ಮೊಬೈಲ್ ಕಸಿದುಕೊಳ್ಳುವವರನ್ನು ವಿರೋಧಿಸುವ ವೇಳೆ ರೈಲಿನಿಂದ ಬಿದ್ದು ಚೆನ್ನೈ ಮಹಿಳೆ ಸಾವು!
ಚೆನ್ನೈ ಜುಲೈ 9: ತನ್ನ ಮೊಬೈಲ್ ಫೋನ್ ಕದಿಯಲು ಪ್ರಯತ್ನಿಸುತ್ತಿದ್ದ ಇಬ್ಬರೊಂದಿಗೆ ವಾಗ್ವಾದದ ಸಂದರ್ಭದಲ್ಲಿ ಚೆನ್ನೈನ ಸ್ಥಳೀಯ ರೈಲಿನಿಂದ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಕಳೆದ ಭಾನುವಾರ (ಜುಲೈ 2) ಸಂಭವಿಸಿದೆ. ಘಟನೆಯಿಂದ ಎಸ್ ಪ್ರೀತಿ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ 22ರ ಹರೆಯದ ಯುವತಿ ಎಸ್ ಪ್ರೀತಿ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಪೊಲೀಸರ ಪ್ರಕಾರ, ಚೆನ್ನೈನ ಇಂದಿರಾ ನಗರ ನಿಲ್ದಾಣದಲ್ಲಿ ರೈಲಿನ ಫುಟ್ಬೋರ್ಡ್ ಮೇಲೆ ನಿಂತಿದ್ದ ಪ್ರೀತಿ ತನ್ನ ಫೋನ್ನಲ್ಲಿ ಮಾತನಾಡುತ್ತಿದ್ದಳು. ಇಬ್ಬರು ಆರೋಪಿಗಳು ಮೊಬೈಲ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ ಅವಳು ವಿರೋಧಿಸಿದಳು. ಆಕೆ ರೈಲಿನಿಂದ ಪ್ಲಾಟ್ಫಾರ್ಮ್ಗೆ ಬಿದ್ದಳು.

ಇಬ್ಬರು ಆಕೆಯ ಮೊಬೈಲ್ ಕದ್ದಿದ್ದು, ಆಕೆಯನ್ನು ಸ್ಥಳದಲ್ಲೇ ಪ್ರಜ್ಞಾಹೀನಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರ್ ಅಪರಾಧ ಘಟಕದ ಸಹಾಯದಿಂದ ಪ್ರೀತಿಯ ಕರೆ ದಾಖಲೆಗಳನ್ನು ಬಳಸಿಕೊಂಡು ಪೊಲೀಸ್ ಅಧಿಕಾರಿಗಳು ಆಕೆಯ ಮೊಬೈಲ್ ಫೋನ್ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಯಿತು.
ಇದು ಬೆಸೆಂಟ್ ನಗರದ ಮೀನು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಜು ಎಂಬ ವ್ಯಕ್ತಿಯ ಬಳಿಗೆ ಪೊಲೀಸರಿಗೆ ನೆಟ್ವರ್ಕ್ ಸಿಕ್ಕಿದೆ. ವಿಚಾರಣೆ ವೇಳೆ ರಾಜು ಅವರು ಇಬ್ಬರು ವ್ಯಕ್ತಿಗಳಿಂದ 2000 ರೂಪಾಯಿಗೆ ಫೋನ್ ಖರೀದಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.
WATCH | Bihar Thief's Train Hangout: He Dangles Outside As Passengers Hold Arms pic.twitter.com/dvWqEbRATB
— NDTV (@ndtv) September 15, 2022
ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳಾದ ಮಣಿಮಾರನ್ ಮತ್ತು ವಿಘ್ನೇಶ್ ಅವರನ್ನು ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಪ್ರೀತಿಯಿಂದ ಫೋನ್ ಕದ್ದಿರುವುದಾಗಿ ಇಬ್ಬರು ತಪ್ಪೊಪ್ಪಿಕೊಂಡಿದ್ದು, ಇದರಿಂದ ಆಕೆ ರೈಲಿನಿಂದ ಬಿದ್ದಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ರೈಲಿನಲ್ಲಿ ಕಳ್ಳತನ ಮಾಡಲು ಹೋಗಿ ಸಿಕ್ಕ ಕಳ್ಳ
ಕಳೆದ ವರ್ಷ ರೈಲಿನಲ್ಲಿ ಮೊಬೈಲ್ ಕದಿಯಲು ಹೋಗಿ ಕಳ್ಳನೊಬ್ಬ ಸಿಕ್ಕಿಕೊಂಡಿದ್ದನು. ಬಳಿಕ ಆತ ಪಟ್ಟ ಫಜೀತಿ ಹೇಳತೀರದ್ದು. ರೈಲ್ವೆ ಪ್ರಯಾಣಿಕನ ಮೊಬೈಲ್ ಕಳವು ಮಾಡಲು ಹೋಗಿ ಸಿಕ್ಕಿಬಿದ್ದು ಕಳ್ಳನೋರ್ವ 10 ಕಿ.ಮೀವರೆಗೂ ಜೋತಾಡುತ್ತಾ, ಮತ್ತೊಮ್ಮೆ ಈ ರೀತಿ ಮಾಡುವುದಿಲ್ಲ ಕ್ಷಮಿಸಿ ಎಂದು ಫಜೀತಿ ಮಾಡಿಕೊಂಡಿದ್ದನು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು.
2022 ಸೆಪ್ಟೆಂಬರ್ 14ರಂದು ಬಿಹಾರದಲ್ಲಿ ಈ ಘಟನೆ ನಡೆದಿದ್ದು, ರೈಲಿನ ಕಿಟಕಿ ಬಳಿ ಕುಳಿತಿದ್ದ ಪ್ರಯಾಣಿಕನ ಮೊಬೈಲ್ ಕಳ್ಳತನ ಮಾಡಲು ಹೋಗಿ ಕಳ್ಳ ಸಿಕ್ಕಿಬಿದ್ದು ತಪ್ಪಿಕೊಳ್ಳಲಾಗದೇ ನರಳಾಡಿದ್ದನು. ರೈಲು ಬೇಗುಸರಾಯ್ನಿಂದ ಖಗರಿಯಾಗೆ ಹೊರಟಿತ್ತು. ಈ ಮಧ್ಯೆ ಸಾಹೇಬ್ಪುರ ಕಮಲ್ ನಿಲ್ದಾಣದ ಬಳಿ ವ್ಯಕ್ತಿ ತನ್ನ ಕೈಯನ್ನು ಕಿಟಕಿ ಒಳಗೆ ಹಾಕಿ ಪ್ರಯಾಣಿಕನ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ.
ಆದರೆ ಇದರಿಂದ ಎಚ್ಚೆತ್ತುಕೊಂಡ ಪ್ರಯಾಣಿಕ ಆತನ ಕೈ ಹಿಡಿದುಕೊಂಡಿದ್ದಾನೆ. ಈ ವೇಳೆ ರೈಲು ಚಲಿಸಲು ಆರಂಭಿಸಿದೆ. ಆಗ ಕಳ್ಳ ದಯವಿಟ್ಟು ನನ್ನ ಕೈ ಬಿಡಿ ಎಂದು ಅಳುತ್ತಾ ಬೇಡಿಕೊಂಡಿದ್ದಾನೆ. ಆದರೂ ಪ್ರಯಾಣಿಕ ಆತನ ಕೈ ಬಿಡದೇ ಸತಾಯಿಸಿದ್ದಾನೆ. ಹೀಗಾಗಿ 10 ಕಿ.ಮೀವರೆಗೂ ಕಿಟಕಿ ಬಳಿ ತೂಗಾಡುತ್ತಾ, ಜೋತಾಡುತ್ತಾ ಕಳ್ಳ ಬಿಡಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡಿದ್ದಾನೆ.












Click it and Unblock the Notifications