ಗೋಡೆ ಹಿಂದೆ ಅವಿತವರ ಪತ್ತೆಗೆ ಸೇನೆಯಿಂದ ಹೊಸ ಆಯುಧ 'ದಿವ್ಯಚಕ್ಷು'
ಜಮ್ಮು ಮತ್ತು ಕಾಶ್ಮೀರ, ಜೂನ್ 9: ಗೋಡೆ ಹಿಂದೆ ಅವಿತಿರುವ ಉಗ್ರರನ್ನು ಪತ್ತೆ ಹಚ್ಚಲು ಭಾರತೀಯ ಸೇನೆ ಹೊಸ ಆಯುಧವೊಂದನ್ನು ಕಂಡು ಹುಡುಕಿದೆ. ಇದೇ ದಿವ್ಯಚಕ್ಷು. ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರಿಗೆ ಇದು ಉಪಯೋಗಕ್ಕೆ ಬರಲಿದೆ.
ಮನೆಯಲ್ಲಿ, ಗಲ್ಲಿಗಳಲ್ಲಿ ಅವಿತಿರುವ ಉಗ್ರರ ನಿರ್ಧಿಷ್ಟ ಸ್ಥಳವನ್ನು ಇದು ಪತ್ತೆ ಹಚ್ಚಲಿದೆ. ಇದರಿಂದ ನಾಗರೀಕರ ಮೇಲೆ ನಡೆಯುವ ಸಾಂಭಾವ್ಯ ದಾಳಿಗಳನ್ನೂ ತಪ್ಪಿಸಬಹುದಾಗಿದೆ. ಜತೆಗೆ ಉಗ್ರರನ್ನೂ ನಿಖರವಾಗಿ ಪತ್ತೆ ಹಚ್ಚಿ ದಾಳಿ ಮಾಡಲು ಸಹಾಯಕವಾಗಿದೆ.
ಹಲವು ಸಂದರ್ಭಗಳಲ್ಲಿ ಉಗ್ರರು ಮರೆಯಲ್ಲಿ ಕುಳಿತು ಸೈನಿಕರನ್ನು ಕೊಂದಿದ್ದಿದೆ. ಗೋಡೆ ಹಿಂದೆ ಅವಿತಿರುವವರ ಪತ್ತೆಗೆ ಸೇನೆ ಯಾವತ್ತೂ ಹರಸಾಹಸ ಪಡುತ್ತದೆ. ಆದರೆ ದಿವ್ಯಚಕ್ಷು ಬಳಕೆಯಿಂದ ಈ ಸಮಸ್ಯೆಗಳು ಇರುವುದಿಲ್ಲ ಎಂದು ಸೇನೆ ಹೇಳಿದೆ.

ಗೋಡೆಯಾಚೆಗಿನ ವಸ್ತುಗಳನ್ನೂ ಪತ್ತೆ ಹಚ್ಚುವ ರಾಡಾರ್ ಗಳು ಇವಾಗಿದ್ದು ಸೈನಿಕರಿಗೆ ಉಪಯೋಗಕ್ಕೆ ಬರಲಿವೆ.
ದಿವ್ಯಚಕ್ಷು ಕೆಲಸ ಮಾಡುವುದು ಹೀಗೆ
25-30 ಸೆಂಟಿ ಮೀಟರ್ ದಪ್ಪದ ಗೋಡೆಯನ್ನು ಸೀಳಿಕೊಂಡು ಹೋಗಿ ಸ್ಕ್ಯಾನ್ ಮಾಡುವ ಸಾಮರ್ಥ್ಯವನ್ನು ಇವು ಹೊಂದಿವೆ. ಶಾರ್ಟ್ ಎಲೆಕ್ಟ್ರೋಮ್ಯಾಗ್ನೆಟಿಕ್ ವೇವ್ಸ್ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ.
ಒಂದೊಮ್ಮೆ ಮನುಷ್ಯರು ಅಡಗಿಕೊಂಡಿದ್ದಲ್ಲಿ ಎಲೆಕ್ಟ್ರೋಮ್ಯಾಗ್ನೆಟಿಕ್ ವೇವ್ಸ್ ನಲ್ಲಿ ಬದಲಾವಣೆಗಳನ್ನು ಗುರುತಿಸಬಹುದು. ಸಣ್ಣ ಉಸಿರಾಟದ ವ್ಯತ್ಯಾಸವನ್ನೂ ಇದರಲ್ಲಿ ಪತ್ತೆಹಚ್ಚಬಹುದಾಗಿದೆ.
ಇದರಿಂದ ನಿಖರವಾಗಿ ಉಗ್ರರು ಎಲ್ಲಿ ಅಡಗಿಕೊಂಡಿದ್ದಾರೆ, ಯಾವ ಕಡೆ ಚಲಿಸುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಬಹುದು. ಸದ್ಯಕ್ಕೆ ಈ ರೀತಿಯ ಕೆಲವು ರಡಾರ್ ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಗಿದೆ.
ಇನ್ನು ಇದೇ ರೀತಿಯ ರಡಾರ್ ಗಳ ಅಭಿವೃಧ್ಧಿಯಲ್ಲಿ ಸೇನೆಯ ಎಲೆಕ್ಟ್ರಾನಿಕ್ ಮತ್ತು ರಾಡಾರ್ ಅಭಿವೃದ್ಧಿ ವಿಭಾಗ ಹಾಗೂ ಡಿಆರ್'ಡಿಒ ತೊಡಗಿಸಿಕೊಂಡಿದೆ. ಆದರೆ ಇಲ್ಲಿಯವರಗೆ ಯಶಸ್ಸು ಸಾಧಿಸಿಲ್ಲ. (ಒನ್ ಇಂಡಿಯಾ ಸುದ್ದಿ)
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications