ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲಾಲೂ ಪ್ರಸಾದ್ ಮೇವು ಹಗರಣ: ಮಾ.19 ಕ್ಕೆ ತೀರ್ಪು ಮುಂದೂಡಿಕೆ
ರಾಂಚಿ, ಮಾರ್ಚ್ 17: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ದುಮ್ಕಾ ಟ್ರೆಶರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.17 ಕ್ಕೆ ಹೊರಬೀಳಬೇಕಿದ್ದ ತೀರ್ಪನ್ನು ಮಾ.19 ಕ್ಕೆ ಸಿಬಿಐ ವಿಶೇಷ ನ್ಯಾಯಾಲಯ ಮುಂದೂಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕನೇ ಪ್ರಕರಣ ಇದಾಗಿದ್ದು, ಮೂರು ಪ್ರಕರಣಗಳಲ್ಲಿ ದೋಷಿಯಾಗಿರುವ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರಿಗೆ ಈಗಾಗಲೇ 13.5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಮೇವು ಹಗರಣದ ಮೂರನೇ ಪ್ರಕರಣದಲ್ಲಿ ಲಾಲೂಗೆ 5 ವರ್ಷ ಜೈಲು
ಲಾಲೂ ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದುಮ್ಕಾ ಖಜಾನೆಯಲ್ಲಿ ನಡೆದ 3.13 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈಗ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಲಿದ್ದು, ನಾಲ್ಕನೇ ಪ್ರಕರಣದಲ್ಲಿ ಲಾಲೂ ಭವಿಷ್ಯ ಏನಾಗಲಿದೆ ಎಂಬುದು ಸೋಮವಾರ(ಮಾ.19) ನಿರ್ಧಾರವಾಗಲಿದೆ.
Comments
English summary
The Special Central Bureau of Investigation (CBI) court in Ranchi on Saturday deferred verdict in Dumka treasury case, involving former Bihar Chief Minister and RJD chief Lalu Prasad, to March 19.The court was set to pronounce the judgment in this fourth fodder scam today.
Story first published: Saturday, March 17, 2018, 16:21 [IST]