ನಮ್ಮ ಮಗಳನ್ನು ಹತ್ಯೆ ಮಾಡಿದವರಿಗೆ ಜೀವಾವಧಿ ಶಿಕ್ಷೆಯಾಗಲಿ!
ಇಡೀ ದೇಶವೇ ತಿರುಗಿ ನೋಡುವಂತಹ ತೀರ್ಪು ನಿನ್ನೆ ಹೊರಬಿದ್ದಿದೆ. 2008ರಲ್ಲಿ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಅವರನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದ ಕೇಸ್ನಲ್ಲಿ, ನಾಲ್ವರನ್ನು ದೋಷಿಗಳೆಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ಈ ಕುರಿತು ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಅವರ ತಾಯಿ ಮಾಧವಿ ವಿಶ್ವನಾಥನ್ 'ಒನ್ ಇಂಡಿಯಾ' ಜೊತೆ ಮಾತನಾಡಿ, ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ ಸುದ್ದಿ ವಾಹಿನಿಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಸೌಮ್ಯ ವಿಶ್ವನಾಥನ್ ಅವರು, 2008ರ ಸೆಪ್ಟೆಂಬರ್ 30ರಂದು ಕೆಲಸ ಮುಗಿಸಿ ಕಾರಲ್ಲಿ ಮರಳುವ ವೇಳೆ ಗುಂಪೊಂದು ಆಕೆಯನ್ನ ಅಡ್ಡಿಗಟ್ಟಿ ಗುಂಡಿಕ್ಕಿ ಹತ್ಯೆ ಮಾಡಿತ್ತು. ಹೀಗೆ ಸುದೀರ್ಘ ಸುಮಾರು 15 ವರ್ಷಗಳ ನಿರಂತರ ವಿಚಾರಣೆ ಮತ್ತು ತನಿಖೆ ಬಳಿಕ ಇದೀಗ ತೀರ್ಪು ಹೊರಬಿದ್ದಿದೆ. ಹಾಗಾದ್ರೆ ತಮ್ಮ ಮಗಳನ್ನು ಕಳೆದುಕೊಂಡ ಸೌಮ್ಯ ವಿಶ್ವನಾಥನ್ ಅವರ ತಾಯಿ ತೀರ್ಪಿನ ಬಗ್ಗೆ ಹೇಳಿದ್ದು ಏನು ಗೊತ್ತಾ?

ನನ್ನ ಮಗಳನ್ನು ಕೊಂದವರಿಗೆ...
ಈಗ ಸೌಮ್ಯ ವಿಶ್ವನಾಥನ್ ಅವರ ಹತ್ಯೆಗೆ ಸಂಬಂಧಿಸಿದಂತೆ ರವಿ ಕಪೂರ್, ಅಮಿತ್ ಶುಕ್ಲಾ ಮತ್ತು ಬಲ್ಜಿತ್ ಮಲ್ಲಿಕ್, ಅಜಯ್ ಕುಮಾರ್ ಈ ಪ್ರಕರಣದಲ್ಲಿ ದೋಷಿಗಳೆಂದು ಆದೇಶವನ್ನ ನೀಡಲಾಗಿದೆ. ಮತ್ತೊಂದು ಕಡೆ 5ನೇ ಆರೋಪಿ ಅಜಯ್ ಸೇಥಿ, ದೂಷಿಗಳಿಗೆ ಸಹಾಯವನ್ನ ಮಾಡಿದ್ದಕ್ಕಾಗಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. ಇದೀಗ ತೀರ್ಪಿನ ಬಗ್ಗೆ ಸೌಮ್ಯ ಅವರ ತಾಯಿ ಕಂಬನಿ ತುಂಬಿದ ಕಂಗಳಲ್ಲೇ ಸಂತಸ ವ್ಯಕ್ತಪಡಿಸಿದ್ದು, ಇದೇ ಅಕ್ಟೋಬರ್ 26ರಂದು ದೂಷಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಅಂದು ತಪ್ಪು ಮಾಡಿದವರಿಗೆ ಜೀವಾವಧಿ ಶಿಕ್ಷೆ ಪಕ್ಕಾ ಆಗಲಿದೆ ಎಂಬ ಆಶಯವನ್ನು ಮೃತ ಸೌಮ್ಯ ಅವರ ತಾಯಿ ಈಗ ವ್ಯಕ್ತಪಡಿಸಿದ್ದಾರೆ.
ದೆಹಲಿಯ ರಸ್ತೆಗಳು ಸುರಕ್ಷಿತವಾಗಲಿ
ತಮ್ಮ ಮಗಳ ಸಾವಿಗೆ ಕಾರಣರಾದ ಹಾಗೂ ದೆಹಲಿಯ ರಸ್ತೆಗಳಲ್ಲಿ ಭಯ ಹುಟ್ಟಿಸಿದ್ದವರಿಗೆ ಇದೀಗ ಶಿಕ್ಷೆಯಾಗಿದೆ. ಈ ಮೂಲಕ ಮುಂದಿನ ದಿನದಲ್ಲಿ ಇಂತಹ ದುರಂತಗಳನ್ನು ತಪ್ಪಿಸಿ ಜನರ ರಕ್ಷಣೆಗೆ ಈ ತೀರ್ಪು ಪ್ರತಿಬಂಧಕವಾಗಬಹುದು ಎಂದು ಮಾಧವಿ ಹೇಳಿದ್ದಾರೆ. ಇದು ನೋವಿನ ನಡುವೆಯೂ ಸೌಮ್ಯ ಅವರ ಕುಟುಂಬಕ್ಕೆ ತುಸು ನೆಮ್ಮದಿ ನೀಡಿದೆ. ಈ ಮಧ್ಯೆ ಮಗಳನ್ನು ಕಳೆದುಕೊಂಡ ಬಳಿಕ ತಾವು ಅನುಭವಿಸಿದ ನೋವು ಎಂತಹದ್ದು ಎಂಬುದನ್ನ ಕೂಡ ಸೌಮ್ಯ ಅವರ ತಾಯಿ ಮಾಧವಿ ಹಂಚಿಕೊಂಡಿದ್ದಾರೆ. ಅಲ್ಲದೆ ಅ.26 ಕ್ಕೆ ಶಿಕ್ಷೆಯ ಪ್ರಮಾಣ ಘೋಷಿಸುವ ಬಗ್ಗೆ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ.

ನಾವು ಕೂಡ ಜೀವಾವಧಿ ಶಿಕ್ಷೆ...
ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಸಿಗಲಿದೆ ಎಂಬುದು ನಮ್ಮ ಅಚಲ ನಂಬಿಕೆ. ಏಕೆಂದರೆ ನಾವು ಕೂಡ ಈಗ ಜೀವಾವಧಿ ಶಿಕ್ಷೆಯನ್ನೇ ಅನುಭವಿಸುವ ರೀತಿ ಆಗಿದೆ. ಇದು ಅಪರಾಧಿಗಳಿಗೂ ಅನ್ವಯ ಆಗಲಿದೆ. ಹೀಗಾಗಿ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಆಗಬೇಕು ಎಂಬುದು ನಮ್ಮ ನಿರೀಕ್ಷೆ ಎಂದಿದ್ದಾರೆ ಸೌಮ್ಯ ಅವರ ತಾಯಿ ಮಾಧವಿ.
ಸೌಮ್ಯ ಸ್ನೇಹಿತರು ಬೆಂಬಲ ನೀಡಿದರು
ಇನ್ನೊಂದು ಕಡೆ ತಮ್ಮ ಮಗಳ ಕೊಲೆ ಬಳಿಕ, ಘಟನೆಯಲ್ಲಿ ನ್ಯಾಯಕ್ಕೆ ಹೋರಾಟವನ್ನು ಮುಂದುವರಿಸಿದಾಗ ಯಾವೆಲ್ಲಾ ರೀತಿ ಸಂಕಷ್ಟ ಎದುರಾಯ್ತು ಎಂಬುದನ್ನ ಕೂಡ ಸೌಮ್ಯ ತಾಯಿ ಮಾಧವಿ ಹಂಚಿಕೊಂಡಿದ್ದಾರೆ. ತಮ್ಮ ನೋವಿನ ಕ್ಷಣಗಳಲ್ಲಿ ಸೌಮ್ಯ ಅವರ ಇಡೀ ಗೆಳೆಯರ ಬಳಗ ಒಂದಾಗಿ ನಿಂತಿತ್ತು. ನಮ್ಮ ಹೋರಾಟಕ್ಕೆ ಅವರೇ ಬೆಂಬಲ ನೀಡಿದ್ದಾರೆ. ನಾವು ಇಲ್ಲಿಯವರೆಗೆ ಬರಲು ಅವರೇ ಕಾರಣ ಎಂದು, ಸೌಮ್ಯ ಅವರ ಸ್ನೇಹಿತರ ಸಹಾಯ ನೆನೆದಿದ್ದಾರೆ ಮಾಧವಿ. 'ಒನ್ ಇಂಡಿಯಾ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಧವಿ ವಿಶ್ವನಾಥನ್ ಅವರು ತಮ್ಮ ಕುಟುಂಬದ ನೋವಿನ ಸ್ಥಿತಿ ಹಂಚಿಕೊಂಡಿದ್ದಾರೆ.
15 ವರ್ಷದಿಂದ ಪ್ರತಿದಿನವೂ ನೋವು
ಮುದ್ದಿನ ಮಗಳು, ಸಮಾಜಕ್ಕೆ ಬುದ್ಧಿ ಹೇಳುವ ಪತ್ರಕರ್ತೆ ಕೂಡ. ಹೀಗೆ ಇಂತಹ ಮಗಳು ನಮ್ಮ ಹೊಟ್ಟೆಯಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ ಎಂದು ಭಾವಿಸಿದ್ದರು ಸೌಮ್ಯ ವಿಶ್ವನಾಥನ್ ಅವರ ಪೋಷಕರು. ಆದರೆ ಅದು ಎಲ್ಲಿಂದ ಹಂತಕರು ಬಂದರೋ ಗೊತ್ತಿಲ್ಲ, ದರೋಡೆಗೆ ಸ್ಕೆಚ್ ಹಾಕಿ ಪತ್ರಕರ್ತೆ ಸೌಮ್ಯ ಅವರ ಜೀವ ತೆಗೆದರು. ಹೀಗೆ ಅವ್ರ ಜೀವದ ಜೊತೆ ಮಾತ್ರ ಅಪರಾಧಿಗಳು ಚೆಲ್ಲಾಟ ಆಡಲಿಲ್ಲ. ಜತೆಗೆ ಅವರ ಕುಟುಂಬದ ಜೊತೆಯು ಆಟವಾಡಿದರು. ಹೀಗೆ 15 ವರ್ಷಗಳ ಸುದೀರ್ಘ ಹೋರಾಟ ಮತ್ತು ತಮ್ಮ ಕುಟುಂಬ ಈ ನೋವಿನಲ್ಲಿ ಹೇಗೆ ಪಾರ್ಶ್ವವಾಯು ಪೀಡಿತವಾಗಿತ್ತು ಎಂಬುದನ್ನು ಕೂಡ, ಮೃತ ಸೌಮ್ಯ ವಿಶ್ವನಾಥನ್ ಅವರ ಅಮ್ಮ ಮಾಧವಿ ಹಂಚಿಕೊಂಡಿದ್ದಾರೆ.
ಹಿರಿಯ ಮಗಳು ವಾಪಸ್ ಬರಲು ಮುಂದಾದಳು!
