ಗುಜರಾತ್ ಚುನಾವಣೆಯ ಎಕ್ಸಿಟ್ ಪೋಲಿಗೂ ಫಲಿತಾಂಶಕ್ಕೂ ಸಂಬಂಧನೇ ಇರಲಿಲ್ಲ!
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಚುನಾವಣಾ ಆಯೋಗದ ಆದೇಶ ಇದ್ದಿದ್ದರಿಂದ, ವೋಟಿಂಗ್ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳು ಹೊರಬೀಳುತ್ತಿವೆ.
ಇತ್ತೀಚಿನ ದಿನಗಳಲ್ಲಿ ಚುನಾವಣಾತ್ತೋರ ಸಮೀಕ್ಷೆಗಳು ಫಲಿತಾಂಶದಷ್ಟೇ ಜನರನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ. ಕಳೆದ ವರ್ಷ ಅಂದರೆ 2022ರಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆದು, ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿತ್ತು.

ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಬಿಜೆಪಿಗೆ ಭಾರೀ ಪೈಪೋಟಿಯನ್ನು ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಬಿಜೆಪಿಯಲ್ಲಿ ಗದ್ದುಗೆಯನ್ನು ಉಳಿಸಿಕೊಂಡಿತ್ತು.
182ಸ್ಥಾನಗಳನ್ನು ಹೊಂದಿರುವ ಅಸೆಂಬ್ಲಿಯಲ್ಲಿ ಅಧಿಕಾರಕ್ಕೇರಲು 92ಸ್ಥಾನದ ಅವಶ್ಯಕತೆಯಿದೆ. ಎಲ್ಲಾ ವಾಹಿನಿಗಳು ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿ ಮತ್ತೆ ಸರಕಾರ ರಚಿಸುತ್ತದೆ ಎಂದೇನೋ ಹೇಳಿತ್ತು, ಆದರೆ, ಎಕ್ಸಿಟ್ ಪೋಲ್ ನಲ್ಲಿ ಬಂದ ಫಲಿತಾಂಶಕ್ಕೂ ನೈಜ ಫಲಿತಾಂಶಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಬಿಜೆಪಿ 156, ಕಾಂಗ್ರೆಸ್ 17, ಆಪ್ ನಾಲ್ಕು ಮತ್ತು ಇತರರು ನಾಲ್ಕು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದವು.
ಆಜ್ ತಕ್ - ಆಕ್ಸಿಸ್ ಮೈ ಇಂಡಿಯಾ, ನ್ಯೂಸ್ 24 - ಟುಡೇಸ್ ಚಾಣಕ್ಯ ಹೇಳಿದ್ದ ಸಮೀಕ್ಷೆ ಮಾತ್ರ ಫಲಿತಾಂಶಕ್ಕೆ ಹತ್ತಿರವಾಗಿತ್ತು. ಆಜ್ ತಕ್ - ಆಕ್ಸಿಸ್ ಮೈ ಇಂಡಿಯಾ, ಬಿಜೆಪಿಗೆ 129-151, ಕಾಂಗ್ರೆಸ್ಸಿಗೆ 16-30, ಆಪ್ ಗೆ 9-21, ಇತರರು 2-6 ಎನ್ನುವ ಸಮೀಕ್ಷೆಯನ್ನು ನೀಡಿತ್ತು. ಇನ್ನು, ಟುಡೇಸ್ ಚಾಣಕ್ಯ ತಂಡವು ಬಿಜೆಪಿಗೆ 150, ಕಾಂಗ್ರೆಸ್ಸಿಗೆ 19, ಆಪ್ ಗೆ 11, ಇತರರಿಗೆ ಎರಡು ಸ್ಥಾನ ಸಿಗಬಹುದು ಎಂದು ಹೇಳಿತ್ತು.
ಇಂಡಿಯಾ ಟಿವಿ - ಮಾಟ್ರೀಜ್ ನಡೆಸಿದ್ದ ಮತಗಟ್ಟೆ ಸಮೀಕ್ಷೆ
ಇಂಡಿಯಾ ಟಿವಿ - ಮಾಟ್ರೀಜ್ ನಡೆಸಿದ್ದ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಗೆ 104-119, ಕಾಂಗ್ರೆಸ್ಸಿಗೆ 53-68, ಆಪ್ ಗೆ 0-6 ಮತ್ತು ಇತರರು 0-3 ಎಂದು ಹೇಳಿತ್ತು. ಅದೇ ರೀತಿ, ಎಬಿಪಿ - ಸಿವೋಟರ್ ಬಿಜೆಪಿಗೆ 128-140, ಕಾಂಗ್ರೆಸ್ಸಿಗೆ 31-43, ಆಪ್ ಗೆ 3-11, ಇತರರಿಗೆ 2-6 ಸ್ಥಾನ ಸಿಗಬಹುದು ಎಂದು ತನ್ನ ಸರ್ವೇಯಲ್ಲಿ ಹೇಳಿದ್ದವು.
ಟಿವಿ 9 ಗುಜರಾತಿ ನಡೆಸಿದ್ದ ಸಮೀಕ್ಷೆ
ಟಿವಿ 9 ಗುಜರಾತಿ ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿಗೆ 125-130, ಕಾಂಗ್ರೆಸ್ಸಿಗೆ 40-50, ಆಪ್ ಗೆ 3-5, ಇತರರಿಗೆ 3-7 ಸ್ಥಾನ ಸಿಗಬಹುದು ಎಂದು ಹೇಳಿತ್ತು. ಜೀನ್ಯೂಸ್ - ಬಾರ್ಕ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ 110-125, ಕಾಂಗ್ರೆಸ್ 45-60, ಆಪ್ 1-5, ಇತರರು 0-4 ಎಂದು ಅಂದಾಜಿಸಿತ್ತು. ಕೆಲವೊಂದು ಸಮೀಕ್ಷೆಗಳು ನೈಜ ಫಲಿತಾಂಶದಿಂದ ಬಹಳ ದೂರ ಉಳಿದಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.
-
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
ನಾಸೀರ್ ಅಹ್ಮದ್ ವಜಾ; ಪಕ್ಷದಲ್ಲಿ ಶಿಸ್ತಿಲ್ಲದಿದ್ದರೆ ಕ್ರಮ ಎಂದ ಡಿಕೆ ಶಿವಕುಮಾರ್ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
Vijay: ಪ್ರಚಾರದ ವೇಳೆ ಹೂವಿನ ಚೆಂಡು ಎಸೆದ ಅಭಿಮಾನಿ; ಸೈಕಲ್ನಿಂದ ಇಳಿದು ಗಾಡಿ ಹತ್ತಿದ ದಳಪತಿ ವಿಜಯ್, ವಿಡಿಯೋ ವೈರಲ್ -
Upendra: ನಟ ಉಪೇಂದ್ರ ಅವರ "ಪ್ರಜಾಕೀಯ" ಪಕ್ಷದ ವೆಬ್ಸೈಟ್ ಲೋಕಾರ್ಪಣೆ, ಟಿಕೆಟ್ ಆಕಾಂಕ್ಷಿಗಳಿಗೆ ಹೊಸ ರೂಲ್ಸ್ -
ಕೆಲವೇ ಗಂಟೆಗಳಲ್ಲಿ ಇರಾನ್ ಬಂದರುಗಳಿಗೆ ಅಮೆರಿಕದಿಂದ ಕಡಲ ದಿಗ್ಬಂಧನ? ಯುದ್ಧದ ಭೀತಿಯಲ್ಲಿ ಕೊಲ್ಲಿ ರಾಷ್ಟ್ರಗಳು -
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
Siddaramaiah: ಜನರ ದಾರಿತಪ್ಪಿಸುವ ಬಿಜೆಪಿಯನ್ನು ನಂಬಬೇಡಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರಣವೇನು -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ












Click it and Unblock the Notifications