ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟ
ನವದೆಹಲಿ, ಮೇ 28: ಮುಂಬರಲಿರುವ ವಿವಿಧ ರಾಜ್ಯಗಳ ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಯಾರೆಂಬ ಕುತೂಹಲಕ್ಕೆ ಇಂದು ಶನಿವಾರ ತೆರೆಬೀಳುವ ಸಾಧ್ಯತೆ ಇದೆ. ಇಂದು ನಡೆಯಲಿರುವ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಮೂಲಗಳು ಹೆಳುತ್ತಿವೆ. ಲಂಡನ್ನಲ್ಲಿರುವ ರಾಹುಲ್ ಗಾಂಧಿ ಅಲ್ಲಿಂದಲೇ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಳ್ಳಲಿರುವುದು ತಿಳಿದುಬಂದಿದೆ.
ಸೋನಿಯಾ ಸೆರಗು ಹಿಡಿದುಕೊಂಡು ಓಡಾಡುವರಿಗೆ RSS ಬಗ್ಗೆ ಏನು ಗೊತ್ತು?
ಕರ್ನಾಟಕವೂ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಇದರಲ್ಲಿ ಉತ್ತರ ಪ್ರದೇಶವೊಂದರಲ್ಲೇ 11 ಸ್ಥಾನಗಳಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ ಆರು ಸ್ಥಾನಗಳಿವೆ. ಬಿಹಾರದಲ್ಲಿ ಐದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ನಾಲ್ಕು ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ. ಈ 57 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಎಂಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ರಾಜಸ್ಥಾನದಲ್ಲಿ 2, ಛತ್ತೀಸ್ಗಡದಲ್ಲಿ 2, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ರಾಜಸ್ಥಾನದಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳ ಬೆಂಬಲ ಸಿಕ್ಕರೆ ಒಂದು ಹೆಚ್ಚುವರಿ ಸ್ಥಾನ ಕೂಡ ಕಾಂಗ್ರೆಸ್ಗೆ ದಕ್ಕಬಹುದು.
ರಾಜ್ಯಸಭೆ
ಪ್ರವೇಶದ
ಕನಸು:
ಕಾಂಗ್ರೆಸ್
ಪಕ್ಷದ
ಅನೆಕ
ಹಿರಿಯರು
ರಾಜ್ಯಸಭಾ
ಸ್ಥಾನಗಳಿಗೆ
ಸ್ಪರ್ಧಿಸಲು
ಟಿಕೆಟ್
ಆಕಾಂಕ್ಷಿಗಳಾಗಿದ್ದಾರೆ.
ಪಿ
ಚಿದಂಬರಂ,
ಗುಲಾಂ
ನಬಿ
ಆಜಾದ್,
ಆನಂದ್
ಶರ್ಮಾ,
ವಿವೇಕ್
ತಂಖ,
ಅಜಯ್
ಮಾಕೆನ್,
ರಾಜೀವ್
ಶುಕ್ಲ,
ಮುಕುಲ್
ವಾಸ್ನಿಕ್,
ಪ್ರಮೋದ್
ತಿವಾರಿ
ಈ
ಬಾರಿ
ರಾಜ್ಯಸಭೆ
ಪ್ರವೇಶದ
ಕನಸಿನಲ್ಲಿದ್ದಾರೆ.
ಆದರೆ,
ಇತ್ತೀಚೆಗೆ
ರಾಜಸ್ಥಾನದ
ಉದಯಪುರ್ನಲ್ಲಿ
ನಡೆದಿದ್ದ
ಕಾಂಗ್ರೆಸ್
ಚಿಂತನಾ
ಶಿಬಿರದಲ್ಲಿ
ಯುವಕರಿಗೆ
ಆದ್ಯತೆ
ಕೊಡಬೇಕೆಂಬ
ವಿಚಾರ
ಇರುವುದರಿಂದ
ಮೇಲೆ
ತಿಳಿಸಿದ
ಹಿರಿಯ
ನಾಯಕರಲ್ಲಿ
ಯಾರಿಗೆ
ಟಿಕೆಟ್
ಕೈತಪ್ಪಬಹುದು
ಎಂಬ
ಕುತೂಹಲವೂ
ಇದೆ.
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಇಂದು ಶನಿವಾರ ನಡೆಯಲಿರುವ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ. ರಾಹುಲ್ ಗಾಂಧಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗವಹಿಸಲಿದ್ದಾರೆ.
