ಕೊರೊನಾ Boredom ಕೊಲ್ಲುವ Corona Yuga ಬೋರ್ಡ್ ಗೇಮ್
ವಿಶಾಖಪಟ್ಟಣಂ, ಜೂನ್ 12: ಕೊರೊನಾವೈರಸ್ ಮಹಾಮಾರಿ ಹರಡದಂತೆ ಎಲ್ಲೆಡೆ ಲಾಕ್ಡೌನ್ ವಿಧಿಸಿದ್ದರಿಂದ ಒಂದು ರೀತಿ ಎಲ್ಲೆಡೆ ಬೋರ್ ಡಂ ಸೃಷ್ಟಿಯಾಗಿದ್ದು ಸುಳ್ಳಲ್ಲ. ಆದರೆ, ಸಿಕ್ಕ ಸಮಯವನ್ನು ಸೂಕ್ತವಾಗಿ ಬಳಸಿಕೊಂಡು ಸೃಜನಾತ್ಮಕ ರೀತಿಯಲ್ಲಿ ತನ್ನ ಪ್ರತಿಭೆಯನ್ನು 10 ವರ್ಷದ ಬಾಲಕ ತೋರಿದ್ದಾನೆ.
ವಿಶಾಖಪಟ್ಟಣಂನ 10 ವರ್ಷದ ಬಾಲಕ ವೀರ್ ಕಶ್ಯಪ್ ಈ ಲಾಕ್ಡೌನ್ ಅವಧಿಯಲ್ಲಿ ಸಮಯ ಕಳೆಯಲು ಗೇಮ್ ಬೇಕೆನಿಸಿದೆ. ಬೇರೆಯವರು ಮಾಡಿರೋ ಗೇಮ್ ಗಿಂತ ತಾನೆ ಒಂದು ಗೇಮ್ ಯಾಕೆ ಸೃಷ್ಟಿಸಬಾರದು ಎಂದೆನಿಸಿದೆ. ಅದರಲ್ಲೂ ಸಮಕಾಲೀನ ಆಟವೊಂದನ್ನು ವೀರ್ ರಚಿಸಿದ್ದಾನೆ.

ಈ ಹೊಸ ಬೋರ್ಡ್ ಗೇಮ್ ಗೆ "ಕೊರೊನಾ ಯುಗ'' ಎಂದು ಹೆಸರಿಟ್ಟಿದ್ದಾನೆ. ಕೊರೊನಾ ಅವಧಿಯಲ್ಲಿ ನಾಗರೀಕರ ಅನುಭವವನ್ನು ಇದರಲ್ಲಿ ದಾಖಲಿಸಬಹುದು. ವೈರಸ್ ವಿರುದ್ಧ ಹೋರಾಡುವುದು ಹೇಗೆ? ಯಾವ ರೀತಿ ಹೊಸ ಮಾದರಿ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ಇದರಲ್ಲಿ ಆಟದ ಮೂಲಕ ಕಲಿಯಬಹುದು.
ಈ ಆಟಕ್ಕೆ ಇಂತಿಷ್ಟೇ ಜನರು ಬೇಕು ಎಂದೇನಿಲ್ಲ. ಎಷ್ಟು ಜನ ಆಟಗಾರರು ಬೇಕಾದರೂ ಒಮ್ಮೆಗೆ ಆಡಬಹುದು. ಪ್ರಿಂಟ್ ಆಗಿರುವ ಬೋರ್ಡ್ ಒಂದಿದ್ದರೆ ಸಾಕು, ದಾಳ ಹಾಗೂ ಕಾಯಿ ಇದ್ದರೆ ಪಗಡೆ ರೀತಿಯಲ್ಲಿ ಆಡಬಹುದು.
ಮಾಸ್ಕ್ ಧರಿಸುವುದು, ಕೈ ತೊಳಿಯುವುದು, ಸ್ಯಾನಿಟೈಸರ್ ಬಳಕೆ , ಗೃಹಬಳಕೆ ದಿನಸಿ ಖರೀದಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ನಿಯಮ ಮೀರಿದರೆ ಕಟ್ಟಬೇಕಾದ ದಂಡ ಎಲ್ಲವನ್ನು ಈ ಆಟ ಒಳಗೊಂಡಿದೆ.
ಇದಲ್ಲದೆ, ಯೋಗ ಅಭ್ಯಾಸ ಮಾಡಲು ಆಟವು ಪ್ರೇರೇಪಿಸುತ್ತದೆ. ಒಮ್ಮೆ ನಿಮಗೆ ರೋಗ ಲಕ್ಷಣ ಕಂಡು ಬಂದರೆ ಆಸ್ಪತ್ರೆಗೆ ದಾಖಲಿಸುವ ಪ್ರಕ್ರಿಯೆ ಬಗ್ಗೆಯೂ ಇದೆ.

ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರ ಪುತ್ರ, ದೆಹಲಿಯ ಆರ್ಮಿ ಪಬ್ಲಿಕ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ವೀರ್ ತನ್ನ ಅಜ್ಜಿ, ಅಜ್ಜನ ಊರಿಗೆ ಹೋದಾಗ ಆಡಲು ಹೊರಗಡೆ ಮೈದಾನ ಇಲ್ಲದಿದ್ದಾಗ ಈ ಬೋರ್ಡ್ ಗೇಮ್ ಬಗ್ಗೆ ಆಲೋಚನೆ ಬಂದಿದೆ.
ಸಣ್ಣದಾಗಿ ಚಿತ್ರ ಬರೆದು ಆರಂಭಿಸಿದ ಈ ಆಟ ಈಗ ಉತ್ತಮ ರೀತಿಯಲ್ಲಿ ರೂಪುಗೊಂಡಿದೆ. ಈಗ ಈ ಆಟದ ಕಾಪಿರೈಟ್ ಪಡೆದುಕೊಂಡಿರುವ ವೀರ್ ಎಂಎಸ್ ಟೆಕ್ ಟೀಂ ಸಲ್ಯೂಷನ್ಸ್ ಜೊತೆ ಕಾರ್ಯ ನಿರ್ವಹಿಸುತ್ತಿದ್ದಾನೆ. ದೊಡ್ಡ ಮಟ್ಟದಲ್ಲಿ ಗೇಮಿಂಗ್ ಲೋಕಕ್ಕೆ ತನ್ನ ಕೊಡುಗೆ ನೀಡಲು ವೀರ್ ಮುಂದಾಗಿದ್ದಾನೆ. ಇದರಲ್ಲಿ ಬರುವ ಲಾಭವನ್ನು ಪಿಎಂ ಕೇರ್ಸ್ ಫಂಡ್ ಗೆ ನೀಡಲು ವೀರ್ ಕಶ್ಯಪ್ ಬಯಸಿದ್ದಾನೆ. (ಇಂಗ್ಲೀಷ್ ನಲ್ಲಿ ಓದಿ)
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ












Click it and Unblock the Notifications