Tirupati Staff Dress Code: ತಿರುಪತಿಯಲ್ಲಿ ಸಿಬ್ಬಂದಿಗೂ ಡ್ರೆಸ್ ಕೋಡ್: ಶ್ರೀವಾರಿಯ ಹೆಸರಿನಿಂದಲೇ ಮಾತು ಆರಂಭ..
ಶ್ರೀಮಂತ ದೇವರುಗಳ ಪಟ್ಟಿಯಲ್ಲಿರುವ ತಿರುಪತಿ ತಿರುಮಲ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸ್ತ್ರಸಹಿತೆ ಜಾರಿಗೊಳಿಸುವುದು ಮಾತ್ರವಲ್ಲದೆ ಸಿಬ್ಬಂದಿಗಳಿಗೂ ಈ ನಿಯಮವನ್ನು ಟಿಟಿಡಿ ಕಡ್ಡಾಯಗೊಳಿಸಿದೆ.
ಹೌದು... ತಿರುಪತಿ ತಿರುಮಲ ದೇಗುಲದಲ್ಲಿ ದೇವಸ್ಥಾನದ ಸಿಬ್ಬಂದಿಗೆ ಡ್ರೆಸ್ ಕೋಡ್ ಜಾರಿಗೊಳಿಸಲಾಗಿದೆ. ಇದಲ್ಲದೆ ಸಿಬ್ಬಂದಿಗಳ ಹಣೆಯ ಮೇಲೆ ವಿಭೂತಿ ಮತ್ತು ಕುಂಕುಮ ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಲಾಗಿದೆ. ನಿಯಮ ಪಾಲಿಸದ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ಥಾನ ಟ್ರಸ್ಟ್ ತಿಳಿಸಿದೆ.

ಶನಿವಾರ ಸಿಬ್ಬಂದಿಗಳಿಗೆ ಬಿಳಿ ಬಟ್ಟೆ ಕಡ್ಡಾಯ
ತಿರುಪತಿ ಶ್ರೀವಾರಿ ದೇವಸ್ಥಾನದಲ್ಲಿ ಮಾತ್ರ ಅಲ್ಲದೆ ತಿರುಪತಿಯ ಯಾವುದೇ ದೇವಸ್ಥಾನದಲ್ಲಿ ಸಿಬ್ಬಂದಿಗಳು ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು. ಅಂದರೆ ಹೆಂಗಸರು ದುಪಟ್ಟಾ ಇಲ್ಲದೆ ಡ್ರೆಸ್ ಹಾಕುವಂತಿಲ್ಲ. ಮಹಿಳೆಯರು ಜೀನ್ಸ್, ಶಾರ್ಟ್ ಸ್ಕರ್ಟ್ ಇತ್ಯಾದಿ ಧರಿಸುವಂತಿಲ್ಲ.
ಅದೇ ರೀತಿ ಪುರುಷರು ಕೂಡ ಜೀನ್ಸ್, ಟೀ ಶರ್ಟ್, ಶಾರ್ಟ್ಸ್ ಧರಿಸುವಂತಿಲ್ಲ. ಬದಲಿಗೆ ಲುಂಗಿ ಅಥವಾ ಸಾಮಾನ್ಯ ಪ್ಯಾಂಟ್ ಧರಿಸಬೇಕು. ಬಹುತೇಕ ದೇವಸ್ಥಾನಗಳಲ್ಲಿ ಈ ಡ್ರೆಸ್ ಕೋಡ್ ಕಡ್ಡಾಯವಾಗಿದೆ. ಹೀಗೆ ಭಕ್ತರಿಗೆ ಮಾತ್ರವಲ್ಲದೆ ದೇವಾಸ್ಥಾನದಲ್ಲಿ ಕೆಲಸ ಮಾಡುವ ಎಲ್ಲ ನೌಕರರಿಗೂ ಡ್ರೆಸ್ ಕೋಡ್ ಜಾರಿಗೊಳಿಸಲಾಗಿದೆ. ಅಲ್ಲದೆ ಶನಿವಾರದಂದು ಎಲ್ಲಾ ಉದ್ಯೋಗಿಗಳು ಬಿಳಿ ಬಟ್ಟೆ ಮತ್ತು ಬಿಳಿ ಅಂಗಿ ಧರಿಸಿ ಕೆಲಸ ಮಾಡಬೇಕು.
ಪ್ರತಿನಿತ್ಯ ಎಲ್ಲಾ ನೌಕರರು ಹಣೆಯ ಮೇಲೆ ತಿಲಕ, ಕುಂಕುಮ ಮತ್ತು ವಿಭೂತಿಯನ್ನು ಇಟ್ಟುಕೊಳ್ಳಬೇಕು. ಅದೇ ರೀತಿ ಮಹಿಳಾ ನೌಕರರು ಸೀರೆ ಕುಪ್ಪಸ, ದುಪಟ್ಟಾದೊಂದಿಗೆ ಸುಡಿಲವಾದ ಬಟ್ಟೆ ಧರಿಸಿ ಹಣೆಗೆ ತಿಲಕ, ಕುಂಕುಮ, ಸ್ಟಿಕ್ಕರ್ ಇಟ್ಟುಕೊಳ್ಳಬೇಕು.

ಶ್ರೀವಾರಿಯ ನಾಮ ಹೇಳುವ ಮೂಲಕ ಮಾತು ಆರಂಭ
ಅಲ್ಲದೆ ದೇವಸ್ಥಾನದಲ್ಲಿರುವ ಎಲ್ಲಾ ನೌಕರರು ಪರಸ್ಪರ ಭೇಟಿಯಾಗುವಾಗ ಗೋವಿಂದಾ ಅಥವಾ ಓಂ ನಮೋ ವೆಂಕಟೇಶಾಯ ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಬೇಕು. ದೇವಸ್ಥಾನಕ್ಕೆ ಬರುವ ಬಖ್ತರೊಂದಿಗೆ ಮಾತನಾಡುವಾಗಲೂ ಸಿಬ್ಬಂದಿಗಳು ಇದೇ ರೀತಿ ಮಾತನ್ನು ಆರಂಭಿಸಿಬೇಕು.
ಈ ನಿರ್ಬಂಧಗಳನ್ನು ಪಾಲಿಸದ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಏಳುಬೆಟ್ಟದ ಒಡೆಯ ಶ್ರೀವಾರಿ
ತಿರುಪತಿ ಶ್ರೀವಾರಿ ದರ್ಶನಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಶ್ರೀವಾರಿ ದರ್ಶನಕ್ಕಾಗಿ ಬರುವ ಭಕ್ತರಿಗೆ ಲಡ್ಡು ಪ್ರಸಾದವನ್ನು ನೀಡಲಾಗುತ್ತದೆ. ದೇವಸ್ಥಾನದಲ್ಲಿ ಉಚಿತ ದರ್ಶನಕ್ಕಾಗಿ ಭಕ್ತರು 10 ಗಂಟೆಗೂ ಹೆಚ್ಚು ಕಾಲ ಕಾಯಬೇಕಾಗುತ್ತದೆ.
ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸೆಳೆಯುವ ಶ್ರೀವಾರಿಗೆ ಭಕ್ತರು ಹರಕೆ ಕೂಡ ತೀರಿಸುತ್ತಾರೆ. ಹೀಗಾಗಿ ತಿಂಗಳಾಂತ್ಯದಲ್ಲಿ ತಿರುಪತಿ ಹಿಂಡಿಯಲ್ಲಿ ದೇಣಿಗೆ ರೂಪದಲ್ಲಿ ಸಾಕಷ್ಟು ಹಣ, ಬೆಲೆಬಾಳುವ ಆಭರಣಗಳು ಸಂಗ್ರಹವಾಗುತ್ತವೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications