಛತ್ತೀಸಗಢ ಮೊದಲನೇ ಸ್ಥಾನದಲ್ಲಿ
1. ಛತ್ತೀಸ್ ಗಢ - ಶೇ. 39.93
2. ಜಾರ್ಖಂಡ - ಶೇ. 36.96
3. ಮಣಿಪುರ - ಶೇ. 36.89

ಈ ಪಟ್ಟಿಯಲ್ಲಿ ನಂತರದ ರಾಜ್ಯಗಳಾವುವು?
4. ಅರುಣಾಚಲ ಪ್ರದೇಶ - ಶೇ. 34.67
5. ಬಿಹಾರ - ಶೇ. 33.74
6. ಒರಿಸ್ಸಾ - ಶೇ. 32.59

ಈಶಾನ್ಯ ಭಾರತದ ರಾಜ್ಯ ಅಸ್ಸಾಂ
7. ಅಸ್ಸಾಂ - ಶೇ. 31.98
8. ಮಧ್ಯಪ್ರದೇಶ - ಶೇ. 31.65
9. ಉತ್ತರಪ್ರದೇಶ - ಶೇ. 29.43

ಹತ್ತನೇ ಸ್ಥಾನದಲ್ಲಿ ನಮ್ಮ ರಾಜ್ಯ
10. ಕರ್ನಾಟಕ - ಶೇ. 20.91
11. ಮಿಜೋರಾಂ - ಶೇ. 20.40
12. ಪಶ್ಚಿಮ ಬಂಗಾಳ - ಶೇ. 19.98

ಕೊನೆಯ ಐದು ಸ್ಥಾನಗಳಲ್ಲಿ ದಕ್ಷಿಣದ ರಾಜ್ಯಗಳಿಲ್ಲ
13. ನಾಗಾಲ್ಯಾಂಡ್ - ಶೇ. 18.88
14. ಮಹಾರಾಷ್ಟ - ಶೇ. 17.35
15. ಗುಜರಾತ್ - ಶೇ. 16.63
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications