ಸನ್ನಿ ಡಿಯೋಲ್ ಬಂಗಲೆ ಇ-ಹರಾಜು ನೋಟಿಸ್ ವಾಪಸ್: ಕಾರಣ ಏನೆಂದ ಕಾಂಗ್ರೆಸ್
ಮುಂಬೈನಲ್ಲಿರುವ ನಟ-ರಾಜಕಾರಣಿ ಸನ್ನಿ ಡಿಯೋಲ್ ಅವರ ಬಂಗಲೆಗೆ ಬ್ಯಾಂಕ್ ಆಫ್ ಬರೋಡಾ ಇ-ಹರಾಜು ನೋಟಿಸ್ ಹಿಂಪಡೆದಿರುವುದನ್ನು ಕಾಂಗ್ರೆಸ್ ಸೋಮವಾರ ಪ್ರಶ್ನಿಸಿದೆ. "24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ" ನೋಟಿಸ್ ಹಿಂಪಡೆಯಲು ಅಂತಹ "ತಾಂತ್ರಿಕ ಕಾರಣಗಳು ಏನು" ಯಾರು ಪ್ರಚೋದಿಸಿದರು ಎಂದು ಅದು ಪ್ರಶ್ನೆ ಮಾಡಿದೆ.
ಪಶ್ಚಿಮ ಮುಂಬೈನ ಜುಹುದಲ್ಲಿರುವ ಸನ್ನಿ ಡಿಯೋಲ್ ಅವರ ಬಂಗಲೆಯನ್ನು 56 ಕೋಟಿ ರೂಪಾಯಿಗಳ ಸಾಲವನ್ನು ವಸೂಲಿ ಮಾಡಲು ಬ್ಯಾಂಕ್ ಆಫ್ ಬರೋಡಾ ಈ ಹಿಂದೆ ಹರಾಜು ಮಾಡಬೇಕಿತ್ತು. ಆದಾಗ್ಯೂ, ಬ್ಯಾಂಕ್ ಈಗ "ತಾಂತ್ರಿಕ ಕಾರಣಗಳು" ಎಂದು ಕಾರಣ ನೀಡಿ ನೋಟಿಸ್ ಅನ್ನು ಹಿಂಪಡೆದಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟ್ಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಪ್ರಶ್ನೆ ಮಾಡಿದ್ದಾರೆ. "ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ 56 ಕೋಟಿ ರೂ. ಸಾಲ ಬಾಕಿ ಇದ್ದು, ಪಾವತಿಸದ ಕಾರಣ ಬ್ಯಾಂಕ್ ಆಫ್ ಬರೋಡಾ ಅವರ ಜುಹು ನಿವಾಸವನ್ನು ಇ-ಹರಾಜಿಗೆ ಇಟ್ಟಿರುವುದು ನಿನ್ನೆ ಮಧ್ಯಾಹ್ನ ದೇಶಕ್ಕೆ ಗೊತ್ತಾಯಿತು. ಇಂದು ಬೆಳಗ್ಗೆ 24 ಗಂಟೆಯೊಳಗೆ ಬ್ಯಾಂಕ್ ಆಫ್ ಬರೋಡಾ 'ತಾಂತ್ರಿಕ ಕಾರಣಗಳಿಂದ' ಹರಾಜು ಸೂಚನೆಯನ್ನು ಹಿಂಪಡೆದಿದೆ ಎಂದು ಗೊತ್ತಾಗಿದೆ. ಈ 'ತಾಂತ್ರಿಕ ಕಾರಣ'ಗಳನ್ನು ಪ್ರಚೋದಿಸಿದವರು ಯಾರು?" ಎಂದು ಪ್ರಶ್ನೆ ಮಾಡಿದ್ದಾರೆ.
Yesterday afternoon the nation got to know that Bank of Baroda had put up the Juhu residence of BJP MP Sunny Deol for e-auction since he has not paid up Rs 56 crore owed to the Bank.
— Jairam Ramesh (@Jairam_Ramesh) August 21, 2023
This morning, in less than 24 hours, the nation has got to know that the Bank of Baroda has…
ಆಗಸ್ಟ್ 25ರಂದು ನಡೆಯಬೇಕಿದ್ದ ಹರಾಜು
ಆಗಸ್ಟ್ 25 ರಂದು ಈ ಬಂಗಲೆ ಹರಾಜು ನಡೆಯಬೇಕಿತ್ತು, ಹರಾಜಿನ ಮೂಲಕ 56 ಕೋಟಿ ರೂಪಾಯಿ ವಸೂಲಿ ಮಾಡಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
ಸನ್ನಿ ಡಿಯೋಲ್ ಅವರು ಡಿಸೆಂಬರ್ 2022 ರಿಂದ ಬ್ಯಾಂಕ್ನ ರೂ 55.99 ಕೋಟಿ ಸಾಲವನ್ನು ಮತ್ತು ಬಡ್ಡಿ ಮತ್ತು ದಂಡವನ್ನು ಪಾವತಿಸಲು ವಿಫಲರಾಗಿದ್ದಾರೆ ಎಂದು ಬ್ಯಾಂಕ್ ಆಫ್ ಬರೋಡಾ ಭಾನುವಾರ ಸಾರ್ವಜನಿಕ ಟೆಂಡರ್ನಲ್ಲಿ ತಿಳಿಸಿದೆ. ಆದರೆ, ಬಂಗಲೆಯ ಹರಾಜು ನೋಟಿಸ್ ಹಿಂಪಡೆಯಲಾಗಿದೆ.
ಅಜಯ್ ಸಿಂಗ್ ಧರ್ಮೇಂದ್ರ ಡಿಯೋಲ್ ಎಂದು ಕರೆಯಲ್ಪಡುವ 65 ವರ್ಷದ ನಟ, 2019 ರಿಂದ ಗುರುದಾಸ್ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಆಗಿನ ಕಾಂಗ್ರೆಸ್ ನಾಯಕ ಸುನಿಲ್ ಜಾಖರ್ ಅವರನ್ನು ಸೋಲಿಸಿದ್ದರು.
ಸನ್ನಿ ಡಿಯೋಲ್ ಅವರ ಇತ್ತೀಚಿನ ಚಿತ್ರ ಗದರ್ 2 ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಆಗಸ್ಟ್ 11 ರಂದು ಬಿಡುಗಡೆಯಾದ ಸಿನಿಮಾ 300 ಕೋಟಿಗೂ ಹೆಚ್ಚು ಗಳಿಸಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications