Get Updates
Get notified of breaking news, exclusive insights, and must-see stories!

ಬದ್ರೀನಾಥ್ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕಾಪ್ಟರ್ ಪತನ

ಉತ್ತರಾಖಾಂಡದ ಬದ್ರಿನಾಥ್ ನಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದ ವೇಳೆ ಪತನ. ಓರ್ವ ಕಾಪ್ಟರ್ ಸಿಬ್ಬಂದಿ ಸಾವು. ರೆಡಾರ್ ಬ್ಲೇಡ್ ಗಳು ತಲೆಗೆ ಬಡಿದ ಪರಿಣಾಮವಾಗಿ ಹೆಲಿಕಾಪ್ಟರ್ ಇಂಜಿನಿಯರ್ ವಿಕ್ರಮ ಲಂ

ಡೆಹ್ರಾಡೂನ್, ಜೂನ್ 10: ಉತ್ತರಾಖಾಂಡದ ಬದ್ರೀನಾಥ್ ನಿಂದ ತೆರಳುತ್ತಿದ್ದ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದ ಹೆಲಿಕಾಪ್ಟರ್ ಒಂದು ಪತನಗೊಂಡಿದ್ದು, ಅದರಲ್ಲಿದ್ದ ಸಿಬ್ಬಂದಿಯೊಬ್ಬ ನಿಧನರಾಗಿದ್ದಾರೆ.

ತುರ್ತು ಭೂ ಸ್ಪರ್ಶದ ವೇಳೆ ಕಾಪ್ಟರ್ ನಲ್ಲಿದ್ದ ರೇಡಾರ್ ಬ್ಲೇಡ್ ಗಳು ತಲೆಗೆ ಬಡಿದ ಪರಿಣಾಮವಾಗಿ ಆ ಹೆಲಿಕಾಪ್ಟರ್ ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿಕ್ರಮ ಲಂಬಾ ಎಂಬ ಅಸ್ಸಾಂ ಮೂಲದ ಇಂಜಿನಿಯರ್ ಮೃತಪಟ್ಟಿದ್ದಾರೆಂದು ದೆಹಲಿಯಲ್ಲಿರುವ ನಾಗರಿಕ ವಿಮಾನ ಸೇವೆಗಳ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Engineer Killed, 2 Pilots Injured In Badrinath Helicopter Crash

ಇನ್ನು, ಹೆಲಿಕಾಪ್ಟರ್ ನಲ್ಲಿದ್ದ ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್ ಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಹೆಲಿಕಾಪ್ಟರ್ ನಲ್ಲಿದ್ದವರು ಹೆಚ್ಚಾಗಿ ಗುಜರಾತ್ ನ ವಡೋದರಾದವರೆಂದು ಅಧಿಕಾರಿ ತಿಳಿಸಿದ್ದಾರೆ.

ಬದ್ರಿನಾಥ್ ನಿಂದ ಶನಿವಾರ ಬೆಳಗ್ಗೆ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಂದರೆ, ಸುಮಾರು 7: 45ರ ಸುಮಾರಿಗೆ ಹವೆಯ ಒತ್ತಡದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿತು.

ಇದೇ ವೇಳೆ ತುರ್ತು ಭೂಸ್ಪರ್ಶಕ್ಕಾಗಿ ಪ್ರಯತ್ನಿಸುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡಿತು ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+