ಖಲಿಸ್ತಾನಿ ವಿಚಾರದಲ್ಲಿ ಭಾರತದ ವಿರುದ್ಧ ಅಮೆರಿಕ ಮತ್ತೊಂದು ಗಂಭೀರ ಆರೋಪ!
ಭಾರತ ಮತ್ತು ಅಮೆರಿಕ ನಡುವೆ ಖಲಿಸ್ತಾನಿಗಳ ವಿಚಾರದಲ್ಲಿ ಕಿರಿಕ್ ಜೋರಾಗುವ ಲಕ್ಷಣ ಗೋಚರಿಸುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಗಂಭೀರ ಆರೋಪವನ್ನು ಈಗ ಅಮೆರಿಕದ ಪ್ರಾಸಿಕ್ಯೂಟರ್ಗಳು ಮಾಡಿದ್ದಾರೆ. ಅದರಲ್ಲೂ ಭಾರತ ಮೂಲದ ನಿಖಿಲ್ ಗುಪ್ತಾ ಅವರನ್ನ ಈ ಪ್ರಕರಣದಲ್ಲಿ ಹೊಣೆ ಮಾಡುತ್ತಿರುವ ಅಮೆರಿಕದ ಪ್ರಾಸಿಕ್ಯೂಟರ್ಸ್, ಈಗ ಮತ್ತೊಂದು ಆರೋಪದ ಬಾಂಬ್ ಸಿಡಿಸಿದ್ದಾರೆ!
ಹೌದು, ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಯತ್ನವನ್ನು ಭಾರತದ ಪ್ರಜೆ ನಿಖಿಲ್ ಗುಪ್ತಾ ಎನ್ನುವವರ ತಲೆಗೆ ಕಟ್ಟಿರುವ ಅಮೆರಿಕ ಮತ್ತೊಂದು ಗಂಭೀರವಾದ ಆರೋಪ ಮಾಡಿದೆ. ಭಾರತದ ಪ್ರಜೆ ನಿಖಿಲ್ ಗುಪ್ತ ಎಂಬುವವರ ವಿರುದ್ಧ ಸಂಚು ರೂಪಿಸಿದ ದೋಷಾರೋಪ ಹೊರಿಸಿತ್ತು ಅಮೆರಿಕ. ನಿಖಿಲ್ ಗುಪ್ತಾ 2023ರ ಜೂನ್ನಲ್ಲಿ ಜೆಕ್ ಗಣರಾಜ್ಯದ ಅಧಿಕಾರಿಗಳಿಂದ ಅರೆಸ್ಟ್ ಆಗಿದ್ದ. ಆದರೆ ಈ ನಿಖಿಲ್ ಗುಪ್ತಾ ಹೀಗೆ ಪನ್ನೂನ್ ಹತ್ಯೆಗೆ ಸ್ಕೆಚ್ ಹಾಕಲು ಒಪ್ಪಿದ್ದು ಯಾವ ಕಾರಣಕ್ಕಂತೆ ಗೊತ್ತಾ? ಅಮೆರಿಕದ ಆರೋಪ ಏನು?

ಕೇಸ್ ರದ್ದು ಮಾಡ್ತಾರೆ ಅಂತಾ ಸ್ಕೆಚ್?
ಅಂದಹಾಗೆ ಈಗ ಅಮೆರಿಕದ ಪ್ರಾಸಿಕ್ಯೂಟರ್ಸ್ ಮಾಡಿರುವ ಆರೋಪದಂತೆ, ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ನಿಖಿಲ್ ಗುಪ್ತಾ ಕೈಹಾಕಿದ್ದು ಆತನ ವಿರುದ್ಧದ ಕ್ರಿಮಿನಲ್ ಕೇಸ್ ರದ್ದು ಮಾಡಿಕೊಳ್ಳಲು ಅಂತೆ. ಗುಜರಾತ್ನಲ್ಲಿ ತನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆಯ ವಜಾಗೊಳಿಸುವ ಭರವಸೆ ನೀಡಿದ ನಂತರ ಗುಪ್ತಾ ಸಂಚು ರೂಪಿಸಲು ಒಪ್ಪಿಕೊಂಡಿದ್ದಾನೆಂದು ಅಮೆರಿಕ ಪ್ರಾಸಿಕ್ಯೂಟರ್ಸ್ ಆರೋಪ ಮಾಡಿದ್ದಾರೆ. ಈ ಮೂಲಕ ಮೊದಲೇ ಧಗಧಗಿಸಿದ್ದ ಭಾರತ & ಅಮೆರಿಕ ಸಂಬಂಧದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಇದಕ್ಕೂ ಹಿಂದೆ ಹೇಳಿದ್ದು ಏನು?
ಖಾಲಿಸ್ತಾನ್ ರಾಷ್ಟ್ರ ಸ್ಥಾಪನೆ ಪ್ರತಿಪಾದಿಸಿದ್ದ ಅಮೆರಿಕ ಪ್ರಜೆ ಪನ್ನೂ ಹತ್ಯೆಗೆ ಸ್ಕೆಚ್ ಹಾಕಿದ್ದರು ಎಂಬ ಆರೋಪವನ್ನ ಅಮೆರಿಕ ಮಾಡಿತ್ತು. ಈ ಸಂಬಂಧ ಭಾರತದ ಪ್ರಜೆ ನಿಖಿಲ್ ಗುಪ್ತ ಎಂಬುವವರ ವಿರುದ್ಧ ಸಂಚು ರೂಪಿಸಿದ ದೋಷಾರೋಪ ಹೊರಿಸಿದೆ ಅಮೆರಿಕ. ನಿಖಿಲ್ ಗುಪ್ತಾ 2023 ರ ಜೂನ್ನಲ್ಲಿ ಜೆಕ್ ಗಣರಾಜ್ಯದ ಅಧಿಕಾರಿಗಳಿಂದ ಅರೆಸ್ಟ್ ಆಗಿದ್ದ. ಆದ್ರೆ ಈಗ ಇದೇ ನಿಖಿಲ್ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ಇದರ ಜೊತೆಗೆ ಈತ ತನ್ನ ವಿರುದ್ಧ ಭಾರತದಲ್ಲಿ ಇರುವ ಕ್ರಿಮಿನಲ್ ಕೇಸ್ ರದ್ದು ಮಾಡಲು ಇಂತಹ ಕೃತ್ಯಕ್ಕೆ ಮುಂದೆ ಬಂದಿದ್ದ ಎಂಬ ಆರೋಪ ಮಾಡಿದೆ ಅಮೆರಿಕ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications