ಆಸಿಡ್ ಸುರಿದ ಅತ್ತೆ, ಹೆರಿಗೆ ಮಾಡಿಸಲ್ಲ ಅಂದ ಆಸ್ಪತ್ರೆ
ನೆಲ್ಲೂರು, ಸೆಪ್ಟೆಂಬರ್ 2: ನೆಲ್ಲೂರಿನ ಆ ಹೆಣ್ಣುಮಗಳ ಹೆಸರು ಗಿರಿಜಾ, ವಯಸ್ಸು 27. ಗರ್ಭಿಣಿಯಾಗಿದ್ದ ಆಕೆಗೆ ಯಾವ ಮಗು ಹುಟ್ಟುತ್ತದೆ ಅಂತ ತಿಳಿದುಕೊಳ್ಳೋಕೆ ಒಬ್ಬ ಜ್ಯೋತಿಷಿಯ ಹತ್ತಿರ ಹೋಗಿದ್ದಾರೆ. ಗಿರಿಜಾಗೆ ಹೆಣ್ಣುಮಗು ಆಗುತ್ತೆ ಎಂದು ಆ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಇದೇ ಕಾರಣಕ್ಕೆ ಆಕೆಯ ಅತ್ತೆ, ನಾದಿನಿ ಸೇರಿ ಮನೆಯ ಸೊಸೆ ಹೊಟ್ಟೆಯ ಮೇಲೆ ಆಸಿಡ್ ಸುರಿದಿದ್ದಾರೆ. ಗಿರಿಜಾಳ ದೇಹ ಶೇ 30ರಷ್ಟು ಸುಟ್ಟುಹೋಗಿದೆ.
ಆಕೆಯ ಅತ್ತೆ, ನಾದಿನಿಯ ಸಿಟ್ಟೇನು ಅಂದರೆ, ಗಿರಿಜಾಗೆ ಅದಾಗಲೇ ಒಂದು ಹೆಣ್ಣುಮಗುವಿತ್ತು. ಅದೊಂದೇ ಕಾರಣಕ್ಕೆ ಹೆಣ್ಣು ಮಗು ಹುಟ್ಟುತ್ತದೆ ಎಂಬ ಜ್ಯೋತಿಷಿಯ ಭವಿಷ್ಯ ನಂಬಿ ಇಂಥ ಕೃತ್ಯ ಎಸಗಿದ್ದಾರೆ. 'ನಾವು ರಾಸಾಯನಿಕದ ವರದಿ ಬರಲಿ ಅಂತ ಕಾಯ್ತಿದ್ದೀವಿ. ಸೀಮೆ ಎಣ್ಣೆಗೆ ರಾಸಾಯನಿಕ ಬಳಸಿ ಗಿರಿಜಾಳ ಮೇಲೆ ಸುರಿದಿದ್ದಾರೆ. ಆಕೆಯ ಅತ್ತೆಗಾಗಿ ಶೋಧ ನಡೆಸ್ತಿದೀವಿ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ವಾಹನಕ್ಕೆ ಹಣ ಹೊಂದಿಸಲಾಗದೆ ಹೆಂಡತಿ ಶವ ಹೊತ್ತು 10 ಕಿ.ಮೀ. ನಡೆದ]
ಗಿರಿಜಾಳ ಗಂಡ ಹಾಗೂ ಮಾವನನ್ನ ಬಂಧಿಸಲಾಗಿದೆ. ನಾದಿನಿ ವಿರುದ್ಧ ಕೊಲೆ ಯತ್ನದ ಕೇಸ್ ಹಾಕಲಾಗಿದೆ.

ಇಲ್ಲಿ ಇನ್ನೊಂದು ಪ್ರಕರಣವಿದೆ. ಉತ್ತರಪ್ರದೇಶದಲ್ಲಿ ನಡೆದಿರುವುದು. ಎಚ್ ಐವಿ ಪಾಸಿಟಿವ್ ಆದ ಗರ್ಭಿಣಿಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದಕ್ಕೆ ನಿರಾಕರಿಸಿದ್ದಾರೆ. ಅಲ್ಲಿಂದ 50 ಕಿ.ಮೀ. ದೂರದ ಆಸ್ಪತ್ರೆಗೆ ಆಕೆಯನ್ನ ಕರೆದುಕೊಂಡು ಹೋಗುವಷ್ಟರಲ್ಲಿ ಆ ಮಗು ಹೊಟ್ಟೆಯಲ್ಲೇ ಸತ್ತುಹೋಗಿದೆ.[12ರ ಬಾಲಕನ ಪ್ರಾಣ ತಂದೆ ಹೆಗಲ ಮೇಲೆ ಹೋಯಿತು...]
ಉತ್ತರ ಪ್ರದೇಶದ ಬದೌನ್ ನಲ್ಲಿರುವ ಆಸ್ಪತ್ರೆಯಲ್ಲಿ ಆ ಹೆಣ್ಣುಮಗಳಿಗೆ ಚಿಕಿತ್ಸೆ ನೀಡಿಲ್ಲ. 'ಆ ತಾಯಿಗೆ ತಕ್ಷಣ ಚಿಕಿತ್ಸೆ ಸಿಕ್ಕಿದ್ದರೆ, ಮಗು ಬದುಕುವ ಅವಕಾಶಗಳಿದ್ದವು' ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಹೆಂಡತಿಯ ಶವ ಸಾಗಿಸುವುದಕ್ಕೆ ವಾಹನಕ್ಕೆ ಹಣ ಹೊಂದಿಸಲಾರದೆ, ಶವ ಹೊತ್ತು ಹತ್ತಾರು ಕಿ.ಮೀ. ನಡೆದ ಒಡಿಶಾದ ದಾನಾ ಮಾಝಿ, ವೈದ್ಯರು ಚಿಕಿತ್ಸೆ ನೀಡಲು ತಡ ಮಾಡಿದ್ದಕ್ಕೆ ಅಪ್ಪನ ಹೆಗಲ ಮೇಲೆ ಪ್ರಾಣ ಬಿಟ್ಟ ಕಾನ್ಪುರದ ಅಂಶ್..
ಈ ರೀತಿ ದಿನವೂ ಸಾಯುತ್ತಿರುವುದು ಮಾನವೀಯತೆ ಅನ್ನಿಸುವುದಿಲ್ವೆ?
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications