Expressway: ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇ: ಜೂನ್ 20 ನಂತರ ತೆರೆಯಲಿರುವ ಮಹತ್ವದ 8-ಲೇನ್ ಟನಲ್ ಯೋಜನೆ

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ದೇಶದ ಅತ್ಯಂತ ಮಹತ್ವಾಕಾಂಕ್ಷಿಯ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿ ಈಗ ಅಂತಿಮ ಹಂತ ತಲುಪಿದೆ. ಜೂನ್ 20 ನಂತರ ಈ ಎಕ್ಸ್‌ಪ್ರೆಸ್‌ವೇ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲು ಸಜ್ಜಾಗಿದ್ದು, ಪೂರ್ಣಗೊಂಡ ನಂತರ ದೆಹಲಿ ಮತ್ತು ಮುಂಬೈ ನಡುವಿನ ಪ್ರಯಾಣ ಸಮಯ ಕೇವಲ 12 ಗಂಟೆಗಳಷ್ಟಾಗಲಿದೆ.

ಒಟ್ಟು 1,386 ಕಿಲೋಮೀಟರ್ ಉದ್ದದ ಈ ಎಕ್ಸ್‌ಪ್ರೆಸ್‌ವೇ ಭಾರತದ ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ಕೇಂದ್ರಗಳನ್ನು ನೇರವಾಗಿ ಸಂಪರ್ಕಿಸುವ ಉದ್ದೇಶ ಹೊಂದಿದೆ. ಇದು ಗುರುಗ್ರಾಮ್, ಜೈಪುರ, ಕೋಟಾ, ಇಂದೋರ್, ವಡೋದರಾ, ಸೂರತ್ ಮತ್ತು ನವಿ ಮುಂಬೈ ಸೇರಿದಂತೆ ಹಲವು ಪ್ರಮುಖ ನಗರಗಳ ಮಾರ್ಗದ ಮೂಲಕ ಸಂಪರ್ಕ ಜೋಡಿಸುತ್ತದೆ. ಜೊತೆಗೆ ದೆಹಲಿಯನ್ನು ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಜೆವರ್ ವಿಮಾನ ನಿಲ್ದಾಣ) ಮತ್ತು ಜವಾಹರಲಾಲ್ ನೆಹರು ಬಂದರಿನಂತಹ ಪ್ರಮುಖ ಮೂಲಸೌಕರ್ಯ ಹಬ್‌ಗಳಿಗೆ ಸಂಪರ್ಕಿಸುತ್ತದೆ.

Delhi Mumbai Expressway

ಈ ಯೋಜನೆಯ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ ರಾಜಸ್ಥಾನದ ಕೋಟಾ ಸಮೀಪ ನಿರ್ಮಾಣಗೊಂಡಿರುವ 4.9 ಕಿಲೋಮೀಟರ್ ಉದ್ದದ ಬೃಹತ್ ಸುರಂಗ ಮಾರ್ಗ. ಇದು ಮಕುಂದ್ರಾ ಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶದ ಕೆಳಭಾಗದಲ್ಲಿ ಹಾದುಹೋಗುವ ಭಾರತದ ಮೊದಲ 8-ಲೇನ್ ಹೆದ್ದಾರಿ ಟನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪರಿಸರ ಸಂವೇದನಾಶೀಲ ವಲಯದಲ್ಲಿ ವನ್ಯಜೀವಿಗಳ ದೈನಂದಿನ ಜೀವನ ಹಾಗೂ ಮುಕ್ತ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ, ಹೆದ್ದಾರಿ ಟ್ರಾಫಿಕ್ ಅನ್ನು ಸಂಪೂರ್ಣವಾಗಿ ಭೂಗರ್ಭದ ಒಳಗೆ ಸಾಗಿಸುವ ನಿಟ್ಟಿನಲ್ಲಿ ಇದನ್ನು ಅತ್ಯಂತ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

ಪರಿಸರ ತಜ್ಞರ ಪ್ರಕಾರ, ಹುಲಿ ಸಂರಕ್ಷಿತ ಪ್ರದೇಶದ ಕೆಳಗೆ ಟನಲ್ ನಿರ್ಮಾಣವು ವನ್ಯಜೀವಿ ಸಂರಕ್ಷಣೆಯೊಂದಿಗೆ ಅಭಿವೃದ್ಧಿಯನ್ನು ಸಮತೋಲನಗೊಳಿಸುವ ಮಹತ್ವದ ಉದಾಹರಣೆಯಾಗಿದೆ. ಈ ರೀತಿಯ ಯೋಜನೆಗಳು ಭವಿಷ್ಯದಲ್ಲಿ ಇತರ ಪರಿಸರ ಸಂವೇದನಾಶೀಲ ಪ್ರದೇಶಗಳಲ್ಲಿಯೂ ಮಾದರಿಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: ಕೈಗಾರಿಕೆ, ಲಾಜಿಸ್ಟಿಕ್ಸ್‌ ಕ್ಷೇತ್ರಕ್ಕೆ ಹೊಸ ಚೈತನ್ಯ; ನಿರ್ಮಲಾ ಸೀತಾರಾಮನ್
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: ಕೈಗಾರಿಕೆ, ಲಾಜಿಸ್ಟಿಕ್ಸ್‌ ಕ್ಷೇತ್ರಕ್ಕೆ ಹೊಸ ಚೈತನ್ಯ; ನಿರ್ಮಲಾ ಸೀತಾರಾಮನ್

ಈ ಎಕ್ಸ್‌ಪ್ರೆಸ್‌ವೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ಬಳಿಕ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ. ವ್ಯಾಪಾರ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಇದು ದೊಡ್ಡ ಉತ್ತೇಜನ ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಈ ಸುರಂಗ ಮಾರ್ಗವು ಕಾರ್ಯಾರಂಭಕ್ಕೆ ಅಗತ್ಯವಿರುವ ಅಂತಿಮ ಸುರಕ್ಷತಾ ಅನುಮೋದನೆಗಳ ನಿರೀಕ್ಷೆಯಲ್ಲಿದೆ. ಎಲ್ಲಾ ಕಾನೂನು ಮತ್ತು ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ತಕ್ಷಣವೇ ಇದನ್ನು ಅಧಿಕೃತವಾಗಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ವರದಿಯಾಗಿದೆ.

ಈ ಎಕ್ಸ್‌ಪ್ರೆಸ್‌ವೇ ಹಂತ ಹಂತವಾಗಿ ಈಗಾಗಲೇ ಹಲವು ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗುರುಗ್ರಾಮ್ ಮತ್ತು ದೌಸಾ ನಡುವಿನ ಪ್ರಯಾಣ ಸಮಯವನ್ನು ಕೇವಲ 2.5 ಗಂಟೆ ಕಡಿಮೆ ಮಾಡಿದೆ. ಇದರಿಂದ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಸಮಯ ಉಳಿತಾಯ ಮತ್ತು ಉತ್ತಮ ಸಂಪರ್ಕ ವ್ಯವಸ್ಥೆ ದೊರೆತಿದೆ.

ಕರ್ನಾಟಕದ ಶರಾವತಿ ಸೇರಿದಂತೆ ನೀವು ಭೇಟಿ ನೀಡಲೇಬೇಕಾದ ಭಾರತದ ಈ 6 ಪ್ರಸಿದ್ಧ ಸೇತುವೆಗಳು
ಕರ್ನಾಟಕದ ಶರಾವತಿ ಸೇರಿದಂತೆ ನೀವು ಭೇಟಿ ನೀಡಲೇಬೇಕಾದ ಭಾರತದ ಈ 6 ಪ್ರಸಿದ್ಧ ಸೇತುವೆಗಳು

2019ರಲ್ಲಿ ಆರಂಭವಾದ ಈ ಮಹತ್ವಾಕಾಂಕ್ಷಿ ಯೋಜನೆ ಭೂಸ್ವಾಧೀನ ಸೇರಿದಂತೆ ಕೆಲವು ಸವಾಲುಗಳನ್ನು ಎದುರಿಸಿದರೂ, ಈಗ ಸುಮಾರು ಪೂರ್ಣಗೊಂಡಿದೆ. ಸುಮಾರು 1 ಲಕ್ಷ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಯೋಜನೆ ದೇಶದ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಯುಗವನ್ನು ಆರಂಭಿಸುವ ನಿರೀಕ್ಷೆಯಿದೆ.

ಒಟ್ಟಾರೆಯಾಗಿ, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ದೇಶದ ಒಟ್ಟಾರೆ ಆರ್ಥಿಕ ಚಟುವಟಿಕೆಗಳು, ವಾಣಿಜ್ಯ ವ್ಯಾಪಾರ ಮತ್ತು ಸಾರಿಗೆ ವ್ಯವಸ್ಥೆಗೆ ಅಭೂತಪೂರ್ವ ವೇಗವನ್ನು ನೀಡುವ ಅತ್ಯಂತ ಪ್ರಮುಖ ಹಾಗೂ ಮಹತ್ವಾಕಾಂಕ್ಷೆಯ ಹೆದ್ದಾರಿಯಾಗಿ ಪರಿಗಣಿಸಲ್ಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+