ಪೆಲೆಟ್ ಬುಲೆಟ್ ಬದಲು ಪ್ಲಾಸ್ಟಿಕ್ ಬುಲೆಟ್: ಡಿಆರ್ ಡಿಒ ಸಂಶೋಧನೆ
ನವದೆಹಲಿ, ಜನವರಿ 4: ಕಾಶ್ಮೀರದಲ್ಲಿ ಕಲ್ಲು ತೂರುವವರ ವಿರುದ್ಧ ಬಳಸಲಾದ ಪೆಲೆಟ್ ಬುಲೆಟ್ ಭಾರಿ ವಿವಾದ ಸೃಷ್ಟಿಸಿದ್ದರಿಂದ ಅದಕ್ಕೆ ಪರ್ಯಾಯವಾದ ಅಸ್ತ್ರವನ್ನು ಕಂಡುಕೊಳ್ಳಲಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಕಡಿಮೆ ಲೆಥಾಲ್ ಇರುವ ಪ್ಲಾಸ್ಟಿಕ್ ಬುಲೆಟ್ಅನ್ನು ಅಭಿವೃದ್ಧಿಪಡಿಸಿದೆ.
2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರ ಬುರ್ಹಾನ್ ವಾನಿ ಹತ್ಯೆಯ ಬಳಿಕ ನಡೆದ ಹಿಂಸಾಚಾರಗಳನ್ನು ತಡೆಯಲು ಸೈನಿಕರು ಪೆಲೆಟ್ ಬುಲೆಟ್ಗಳನ್ನು ಹಾರಿಸಿದ್ದರು. ಇದರಿಂದ ಸಾವಿರಾರು ಮಂದಿ ಗಾಯಗೊಂಡಿದ್ದರು. ಅನೇಕರು ಅಂಧರಾಗಿದ್ದರು. ಈ ಹಿಂಸಾಚಾರದಲ್ಲಿ ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

ಪೆಲೆಟ್ ಗನ್ಗಳಿಂದ ಭಾರಿ ಅನಾಹುತಗಳು ಆಗುತ್ತಿದೆ ಎಂದು ವ್ಯಾಪಕ ವಿರೋಧಗಳು ಕೇಳಿಬಂದಿದ್ದರಿಂದ ಗೃಹ ಸಚಿವಾಲಯವು ಅದಕ್ಕೆ ಪರ್ಯಾಯವಾಗಿ ಸ್ವದೇಶಿ ನಿರ್ಮಿತ ಪರಿಹಾರ ಕಂಡುಕೊಳ್ಳುವಂತೆ ಡಿಆರ್ ಡಿಒಗೆ ಸೂಚಿಸಿತ್ತು.
ಈ ಪ್ಲಾಸ್ಟಿಕ್ ಬುಲೆಟ್ಗಳನ್ನು ಎಕೆ 47ರ ಮೂಲಕವೂ ಸಿಡಿಸಬಹುದು. ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ಇವುಗಳನ್ನು ಪೂರೈಸಲಾಗುತ್ತದೆ. ಇವು ಆಮದಾದ ರಬ್ಬರ್ ಬುಲೆಟ್ಗಳಿಗಿಂತ ಕಡಿಮೆ ಅಪಾಯಕಾರಿ.
ಇವುಗಳನ್ನು ನೈಲಾನ್ನಿಂದ ತಯಾರಿಸಲಾಗಿದ್ದು, 50 ಮೀಟರ್ ದೂರದಿಂದ ಗುಂಡು ಹಾರಿಸಿದಾಗ ಗಾಯಗಳಾಗುತ್ತವೆ. ಪೆಲೆಟ್ ಬುಲೆಟ್ಗಳಿಗಿಂತ ಇವು 500 ಪಟ್ಟು ಕಡಿಮೆ ಗಾಯ ಉಂಟುಮಾಡುತ್ತವೆ.
ಈ ಬುಲೆಟ್ಗಳು ಉದ್ರಿಕ್ತ ಗುಂಪುಗಳನ್ನು ಚದುರಿಸಲು ಪರಿಣಾಮಕಾರಿಯಾಗಿದ್ದು, ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ಒಂದು ಲಕ್ಷ ಬುಲೆಟ್ಗಳನ್ನು ಪೂರೈಕೆ ಮಾಡಲಾಗಿದೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications