ಚಂದ್ರಯಾನ 2: ವಿಕ್ರಮ್ ಲ್ಯಾಂಡರ್ ಇಳಿಸಲು ದಕ್ಷಿಣ ಧ್ರುವವನ್ನೇ ಆರಿಸಿಕೊಂಡ ಕಾರಣ ತಿಳಿಸಿದ ಇಸ್ರೋ ಮುಖ್ಯಸ್ಥ ಆರ್ ಸೋಮನಾಥ್
ಬೆಂಗಳೂರು, ಆಗಸ್ಟ್ 25: ಚಂದ್ರಯಾನ-3 ಬುಧವಾರ ಸಂಜೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡುವುದರ ಮೂಲಕ ಕೋಟ್ಯಾಂತರ ಭಾರತೀಯರ ಹೃದಯ ಗೆದ್ದಿದೆ. ಈ ಮೂಲಕ ಭಾರತದ ಕೀರ್ತಿಯನ್ನು ಹಾರಿಸಿ ಬಾಹ್ಯಾಕಾಶದಲ್ಲಿ ಇತಿಹಾಸ ಬರೆದಿದೆ.
ಇಂಜಿನ್ ಅಸಮರ್ಪಕ ಕಾರ್ಯದಿಂದ ಅದೇ ಪ್ರದೇಶದಲ್ಲಿ ಚಂದ್ರನ ಸ್ಪರ್ಶಕ್ಕೆ ರಷ್ಯಾದ ಪ್ರಯತ್ನ ವಿಫಲವಾದ ನಂತರ ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶ ಭಾರತವಾಗಿದೆ. ಚಂದ್ರನ ಮೇಲ್ಮೈಯಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಲು ಇದು ಭಾರತದ ಮೂರನೇ ಪ್ರಯತ್ನವಾಗಿದೆ.

ಚಂದ್ರಯಾನ- 2 ಮಿಷನ್ ಸೆಪ್ಟೆಂಬರ್ 2019 ರಲ್ಲಿ ಚಂದ್ರನ ಮೇಲೆ ಅದರ ಲ್ಯಾಂಡರ್ ಅಪ್ಪಳಿಸಿದ ನಂತರ ಪ್ರಯತ್ನ ವಿಫಲವಾಗಿತ್ತು. ಚಂದ್ರಯಾನ-2 ಗಟ್ಟಿಯಾಗಿ ಲ್ಯಾಂಡಿಂಗ್ ಮಾಡಿದ ಕಾರಣ, ಅದು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಮಿಷನ್ನಲ್ಲಿ ಎಲ್ಲವನ್ನೂ ಹೊಸದಾಗಿ ಮಾಡಬೇಕಾಯಿತು ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಹೇಳಿದ್ದಾರೆ.
ಈ ಮಿಷನ್ಗಾಗಿ ಎಲ್ಲವನ್ನೂ ಹೊಸದಾಗಿ ಮಾಡಬೇಕಾಗಿತ್ತು. ಚಂದ್ರಯಾನ-2 ಪ್ರಯೋಗದಲ್ಲಿ ನಾವು ಚಂದ್ರನಿಂದ ಏನನ್ನೂ ಮರುಪಡೆಯಲು ಸಾಧ್ಯವಾಗಲಿಲ್ಲ. ಚಂದ್ರಯಾನ-2 ನಲ್ಲಿ ಏನು ತಪ್ಪಾಗಿದೆ ಎಂದು ಲೆಕ್ಕಾಚಾರ ಮಾಡಲು ಮೊದಲ ವರ್ಷ ಕಳೆಯಿತು. ಮುಂದಿನ ವರ್ಷ ನಾವು ಎಲ್ಲವನ್ನೂ ಪರಿಷ್ಕರಿಸಿದ್ದೇವು. ಕಳೆದ 2 ವರ್ಷಗಳಲ್ಲಿ ಸಾಕಷ್ಟು ಪರೀಕ್ಷೆಗಳನ್ನು ನಡೆಸಿದೆವು ಎಂದು ಅವರು ತಿಳಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಭಾರಿ ಹೊಡೆತ ಬಿದ್ದಿದೆ. ಕೋವಿಡ್ ನಮ್ಮ ಕೆಲವು ಕಾರ್ಯಕ್ರಮಗಳನ್ನು ವಿಳಂಬ ಮಾಡಿತು. ಆದರೆ ನಾವು ಇನ್ನೂ ಕೆಲವು ರಾಕೆಟ್ಗಳನ್ನು ಉಡಾಯಿಸುತ್ತಿದ್ದೆವು. ಕೋವಿಡ್ ನಂತರ ನಾವು ಚಂದ್ರಯಾನದ ಮಿಷನ್ಗೆ ಸಜ್ಜುಗೊಂಡೆವು ಎಂದು ಅವರು ಹೇಳಿದರು.
ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸಲು ಯಾವುದೇ ಬಾಹ್ಯಾಕಾಶ ನೌಕೆಗೆ ಸಾಧ್ಯವಾಗದ ಕಾರಣ ಚಂದ್ರಯಾನ-3 ರ ಈ ಸಾಧನೆ ವಿಶೇಷವಾಗಿದೆ. ಚಂದ್ರನ ದಕ್ಷಿಣ ಧ್ರುವವು ಸಿಬ್ಬಂದಿ ಅಪೊಲೊ ಲ್ಯಾಂಡಿಂಗ್ ಸೇರಿದಂತೆ ಹಿಂದಿನ ಕಾರ್ಯಾಚರಣೆಗಳಿಂದ ಗುರಿಯಾಗಿರುವ ಸಮಭಾಜಕ ಪ್ರದೇಶದಿಂದ ದೂರದಲ್ಲಿದೆ. ಅಲ್ಲದೆ ಕುಳಿಗಳು ಮತ್ತು ಆಳವಾದ ಕಂದಕಗಳಿಂದ ತುಂಬಿದೆ.
ಚಂದ್ರಯಾನ-3 ಮಿಷನ್ನ ಸಂಶೋಧನೆಗಳು ಚಂದ್ರನಲ್ಲಿರುವವ ನೀರಿನ ಮಂಜುಗಡ್ಡೆಯ ಕುರಿತು ಸಂಶೋಧನೆ ಮುಂದುವರೆಸತ್ತದೆ, ಇದು ಚಂದ್ರನ ಅತ್ಯಮೂಲ್ಯ ಸಂಪನ್ಮೂಲಗಳಲ್ಲಿ ಒಂದಾಗಿದೆ. ಮುಂದಿನ 14 ದಿನಗಳಲ್ಲಿ ಆರು ಚಕ್ರಗಳ ರೋವರ್ ಚಂದ್ರನ ಮೇಲ್ಮೈಯಲ್ಲಿ ಪ್ರಯೋಗಗಳನ್ನು ನಡೆಸುತ್ತದೆ. ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎರಡೂ ಚಂದ್ರನ ಒಂದು ಮಿಷನ್ ಕಾರ್ಯಾಚರಣೆ ನಡೆಸುತ್ತವೆ, ಇದು ಭೂಮಿಯ ಮೇಲೆ 14 ದಿನಗಳಿಗೆ ಸಮಾನವಾಗಿರುತ್ತದೆ. ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ನಿರ್ದಿಷ್ಟ ಕಾರ್ಯಗಳಿಗಾಗಿ ಐದು ಪೇಲೋಡ್ಗಳನ್ನು ಒಯ್ಯುತ್ತದೆ.
ಚಂದ್ರಯಾನ-3 ರ ಸಂಪೂರ್ಣ ಲ್ಯಾಂಡರ್ ದಕ್ಷಿಣ ಧ್ರುವದಲ್ಲಿ ಬಳಿ ಇಳಿಯಲು ಬೃಹತ್ ಪ್ರಮಾಣದ ವೈಜ್ಞಾನಿಕ ಸಾಧ್ಯತೆಗಳಿವೆ. ಅವು ಚಂದ್ರನ ಮೇಲೆ ನೀರು ಮತ್ತು ಖನಿಜಗಳ ಪತ್ತೆಗೆ ಕಾರಣವಾಗುತ್ತದೆ. ಹೀಗಾಗಿ ನಾವು ದಕ್ಷಿಣ ಧ್ರುವವನ್ನು ಆಯ್ಕೆ ಮಾಡಿಕೊಂಡೆವು. ವಿಜ್ಞಾನಿಗಳು ಸಂಶೋಧನೆ ಮಾಡಲು ಬಯಸುವ ಅನೇಕ ಇತರ ಭೌತಿಕ ಪ್ರಕ್ರಿಯೆಗಳಿವೆ. ನಮ್ಮ ಐದು ಉಪಕರಣಗಳು ಆ ಪ್ರದೇಶಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿವೆ ಎಂದು ಅವರು ತಿಳಿಸಿದರು.












Click it and Unblock the Notifications