ನೀರವ್ ಪ್ರಕರಣ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಮರಳಿ ಮಾತೃ ಕೇಡರ್ಗೆ
ಬೆಂಗಳೂರು, ಮೇ 25: ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಂತಹ ಪ್ರಭಾವಿಗಳು ಭಾಗಿಯಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಜಂಟಿ ನಿರ್ದೇಶಕ ರಾಜೀವ್ ಸಿಂಗ್ ಅವರನ್ನು ಅವಧಿಗೂ ಮುನ್ನವೇ ಮಾತೃ ಕೇಂದ್ರಕ್ಕೆ ಮರಳಿಸಲಾಗಿದೆ.
ಮೋದಿ ಮತ್ತು ಅವರ ಸಂಬಂಧಿ ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಸಿಬಿಐ ಸಿದ್ಧತೆ ನಡೆಸಿರುವಾಗಲೇ ಈ ಕ್ರಮ ಕೈಗೊಳ್ಳಲಾಗಿದೆ.
ಮದ್ಯ ದೊರೆ ವಿಜಯ್ ಮಲ್ಯ ಇನ್ನು 'ದೇಶಭ್ರಷ್ಟ ಆರ್ಥಿಕ ಅಪರಾಧಿ'
ರಾಜೀವ್ ಸಿಂಗ್ ಅವರನ್ನು ಅವರ ಮಾತೃ ಕೇಂದ್ರ ತ್ರಿಪುರಾಕ್ಕೆ ವರ್ಗಾಯಿಸಲಾಗಿದೆ. ಅಲ್ಲದೆ, ಸಿಬಿಐನ ಇನ್ನೂ ಮೂವರನ್ನು ಅವರ ಮಾತೃ ಕೇಂದ್ರಗಳಿಗೆ ಮರಳಿಸಲಾಗಿದೆ.
ಸಿಬಿಐ ಜಂಟಿ ನಿರ್ದೇಶಕ (ಎಸ್ಟಿಎಫ್) ಮತ್ತು ವಿಶೇಷ ಅಪರಾಧ ವಿಭಾಗದ ನೀನಾ ಸಿಂಗ್, ಡಿಐಜಿ ಅನೀಶ್ ಪ್ರಸಾದ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಆರ್. ಗೋಪಾಲಕೃಷ್ಣ ರಾವ್ ಅವರನ್ನು ಮಾತೃಕೇಂದ್ರಕ್ಕೆ ವಾಪಸಾಗಲಿದ್ದಾರೆ.
ರಾಜಸ್ಥಾನ ಕೇಡರ್ನ 1989ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದರೆ, ಉಳಿದ ಎಲ್ಲ ಐಪಿಎಸ್ ಅಧಿಕಾರಿಗಳು ತ್ರಿಪುರಾ ಕೇಡರ್ನವರು.
ಮಲ್ಯ, ಮೋದಿ, ಚೋಕ್ಸಿಗೆ ತಟ್ಟಲಿದೆ 'ಇಡಿ'ಯ ಹೊಸ ಕಾನೂನಿನ ಬಿಸಿ
ರಾಜೀವ್ ಸಿಂಗ್ ಅವರು 1993ನೇ ಬ್ಯಾಚ್ನವರಾಗಿದ್ದರೆ, ಅನೀಶ್ ಪ್ರಸಾದ್ 2003 ಮತ್ತು ಗೋಪಾಲಕೃಷ್ಣ ರಾವ್ ಅವರು 2005ನೇ ಬ್ಯಾಚ್ನ ಅಧಿಕಾರಿಯಾಗಿದ್ದಾರೆ.
ಆದೇಶದ ಪ್ರಕಾರ ನೀನಾ ಸಿಂಗ್, ರಾಜೀವ್ ಸಿಂಗ್ ಮತ್ತು ಗೋಪಾಲಕೃಷ್ಣ ರಾವ್ ಅವರು ತಮ್ಮ ಮಾತೃ ಕೇಡರ್ಗೆ ತಕ್ಷಣದಿಂದ ಮರಳುವಂತೆ ಹಾಗೂ ಪ್ರಸಾದ್ ಅವರು ಜೂನ್ 2ರಂದು ಮರಳುವಂತೆ ಆದೇಶಿಸಲಾಗಿದೆ.
ಈ ಅಧಿಕಾರಿಗಳನ್ನು ಅವಧಿಗೆ ಮುನ್ನವೇ ಮಾತೃ ಕೇಡರ್ಗೆ ಕಳುಹಿಸುವಂತೆ ಸಂಬಂಧಿತ ರಾಜ್ಯ ಸರ್ಕಾರಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿಬಿಐನಲ್ಲಿ ಕೆಲಸ ಮಾಡುತ್ತಿರುವ ಈ ಅಧಿಕಾರಿಗಳನ್ನು ಆಯಾ ಮಾತೃ ಕೇಡರ್ಗೆ ಮರಳಿಸಲು ಅನುಮೋದನೆ ನೀಡಲಾಗಿದೆ ಎಂದು ಸಂಸ್ಥೆ ತನ್ನ ಆದೇಶದಲ್ಲಿ ತಿಳಿಸಿದೆ.