ಧಮ್ ಹೊಡೆಯೋದ್ರಲ್ಲೂ ಮಹಿಳೆಯರದ್ದೇ ಮೇಲುಗೈ!
ಬೆಂಗಳೂರು, ಡಿಸೆಂಬರ್, 28: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಕ್ಕೆ ಬರಬೇಕು. ಪುರುಷನಿಗೆ ಸರಿಸಮನಾದ ಸಾಧನೆ ಮಾಡಬೇಕು ಎಂದು ಹೇಳುತ್ತಲೇ ಬರಲಾಗಿದೆ. ಅದಕ್ಕೆ ತಕ್ಕ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ. ಅಂಥ ಕೆಲ ಸಾಧನೆಗಳು ನಡೆದಿವೆ. ಆದರೆ ಬೇಡದ ವಿಷಯವೊಂದರಲ್ಲಿ ಮಹಿಳೆಯರು ಪುರುಷರ ಬೆನ್ನ ಹಿಂದೆ ಬಿದ್ದಿದ್ದಾರೆ. ಅಮೆರಿಕದ ನಂತರದ ಸ್ಥಾನವನ್ನು ಮಹಿಳೆಯರು ಭಾರತಕ್ಕೆ ತಂದುಕೊಟ್ಟಿದ್ದಾರೆ.
ಧೂಮಪಾನಿಗಳ ಲೆಕ್ಕದಲ್ಲಿ ಭಾರತದ ಮಹಿಳೆಯರು ಪುರುಷರನ್ನು ಮೀರುವ ಸಾಧನೆ ಮಾಡುತ್ತಿದ್ದಾರೆ! ಆರೋಗ್ಯ ಇಲಾಖೆ ನೀಡುರುವ ಮಾಹಿತಿಯಂತೆ 2014-15ರ ಸಾಲಿನಲ್ಲಿ 10 ಬಿಲಿಯನ್ ಸಿಗರೇಟ್ ಸೇವನೆ ಕಡಿಮೆಯಾಗಿದೆ(2013-14 ರಲ್ಲಿ 93.2 ಬಿಲಿಯನ್ ಇತ್ತು). ಆದರೆ ಸಿಗರೇಟ್ ಗೆ ದಾಸರಾಗುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಬೃಹತ್ ಏರಿಕೆಯಾಗಿದೆ.[2015ರ 10 ಅತಿಕೆಟ್ಟ ಕೆಲಸಗಳು; ನಿಮ್ಮ ವೃತ್ತಿ ಯಾವುದು?]

ಆದರೆ ಆತಂಕಕಾರಿ ಮಾಹಿತಿಯೊಂದು ಇದರೊಂದಿಗೆ ಸಿಕ್ಕಿದೆ. ಮಹಿಳಾ ಧೂಮಪಾನಿಗಳ ಸಂಖ್ಯೆಯಲ್ಲಿ ಶೇ. 139 ಏರಿಕೆ ಕಂಡಿದ್ದು ಭಾರತದಲ್ಲಿ 12.7(2012) ಮಿಲಿಯನ್ ಹೆಂಗಳೆಯರು ಸಿಗರೇಟ್ ಸುಡುತ್ತಿದ್ದಾರೆ. ಧೂಮಪಾನಕ್ಕೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿ ಪುರುಷರಿಂತ ಮಹಿಳೆಯರ ಪ್ರಗತಿಯೇ ಉತ್ತಮವಾಗಿದೆ!
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು:
ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ ಗ್ರಾಮೀಣ ಭಾಗದ ಮಹಿಳೆಯರೇ ದುಶ್ಚಟಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಗ್ರಾಮೀಣ ಭಾಗದ ಶೇ. 52 ಪುರುಷರು ಮತ್ತು ಶೇ. 24 ಮಹಿಳೆಯರು ಧೂಮಪಾನಕ್ಕೆ ಬಲಿಯಾಗಿದ್ದಾರೆ. ನಗರ ಪ್ರದೇಶದ ಶೇ. 38 ಪುರುಷರು ಮತ್ತು ಶೇ. 12 ಮಹಿಳೆಯರು ಸಿಗರೇಟು ದಾಸರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.[ಇದನ್ನು ಓದಿ,,, ಆಮೇಲೆ ಧುಮಪಾನ ಮಾಡೋದು ನಿಮ್ಮ ಇಷ್ಟ]
ತಂಬಾಕು ಬಳಕೆ ಮಾಡುವ ದೇಶಗಳ ಸಾಲಲ್ಲಿ ಭಾರತಕ್ಕೆ ಎರಡನೇ ಸ್ಥಾನ. 2020 ಕ್ಕೆ ಸಿಗರೇಟು ಸೇದುವವರ ಸಂಖ್ಯೆಯಲ್ಲಿ ಶೇ. 20 ಮತ್ತು 2025ರ ವೇಳೆಗೆ ಶೇ. 30 ರಷ್ಟು ಕಡಿಮೆ ಮಾಡಬೇಕು ಎಂಬ ಗುರಿಯನ್ನುನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಂದಿದೆ. ಆದರೆ ಈಗಿನ ವಾತಾವರಣವನ್ನು ನೋಡಿದರೆ ಅದು ಅಸಾಧ್ಯ ಎಂದೇ ಹೇಳಲಾಗುತ್ತಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications