ದೆಹಲಿ ಪಾಲಿಕೆ ಚುನಾವಣೆ: 11 ಬಂಡಾಯ ಕಾರ್ಯಕರ್ತರನ್ನು ಉಚ್ಛಾಟಿಸಿದ ಬಿಜೆಪಿ
ನವದೆಹಲಿ, ನವೆಂಬರ್ 22: ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷವು 11 ಕಾರ್ಯಕರ್ತರನ್ನು ಉಚ್ಚಾಟಿಸಿದೆ.
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಹೊಸ್ತಿಲಿನಲ್ಲೇ ಬಿಜೆಪಿಯು 11 ಬಂಡಾಯ ಕಾರ್ಯಕರ್ತರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 2012ರಲ್ಲಿ ಉತ್ತರ, ದಕ್ಷಿಣ ಮತ್ತು ಪೂರ್ವ ಕಾರ್ಪೊರೇಶನ್ಗಳಾಗಿ ತ್ರಿವಿಭಜನೆಯಾಗಿದ್ದ ದೆಹಲಿ ಮಹಾನಗರ ಪಾಲಿಕೆಯನ್ನು ಇದೇ ವರ್ಷ ಏಕೀಕೃತಗೊಳಿಸಲಾಗಿತ್ತು. ಹೀಗೆ ಏಕೀಕೃತಗೊಂಡ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ)ನ 250 ಕ್ಷೇತ್ರಗಳಿಗೆ ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 4ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 7ರಂದು ಮತ ಎಣಿಕೆ ನಡೆಯಲಿದೆ.

ಬಿಜೆಪಿ ಉಚ್ಛಾಟಿಸಿದ ಕಾರ್ಯಕರ್ತರು ಯಾರು?
* 250ನೇ ವಾರ್ಡಿನ ಲವಲೇಶ್ ಶರ್ಮಾ
* 200ನೇ ವಾರ್ಡಿನ ರೀನು ಜೈನ್
* 210ನೇ ವಾರ್ಡಿನ ಶಮಾ ಅಗರ್ವಾಲ್
* 210ನೇ ವಾರ್ಡಿನ ವೀರೇಂದ್ರ ಅಗರ್ವಾಲ್
* 35ನೇ ವಾರ್ಡಿನ ಗಜೇಂದ್ರ ಧರಾಲ್
* 111ನೇ ವಾರ್ಡಿನ ರವೀಂದ್ರ ಸಿನ್ಹಾ
* 127ನೇ ವಾರ್ಡಿನ ಅಂತಿಮ್ ಗೆಹ್ಲೋಟ್
* 136ನೇ ವಾರ್ಡಿನ ಪೂನಂ ಚೌಧರಿ
* 174ನೇ ವಾರ್ಡಿನ ಮಹಾವೀರ್ ಸಿನ್ಹಾ
* 174ನೇ ವಾರ್ಡಿನ ಧರ್ಮವೀರ್ ಸಿನ್ಹಾ
* 91ನೇ ವಾರ್ಡಿನ ರಾಜಕುಮಾರ್ ಖುರಾನಾ












Click it and Unblock the Notifications