ರಾಜ್ಯಸಭೆಗೆ ಲಾಲು ಪುತ್ರಿ ಮಿಸಾ ಭಾರತಿ, ಫೈಯಾಜ್ ಅಹ್ಮದ್ ಆರ್ಜೆಡಿ ಅಭ್ಯರ್ಥಿಗಳು
ಕರ್ನಾಟಕದಲ್ಲಿ
ಕಾಂಗ್ರೆಸ್ಗೆ
1
ಸ್ಥಾನ:
ಕರ್ನಾಟಕದಲ್ಲಿ
ನಾಲ್ಕು
ರಾಜ್ಯಸಭಾ
ಸ್ಥಾನಗಳಿಗೆ
ಚುನಾವಣೆ
ನಡೆಯಲಿದೆ.
ಇದರಲ್ಲಿ
ಕಾಂಗ್ರೆಸ್ಗೆ
ಒಂದು
ಸ್ಥಾನ
ಗೆಲ್ಲುವ
ಅವಕಾಶ
ಇದೆ.
ಬಿಜೆಪಿಗೆ
ಎರಡು
ಸ್ಥಾನಗಳು
ನಿಶ್ಚಿತವಾಗಿವೆ.
ಇನ್ನೊಂದು
ಸ್ಥಾನಕ್ಕೆ
ಮಾತ್ರ
ಅತಂತ್ರ
ಸ್ಥಿತಿ
ಇದೆ.
ಜೆಡಿಎಸ್
ಬೆಂಬಲ
ಇದ್ದವರಿಗೆ
ಆ
ಸ್ಥಾನ
ಸಿಗುತ್ತದೆ.
ಜೆಡಿಎಸ್
ಆ
ಒಂದು
ಸ್ಥಾನದ
ನಿರೀಕ್ಷೆಯಲ್ಲಿದೆ.
ಬಿಜೆಪಿ
ಮೂರು
ಅಭ್ಯರ್ಥಿಗಳನ್ನು
ನಿಲ್ಲಿಸಿದರೆ
ಜೆಡಿಎಸ್ಗೆ
ಕಷ್ಟವಾಗುತ್ತದೆ.
ಹೀಗಾಗಿ,
ಮೂರನೇ
ಅಭ್ಯರ್ಥಿ
ನಿಲ್ಲಿಸಬೇಡಿ
ಎಂದು
ಮಾಜಿ
ಪ್ರಧಾನಿ
ಎಚ್
ಡಿ
ದೇವೇಗೌಡರು
ಬಿಜೆಪಿಯ
ವರಿಷ್ಠರನ್ನು
ಕೇಳಿಕೊಂಡಿದ್ದಾರೆ
ಎಂದು
ಮೂಲಗಳು
ಹೇಳುತ್ತಿವೆ.
ಕಾಂಗ್ರೆಸ್
ಪಕ್ಷದಿಂದ
ಜೈರಾಮ್
ರಮೇಶ್
ಅವರಿಗೆ
ಟಿಕೆಟ್
ಸಿಗುವ
ನಿರೀಕ್ಷೆ
ಇದೆ.
ಇದು
ಇಂದಿನ
ಸಭೆಯಲ್ಲಿ
ತೀರ್ಮಾನವಾಗಲಿದೆ.
ಇನ್ನು, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರು ತಮಿಳುನಾಡಿನಿಂದ ರಾಜ್ಯಸಭೆಗೆ ಪ್ರವೇಶಿಸುವ ಇರಾದೆಯಲ್ಲಿದ್ದಾರೆ. ಸದ್ಯ ಅವರು ಮಹಾರಾಷ್ಟ್ರದಿಂದ ಆಯ್ಕೆಯಾಗಿದ್ದರು. ಇದೀಗ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರದಲ್ಲಿರುವುದು ಕಾಂಗ್ರೆಸ್ಗೆ ಒಂದು ಸ್ಥಾನ ನಿಶ್ಚಿತವಾಗಿದೆ.
ಸಂಸತ್ತಿನ ಮೇಲ್ಮನೆಯಲ್ಲಿ ಒಟ್ಟು ಸದಸ್ಯಬಲ 245 ಇದೆ. ಸದ್ಯ ಬಿಜೆಪಿ 95 ಸದಸ್ಯರನ್ನು ಹೊಂದಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ 29 ರಾಜ್ಯಸಭಾ ಸಂಸದರಿದ್ದಾರೆ. ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಏಳೆಂಟು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
(ಒನ್ಇಂಡಿಯಾ ಸುದ್ದಿ)