ನೋಟು ನಿಷೇಧದ 50ದಿನ: ಸಮೀಕ್ಷೆಯಲ್ಲಿ ಮತ್ತೆ ಮೋದಿಗೆ ಉಘೇ..ಉಘೇ..
ನೋಟು ನಿಷೇಧದ 50ದಿನದ ನಂತರ ಲೋಕಲ್ ಸರ್ಕಲ್ಸ್ ಎನ್ನುವ ಸಂಸ್ಥೆ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ ಮತ್ತೆ ಜನ ಪ್ರಧಾನಿ ಮೋದಿ ಬೆನ್ನಿಗೆ ನಿಂತಿದ್ದಾರೆ.
ಅಪನಗದೀಕರಣದ ಬಿಸಿ ಹೆಚ್ಚುಕಮ್ಮಿ ಸರಿದಾರಿಗೆ ಬರುತ್ತಿರವ ಬೆನ್ನಲ್ಲೇ ಸಾಮಾಜಿಕ ಕೆಲಸದಲ್ಲಿ ಗುರುತಿಸಿಕೊಂಡಿರುವ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.
ನೋಟು ನಿಷೇಧದ 50ದಿನದ ನಂತರ ಆನ್ಲೈನ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ ಜನ, ಪ್ರಧಾನಿ ಬೆನ್ನಿಗೆ ನಿಂತಿದ್ದಾರೆ. ಈ ಸಮೀಕ್ಷೆಯಲ್ಲಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಮೋದಿಗೆ ಜನಬೆಂಬಲ ವ್ಯಕ್ತವಾಗಿರುವುದು ಗಮನಿಸಬೇಕಾದ ಅಂಶ.
ಸಾಮಾಜಿಕ ಸಂಸ್ಥೆ 'ಲೋಕಲ್ ಸರ್ಕಲ್ಸ್' ಸುಮಾರು 3.5ಲಕ್ಷ ಜನರ ಅಭಿಪ್ರಾಯವನ್ನು ಕ್ರೋಢೀಕರಿಸಿ ಈ ಸಮೀಕ್ಷೆಯನ್ನು ಸಿದ್ದಪಡಿಸಿದೆ.
ಸಮೀಕ್ಷೆಯಲ್ಲಿನ ಕುತೂಹಲಕಾರಿ ಅಂಶವೇನಂದರೆ ನವೆಂಬರ್ 8ರಂದು ನೋಟು ನಿಷೇಧಗೊಳಿಸಿದ ನಂತರ ಏನು ಜನಬೆಂಬಲ ಮೋದಿಗೆ ವ್ಯಕ್ತವಾಗಿತ್ತೋ, ಅಷ್ಟೇ ಜನಬೆಂಬಲ ಐವತ್ತು ದಿನದ ನಂತರವೂ ಸರ್ವೇಯಲ್ಲಿ ಪಾಲ್ಗೊಂಡವರು ಮೋದಿ ಪರವಾಗಿ ನಿಂತಿರುವುದು.
ಸರ್ವೇ ಪ್ರಕಾರ ಶೇ. 97ರಷ್ಟು ಜನ ಅಪನದೀಕರಣದ ಪರವಾಗಿ ನಿಂತಿದ್ದರೆ, ಶೇ. 75ರಷ್ಟು ಜನ ನೋಟು ನಿಷೇಧದ ನಂತರ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗೆ ಸರಕಾರೀ ಅಧಿಕಾರಿಗಳೇ ಕಾರಣ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಸಮೀಕ್ಷೆಯ ಹೈಲೆಟ್ಸ್, ಮುಂದೆ ಓದಿ..

ಲೋಕಲ್ ಸರ್ಕಲ್ಸ್
ಈ ಸಮೀಕ್ಷೆಯಲ್ಲಿ 3.5ಲಕ್ಷ ಜನ ಭಾಗವಹಿಸಿದ್ದರೆ, ಸುಮಾರು ಒಂದು ಲಕ್ಷ ಜನ ಸಂವಾದದಲ್ಲಿ ಭಾಗವಹಿಸಿದ್ದರು. ನೋಟು ನಿಷೇಧದ ಮೂರನೇ ವಾರದಿಂದ ಐವತ್ತು ದಿನದವರೆಗೂ, ಶೇ. 97ರಷ್ಟು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು ನೋಟು ಬ್ಯಾನ್ ಮಾಡಿರುವುದು ಸರಿಯಾದ ನಿರ್ಧಾರ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಐನೂರು ರೂಪಾಯಿ ನೋಟು
ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 68ರಷ್ಟು ಜನ ಇದುವರೆಗೂ ಕಡಿಮೆ ಮೊತ್ತದ ಕರೆನ್ಸಿ ಎಟಿಎಂ ಮತ್ತು ಬ್ಯಾಂಕುಗಳಲ್ಲಿ ಲಭ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಐನೂರು ರೂಪಾಯಿ ನೋಟಿನ ಮುಖವನ್ನೂ ನೋಡಿಲ್ಲ ಎನ್ನುವವರ ಸಂಖ್ಯೆಯೂ ಇದೆ.

ಎರಡು ಸಾವಿರ ರೂಪಾಯಿ ನೋಟು
ಎರಡು ಸಾವಿರ ರೂಪಾಯಿ ನೋಟನ್ನು ಯಾವ ರೀತಿ ಬಳಸಿಕೊಳ್ಳುತ್ತಿದ್ದೀರಿ ಎನ್ನುವ ಪ್ರಶ್ನೆಗೆ ತೀರಾ ಅಗತ್ಯಬಿದ್ದರೆ ಮಾತ್ರ ಬಳಸಿಕೊಳ್ಳುತ್ತಿದ್ದೇವೆ ಎನ್ನುವವರು ಶೇ. 45, ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದೇವೆ ಎನ್ನುವವರು ಶೇ.41 ಮತ್ತು ಉಳಿತಾಯ ಮಾಡುತ್ತಿದ್ದೇವೆ ಎನ್ನುವವರ ಸಂಖ್ಯೆ ಶೇ. 14.

ಕರೆನ್ಸಿ ಅಭಾವ
ಅಪನಗದೀಕರಣದಿಂದ ಕರೆನ್ಸಿ ಅಭಾವ ಉಂಟಾಗಲು ಯಾರು ಕಾರಣ ಎನ್ನುವ ಪ್ರಶ್ನೆಗೆ:
ರಿಸರ್ವ್ ಬ್ಯಾಂಕ್ - ಶೇ. 28
ಹಣಕಾಸು ಸಚಿವಾಲಯ - ಶೇ. 23
ಪ್ರಧಾನಮಂತ್ರಿ - ಶೇ. 25
ಬ್ಯಾಂಕುಗಳು - ಶೇ. 24

ಪ್ರಧಾನಿ ಮೋದಿ
ನೋಟು ನಿಷೇಧಗೊಂಡ ಮೊದಲ ವಾರದಲ್ಲಿ ಮೋದಿಗೆ ವಿವಿಧ ಸಮೀಕ್ಷೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ನಂತರದ ದಿನಗಳಲ್ಲಿ ಇದೊಂದು ಒಳ್ಳೆಯ ನಿರ್ಧಾರವಾದರೂ, ಪೂರ್ವ ತಯಾರಿ ಮಾಡಿಕೊಂಡಿರಲಿಲ್ಲ ಎನ್ನುವವರ ಕೂಗು ಹೆಚ್ಚಾಗ ತೊಡಗಿತ್ತು.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications