Get Updates
Get notified of breaking news, exclusive insights, and must-see stories!

Tamil Nadu: ವಲಸೆ ಕಾರ್ಮಿಕರ ಮೇಲೆ ದಾಳಿ, ನಕಲಿ ವಿಡಿಯೋ ಹಂಚಿದ್ದ ಯೂಟ್ಯೂಬರ್ ಪೊಲೀಸರ ಮುಂದೆ ಶರಣು

ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ತಮಿಳುನಾಡಿನಲ್ಲಿ ಹಿಂದಿ ಮಾತನಾಡುವುದಕ್ಕಾಗಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದರು.

ಪಾಟ್ನಾ, ಮಾರ್ಚ್ 19: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆದಿದೆ ಎಂದು ನಕಲಿ ವಿಡಿಯೋವನ್ನು ಶೇರ್ ಮಾಡಿದ್ದ ಯೂಟ್ಯೂಬರ್ ಮನೀಶ್ ಕಶ್ಯಪ್ ಅವರು ಶನಿವಾರ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೋ ಹಂಚಿಕೆ ವೇದಿಕೆ ಯೂಟ್ಯೂಬ್‌ನಲ್ಲಿ "ಸಚ್ ತಕ್ ನ್ಯೂಸ್" ಚಾನೆಲ್ ನಡೆಸುತ್ತಿರುವ ಮನೀಶ್ ಕಶ್ಯಪ್ (32) ಅವರ ವಿರುದ್ಧ ಸುಳ್ಳು ಸುದ್ದಿ ಹರಡುವಿಕೆಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಒಂಬತ್ತು ಮತ್ತು ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧ ಘಟಕ (ಇಒಯು) ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿಯ ವಿಡಿಯೋ ನಕಲಿ ಎಂದು ಇಒಯು ಹೆಚ್ಚುವರಿ ಮಹಾನಿರ್ದೇಶಕ ಎನ್‌ಎಚ್ ಖಾನ್ ಹೇಳಿದ್ದಾರೆ.

Fake videos of migrants: YouTuber Manish Kashyap surrenders in Bihar

"ಮನೀಶ್ ಕಶ್ಯಪ್ ಅವರನ್ನು ಬಿಹಾರ ಮತ್ತು ತಮಿಳುನಾಡು ಪೊಲೀಸರು ವಿಚಾರಣೆ ನಡೆಸಲಿದ್ದಾರೆ" ಎಂದು ಹೆಚ್ಚುವರಿ ಮಹಾನಿರ್ದೇಶಕ ಎನ್‌ಎಚ್ ಖಾನ್ ಹೇಳಿದ್ದಾರೆ. ಅವರನ್ನು ಭಾನುವಾರ ಪಾಟ್ನಾದ ವಿಶೇಷ ಜಾಗೃತ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಬೆಟ್ಟಿಯಾದಿಂದ ಇಒಯು ಪೊಲೀಸ್ ಠಾಣೆಗೆ ಕರೆತರಲಾದ ಕಶ್ಯಪ್ ಅವರನ್ನು ವಿಚಾರಣೆ ಮಾಡಲು ತಮಿಳುನಾಡು ಪೊಲೀಸ್ ತಂಡವು ಪಾಟ್ನಾಕ್ಕೆ ಆಗಮಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಲಸೆ ಕಾರ್ಮಿಕರ ಮೇಲಿನ ಹಿಂಸಾಚಾರದ ಆರೋಪಗಳನ್ನು ತಿರಸ್ಕರಿಸಿದ್ದರು. ಭೀತಿಯನ್ನು ಹರಡುವ ವದಂತಿಗಳನ್ನು ಹರಡುವವರ ವಿರುದ್ಧ ತ್ವರಿತ ಕ್ರಮದ ಎಚ್ಚರಿಕೆ ನೀಡಿದ್ದರು. ರಾಜ್ಯದಲ್ಲಿ ವಲಸೆ ಕಾರ್ಮಿಕರಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಅವರು ತಮ್ಮ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಭರವಸೆ ನೀಡಿದ್ದರು.

Fake videos of migrants: YouTuber Manish Kashyap surrenders in Bihar

ವಲಸೆ ಕಾರ್ಮಿಕರ ಮೇಲೆ ದಾಳಿ ಎಂಬ ವಿಷಯವು ಈ ತಿಂಗಳ ಆರಂಭದಲ್ಲಿ ಬಿಹಾರ ವಿಧಾನಸಭೆಯಲ್ಲಿ ಭಾರಿ ಗದ್ದಲ ಉಂಟುಮಾಡಿತ್ತು. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ತಮಿಳುನಾಡಿನಲ್ಲಿ ಹಿಂದಿ ಮಾತನಾಡುವುದಕ್ಕಾಗಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಕಲಾಪವನ್ನು ಸ್ಥಗಿತಗೊಳಿಸಿದರು. ಈ ಬಗ್ಗೆ ತನಿಖೆ ನಡೆಸಿದ ಬಿಹಾರದ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯು ಬಿಜೆಪಿ ಆರೋಪಗಳನ್ನು ತಿರಸ್ಕರಿಸಿದೆ.

ತ್ರಿಪುರಾಯ್ ಕುಮಾರ್ ತಿವಾರಿ ಎಂಬ ಅಲಿಯಾಸ್ ಮನೀಶ್ ಕಶ್ಯಪ್ ಶನಿವಾರ ಬೆಳಗ್ಗೆ ಬೆಟ್ಟಿಯ ಜಗದೀಶ್‌ಪುರ ಪೊಲೀಸ್ ಹೊರಠಾಣೆಯಲ್ಲಿ ಶರಣಾದರು, ಅದೇ ಸಮಯದಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಜಯಂತ್ ಕಾಂತ್ ನೇತೃತ್ವದ ತಂಡವು ಅವರ ನಗರದ ಮಜೌಲಿಯಾ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ತಪಾಸಣೆ ಪ್ರಕ್ರಿಯೆಯನ್ನು ನಡೆಸುತ್ತಿತ್ತು.

ಮನೀಶ್ ಕಶ್ಯಪ್ ಅವರು ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆದ ದಾಳಿಯ ನಕಲಿ ವಿಡಿಯೋವನ್ನು ತಮ್ಮ ಟ್ವಿಟರ್ ಮತ್ತು ಫೇಸ್ ಬುಕ್ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಈ ವಿಡಿಯೋವನ್ನು ರಾಕೇಶ್ ರಂಜನ್ ಕುಮಾರ್ ಸಿಂಗ್ ಚಿತ್ರೀಕರಿಸಿದ್ದಾನೆ ಎಂದು ಪೊಲೀಸರು ತಿಳಿಸುಕೊಂಡುವ ಆತನನ್ನು ಮಾರ್ಚ್ 8 ರಂದು ಗೋಪಾಲ್ಗಂಜ್ ಜಿಲ್ಲೆಯ ತನ್ನ ಗ್ರಾಮದಿಂದ ಬಂಧಿಸಿದ್ದರು. ವಿಚಾರಣೆಯ ಸಮಯದಲ್ಲಿ, ಕಶ್ಯಪ್ ಅವರ ಸೂಚನೆಯ ಮೇರೆಗೆ ತಾನು ವೀಡಿಯೊವನ್ನು ಮಾಡಿದ್ದೇನೆ ಎಂದು ಸಿಂಗ್ ಪೊಲೀಸರಿಗೆ ತಿಳಿಸಿದರು. ನಕಲಿ ವಿಡಿಯೋಗಾಗಿ ಉತ್ತಮ ಹಣ ನೀಡುವ ಭರವಸೆ ನೀಡಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ, ತಮಿಳುನಾಡಿನಲ್ಲಿ ದಾಳಿ ವಲಸಿಗರ ಮೇಲೆ ದಾಳಿ ನಡೆದಿದೆ ಎಂದು ನಕಲಿ ವೀಡಿಯೊಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ (IPC) ಮತ್ತು IT ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಿಹಾರ ಪೋಲೀಸ್‌ನ ಮನೀಶ್ ಕಷ್ಯಪ್ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಪಶ್ಚಿಮ ಚಂಪಾರಣ್ ಜಿಲ್ಲೆಯ ದುಮ್ರಿ ಮಹ್ನವಾ ಗ್ರಾಮದ ನಿವಾಸಿ, ಕಶ್ಯಪ್ 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಚನ್ಪಾಟಿಯಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+