ಸೌಮ್ಯ ವಿಶ್ವನಾಥನ್ರ ಅಕ್ಕ, ಅಂದರೆ ಮಾಧವಿ ಅವರ ಹಿರಿಯ ಮಗಳು ನೈರೋಬಿಯಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ತನ್ನ ತಂಗಿಯ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಸೂಕ್ತ ಶಿಕ್ಷೆಯಾದ ವಿಚಾರ ತಿಳಿಯುತ್ತಿದ್ದಂತೆ ಅವರು ನೈರೋಬಿಯಿಂದ ಭಾರತಕ್ಕೆ ಬರಲು ಸಿದ್ಧತೆ ನಡೆಸಿದ್ದರಂತೆ. ಕುಟುಂಬದ ಸದಸ್ಯರು ಅವರ ಮನವೊಲಿಸಿ, ಮಗನನ್ನು ನೋಡಿಕೊಳ್ಳಲು ಸೂಚಿಸಿದರಂತೆ. ಈ ಬಗ್ಗೆ ಮಾಧವಿ ಮಾಹಿತಿ ನೀಡಿದ್ದು, ತಮ್ಮ ಹಿರಿಯ ಮಗಳಿಗೆ ಮಗನ ಆರೈಕೆ ಮಾಡಬೇಕಾದ ಕಾರಣ ನಾವು ಅವಳಿಗೆ ತಿಳಿ ಹೇಳಿದೆವು. ಹಾಗೇ ಈಗ ಹೊರಬಿದ್ದ ಕೋರ್ಟ್ ಆದೇಶದ ಬಗ್ಗೆ ಅವಳು ಖುಷಿಯಾಗಿದ್ದಾಳೆ ಎಂದರು.
ಸಮಾಜಕ್ಕೆ ಧೈರ್ಯ ತುಂಬುತ್ತಾರಾ?
ಇದು ಒಂದೇ ಪ್ರಕರಣ ಅಲ್ಲ, ಸೌಮ್ಯ ವಿಶ್ವನಾಥನ್ ಅವರ ರೀತಿ ಹಲವು ಪ್ರಕರಣ ನಮ್ಮ ಸಮಾಜದಲ್ಲಿ ನಡೆದಿವೆ. ಈ ಬಗ್ಗೆ ಇತರ ಪೋಷಕರಿಗೆ ಧೈರ್ಯ ತುಂಬುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸೌಮ್ಯ ವಿಶ್ವನಾಥನ್ ಅವರ ತಾಯಿ, ನಾವು ನಿತ್ಯ ಬದುಕುತ್ತಿದ್ದೇವೆ ಅಷ್ಟೇ. ನಮಗೆ ಖಂಡಿತಾ ತಿಳಿದಿದೆ, ಶಿಕ್ಷೆ ಪ್ರಮಾಣ ಪ್ರಕಟವಾದ ನಂತರ ಅವರು ಅಂದ್ರೆ ದೂಷಿಗಳು ಮೇಲ್ಮನವಿ ಸಲ್ಲಿಸುತ್ತಾರೆ. ಈ ಹೋರಾಟಕ್ಕೆ ಕೂಡ ನಾವು ಈಗ ಸಜ್ಜಾಗಬೇಕಿದೆ ಎಂದಿದ್ದಾರೆ.
ಹಾಗೇ ಅಂತಿಮವಾಗಿ ಮಾಧವಿ ಅವರು ಭವಿಷ್ಯದ ಭರವಸೆ ಬಗ್ಗೆ ಮಾತನಾಡಿದ್ದಾರೆ. ಹೀಗೆ ಇದೇ ರೀತಿಯ ಹಲವು ತೀರ್ಪು ಹೊರಬೀಳಲಿವೆ, ಈ ಮೂಲಕ ದೆಹಲಿ ಸುರಕ್ಷಿತವಾಗಲಿದೆ. ದೆಹಲಿ ಮಾತ್ರವಲ್ಲದೆ ಇಡೀ ಭಾರತ ಮತ್ತು ಎಲ್ಲಾ ಕಡೆ ಸುರಕ್ಷಿತ ವಾತಾವರಣ ನಿರ್ಮಾಣ ಆಗಲಿದೆ. ಆದರೆ ತೀರ್ಪು ಬೇಗ ಹೊರಬೀಳಬೇಕು, 15 ವರ್ಷ ಅವಧಿ ತುಂಬಾ ದೊಡ್ಡದು. ಹೀಗಾದರೆ ಪ್ರಕರಣವನ್ನೇ ಜನ ಮರೆಯುತ್ತಾರೆ, ಹೀಗಾಗಿ ಬೇಗ ತೀರ್ಪು ಹೊರಬೀಳಬೇಕಿದೆ ಎಂದಿದ್ದಾರೆ ಸೌಮ್ಯ ಅವರ ತಾಯಿ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications