ರಾಹುಲ್ ಏನು ಮಾಡಿಲ್ಲ, ಸುಮ್ಕೆ ಬೈಬೇಡಿ : ಕಾಂಗ್ರೆಸ್
ನವದೆಹಲಿ, ಡಿ.8: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಟ್ರೆಂಡಿಂಗ್ ನೋಡೇ ಬೆಚ್ಚಿರುವ ಕಾಂಗ್ರೆಸ್ ಪಕ್ಷ ಬಿಜೆಪಿ ಕ್ಲೀನ್ ಸ್ವೀಪ್, ಆಮ್ ಆದ್ಮಿ ಪಕ್ಷ ಏಳಿಗೆ ಕಂಡು ಚಿಂತೆಗೀಡಾಗಿದೆ. ಈಗಲೇ ಈ ರೀತಿಯಾದರೆ ಇನ್ಮುಂದೆ ಹೇಗೆ ಎಂಬ ಯೋಚನೆಯಲ್ಲಿರುವ ಕಾಂಗ್ರೆಸ್ ಅವನತಿಗೆ ರಾಹುಲ್ ಗಾಂಧಿ ನೇರ ಕಾರಣ ಎಂಬ ಹೇಳಿಕೆಯನ್ನು ಕಾಂಗ್ರೆಸ್ ಅಲ್ಲಗೆಳೆದಿದೆ.
'ಇದು ಸಂಘಟಿತ ವೈಫಲ್ಯ. ಕಾಂಗ್ರೆಸ್ ಒನ್ ಮ್ಯಾನ್ ಶೋನಲ್ಲಿ ನಂಬಿಕೆ ಇರಿಸಿಕೊಂಡಿಲ್ಲ. ಜನತೆ ಕೊಟ್ಟ ತೀರ್ಪು ಒಪ್ಪಿಕೊಳ್ಳಬೇಕಿದೆ. ಸೋಲಿನ ಕಾರಣ ಹುಡುಕಬೇಕಿದೆ' ಎಂದು ಕೇಂದ್ರ ಸಚಿವೆ ಜಯಂತಿ ನಟರಾಜನ್ ಹೇಳಿದ್ದಾರೆ.
ಅಸೆಂಬ್ಲಿ ಚುನಾವಣೆ ಫಲಿತಾಂಶಕ್ಕೂ ಲೋಕಸಭೆ ಚುನಾವಣೆಗೂ ವ್ಯತ್ಯಾಸವಿದೆ. 1998-99ರಲ್ಲಿ ಅಸೆಂಬ್ಲಿ ಚುನಾವಣೆ ಗೆದ್ದರೂ ಲೋಕಸಭೆಯಲ್ಲಿ ಜಯಭೇರಿ ಬಾರಿಸಲು ಸಾಧ್ಯವಾಗಿರಲಿಲ್ಲ. ಇದೇ ರೀತಿ 2003ರಲ್ಲಿ ಬಿಜೆಪಿಗೂ ಇದೇ ಪರಿಸ್ಥಿತಿ ಅನುಭವಿಸಿತ್ತು ಎಂದಿದ್ದಾರೆ.
ಆದರೆ, ಕಾಂಗ್ರೆಸ್ ಎಷ್ಟೇ ರೀತಿಯಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಮುಚ್ಚಿಡಲು ಯತ್ನಿಸಿದರೂ ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತೊಮ್ಮೆ Pappu can't dance Saala ಎಂಬ ಸಾಲುಗಳು ರಾಹುಲ್ ಕುರಿತ ಜೋಕುಗಳು ಹರಿದಾಡಿವೆ.
ಈ ನಡುವೆ ರಾಹುಲ್ ಗಾಂಧಿ ವಿರುದ್ಧ ನೇರವಾಗಿ ಕಿಡಿಕಾರಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ 'ಜನಪ್ರಿಯ ಯೋಜನೆಗಳು ಯಾವುದೇ ರೀತಿ ಮತಗಳನ್ನು ತಂದುಕೊಟ್ಟಿಲ್ಲ' ಎಂದಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ರಾಹುಲ್ ವಿರುದ್ಧ ಹರಿದಾಡಿರುವ ಟ್ವೀಟ್ಸ್ ಬಹುತೇಕ ಸತ್ಯವನ್ನೇ ಹೇಳುತ್ತಿದೆ. 15 ವರ್ಷಗಳ ನಂತರ ದೆಹಲಿ, 31 ವರ್ಷ ನಂತರ ರಾಜಸ್ಥಾನ ಕಳೆದುಕೊಂಡ ಕಾಂಗ್ರೆಸ್ಸಿಗೆ ಉತ್ತೇಜನ ನೀಡಲು ರಾಹುಲ್ ಎಲ್ಲಾ ರೀತಿಯಿಂದ ಸೋತಿರುವುದು ಸ್ಪಷ್ಟವಾಗಿದೆ. ರಾಹುಲ್ ಬಗ್ಗೆ ಜನತೆ ಏನು ಹೇಳಿದ್ದಾರೆ ಮುಂದೆ ಓದಿ...
|
ಅತಿ ಜನಪ್ರಿಯ ಟ್ವೀಟ್
ರಾಹುಲ್ ಗಾಂಧಿ ಬಗ್ಗೆ ಅತಿ ಜನಪ್ರಿಯ ಟ್ವೀಟ್
|
ವಿವಿಧ ಪಕ್ಷಗಳ ಹೆಸರು
ವಿವಿಧ ಪಕ್ಷಗಳ ಹೆಸರು ಹಾಗೂ ಇಂದಿನ ಸ್ಥಿತಿ ಗತಿ ಬಗ್ಗೆ ಟ್ವೀಟ್
|
ರಾಹುಲ್ ಪರ ಟ್ವೀಟ್
ಅಪರೂಪಕ್ಕೆ ರಾಹುಲ್ ಗಾಂಧಿ ಪರ ಸಾರ್ವಜನಿಕರಿಂದ ಟ್ವೀಟ್
|
ಟ್ರಿಂಗ್ ಟ್ರಿಂಗ್ ಜೋಕ್
ದೆಹಲಿಯಲ್ಲಿ ಸೋತು ಸುಣ್ಣವಾಗಿರುವ ಶೀಲಾ ಮೇಡಂ ಗೆ ಕಾಂಗ್ರೆಸ್ ಉಪಾಧ್ಯಕ್ಷ ಕರೆ ಮಾಡಿ ಕೇಳಿದ್ದೇನು?
|
ರಾಜಕೀಯ ತೊರೆದರೆ ರಾಹುಲ್ ಗತಿ?
ಇತಿಹಾಸಗಾರ ರಾಮಚಂದ್ರ ಗುಹ ರಾಹುಲ್ ಬೇರೆ ವೃತ್ತಿ ಆರಿಸಿಕೊಳ್ಳಲಿ ಎಂದಿದ್ದಕೆ ಪ್ರತಿಯಾಗಿ ಬಂದ ಟ್ವೀಟ್
|
ಬಿಗ್ ಬಾಸ್ ಕೂಡಾ ಖುಷ್
ಬಿಗ್ ಬಾಸ್ ಕೂಡಾ ಖುಷ್ ಅಂತೆ. ಮುಂದಿನ ಸರಣಿಗೆ ಶೀಲಾ ದೀಕ್ಷಿತ್ ಹಾಗೂ ರಾಹುಲ್ ಸ್ಪರ್ಧಿಗಳಾಗಬಹುದಂತೆ.
|
ರಾಹುಲ್ ಎಲ್ಲಿ
ರಾಹುಲ್ ಎಲ್ಲಿ ಎಂದರೆ ನೌಕ್ರಿ.ಕಾಂ ನಲ್ಲಿ ಹುಡುಕಿ, ಹೊಸ ಕೆಲಸಕ್ಕೆ ಅರ್ಜಿ ಹಾಕಿರಬಹುದು.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications