Arunachal Pradesh Earthquake: ಅರುಣಾಚಲ ಪ್ರದೇಶದಲ್ಲಿ ಭೂಕಂಪ: 3.1 ತೀವ್ರತೆಯಲ್ಲಿ ಕಂಪಿಸಿದ ಭೂಮಿ
ಅರುಣಾಚಲ ಪ್ರದೇಶದಲ್ಲಿ ಇಂದು ಬೆಳಿಗ್ಗೆ (ಮೇ 8) ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಈ ಮಾಹಿತಿಯನ್ನು ಹಂಚಿಕೊಂಡಿದೆ.
ಸುಬನ್ಸಿರಿ (Lower Subansiri) ಜಿಲ್ಲೆಯಲ್ಲಿ ಬೆಳಗ್ಗೆ 4.55 ರ ಸುಮಾರಿಗೆ ಭೂಕಂಪದ ಅನುಭವವಾಗಿದೆ. ಈ ಸಮಯದಲ್ಲಿ ಎಲ್ಲರೂ ಅವರವರ ಮನೆಗಳಲ್ಲಿ ಮಲಗಿದ್ದರು. ಭೂಮಿಯು ನಡುಗಿದಾಗ ಜನರು ಇದ್ದಕ್ಕಿದ್ದಂತೆ ನಿದ್ದೆಯಿಂದ ಎದ್ದು ಗಾಬರಿಯಿಂದ ಹೊರ ಓಡಿ ಬಂದಿದ್ದಾರೆ. ಕೆಲವರು ಮನೆಯಲ್ಲಿ ಸುರಕ್ಷಿತ ಸ್ಥಳದಲ್ಲಿ ಅವಿತುಕೊಂಡಿದ್ದಾರೆ. ಪ್ರಾಣ ಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಈ ಹಿಂದೆ ಮಾರ್ಚ್ 21ರ ಮುಂಜಾನೆ ಅರುಣಾಚಲ ಪ್ರದೇಶದಲ್ಲಿ ಎರಡು ಭೂಕಂಪಗಳು ಸಂಭವಿಸಿದ್ದವು. 3.7 ರ ತೀವ್ರತೆಯೊಂದಿಗೆ ಮೊದಲ ಭೂಕಂಪವು 01:49 ಕ್ಕೆ ಸಂಭವಿಸಿತ್ತು. ಅದೇ ಸಮಯದಲ್ಲಿ ಸರಿಯಾಗಿ ಎರಡು ಗಂಟೆಗಳ ನಂತರ ಬೆಳಿಗ್ಗೆ 03:40 ಕ್ಕೆ, ಎರಡನೇ ಭೂಕಂಪನ ವರದಿಯಾಗಿತ್ತು. ಈ ಭೂಕಂಪದ ತೀವ್ರತೆ 3.4 ಮತ್ತು ಅದರ ಕೇಂದ್ರಬಿಂದು ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ನಲ್ಲಿತ್ತು. ಇದರಿಂದ ಜನ ಬೆಚ್ಚಿಬಿದ್ದಿದ್ದರು. ಇದರಿಂದ ಯಾವುದೇ ಹಾನಿ ಅಥವಾ ಸಾವುನೋವುಗಳ ತಕ್ಷಣದ ವರದಿಯಾಗಿಲ್ಲ.
An earthquake of magnitude 3.1 on the Richter Scale hit Lower Subansiri, Arunachal Pradesh at 4:55 am today: National Center for Seismology pic.twitter.com/eGJs1WTzug
— ANI (@ANI) May 8, 2024
ಭೂಕಂಪದ ಸಮಯದಲ್ಲಿ ಏನು ಮಾಡಬೇಕು?
*ಸುರಕ್ಷಿತ ಸ್ಥಳಕ್ಕೆ ಹೋಗಿ ಮತ್ತು ಅಲುಗಾಡುವಿಕೆ ನಿಲ್ಲುವವರೆಗೆ ಮನೆಯಿಂದ ಹೊರಬರುವುದು ಮುಖ್ಯ.
*ಮನೆಯಿಂದ ಹೊರಬರಲು ಆಗದೇ ಇದ್ದಾಗ ಗಟ್ಟಿಮುಟ್ಟಾದ ಟೇಬಲ್ ಅಥವಾ ಇತರ ಪೀಠೋಪಕರಣಗಳ ಅಡಿಯಲ್ಲಿ ಅಡಗಿ ಕುಳಿತುಕೊಳ್ಳುವುದು ಮರೆಯಬೇಡಿ.
*ನಿಮ್ಮ ತೋಳುಗಳಿಂದ ನಿಮ್ಮ ಮುಖ ಮತ್ತು ತಲೆಯನ್ನು ಕವರ್ ಮಾಡಿ ಮತ್ತು ಕಟ್ಟಡದ ಒಳಗೆ ಒಂದು ಮೂಲೆಯಲ್ಲಿ ಬಾಗಿರಿ.
*ಕೋಣೆಯ ಮೂಲೆಯಲ್ಲಿ, ಮೇಜಿನ ಕೆಳಗೆ ಅಥವಾ ಹಾಸಿಗೆಯ ಕೆಳಗೆ ಅಡಗಿಕೊಂಡು ನಿಮ್ಮನ್ನು ರಕ್ಷಿಸಿಕೊಳ್ಳಿ.
*ಗಾಜು, ಕಿಟಕಿಗಳು, ಹೊರಗಿನ ಬಾಗಿಲುಗಳು ಮತ್ತು ಗೋಡೆ ಸೇರಿದಂತೆ ಅಪಾಯ ಉಂಟು ಂಆಡುವ ವಸ್ತುಗಳಿಂದ ದೂರವಿರಿ.
*ಕಟ್ಟಡದ ಒಳಗೆ ಬೇರೆ ಸ್ಥಳಕ್ಕೆ ಹೋಗಲು ಪ್ರಯತ್ನಿಸಿ ಅಥವಾ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ. ನೀವು ತೆರೆದ ಜಾಗದಲ್ಲಿದ್ದರೆ, ಅಲುಗಾಡುವಿಕೆ ನಿಲ್ಲುವವರೆಗೆ ಅಲ್ಲಿಯೇ ಇರಿ. ಹೆಚ್ಚಿನ ಭೂಕಂಪ-ಸಂಬಂಧಿತ ಸಾವುಗಳು ಗೋಡೆಗಳು, ಗಾಜುಗಳು ಮತ್ತು ಬೀಳುವ ವಸ್ತುಗಳಿಂದ ಉಂಟಾಗುತ್ತವೆ. ಹೀಗಾಗಿ ಇದರ ಪಕ್ಕ ನಿಂತುಕೊಳ್ಳಬೇಡಿ.
*ವಾಹನ ಚಲಿಸುತ್ತಿರುವಾಗ ಭೂಕಂಪ ಸಂಭವಿಸಿದಲ್ಲಿ ವಾಹನ ನಿಲ್ಲಿಸಿ. ಕಟ್ಟಡಗಳು, ಮರಗಳು, ಮೇಲ್ಸೇತುವೆಗಳು ಮತ್ತು ವಿದ್ಯುತ್ ತಂತಿಗಳ ಬಳಿ ರಸ್ತೆಮಾರ್ಗದಲ್ಲಿ ನಿಲ್ಲಿಸಬೇಡಿ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications