ನವದೆಹಲಿ, ಜುಲೈ 5: ಭರ್ಜರಿ ಬಹುಮತದೊಂದಿಗೆ ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.0 ಎನ್ಡಿಎ ಸರ್ಕಾರದ ಮೊದಲ ಬಜೆಟ್ಅನ್ನು ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಜುಲೈ 5) ಲೋಕಸಭೆಯಲ್ಲಿ ಮಂಡಿಸುತ್ತಿದ್ದಾರೆ.
ಬಜೆಟ್ ಮಂಡನೆಯ ಮುನ್ನದಿನವಾದ ಗುರುವಾರ ಮುಖ್ಯ ಆರ್ಥಿಕ ಸಲಹೆಗಾರ ಕೆವಿ ಸುಬ್ರಮಣಿಯನ್ ಅವರು ಸಂಸತ್ಗೆ ಆರ್ಥಿಕ ಸಮೀಕ್ಷೆಯ ವರದಿಯನ್ನು ಸಲ್ಲಿಸಿದ್ದರು. ಅದರ ಅನ್ವಯ ಭಾರತವು ಶೇ 7ರ ಜಿಡಿಪಿ ಪ್ರಗತಿಯನ್ನು ನಿರೀಕ್ಷಿಸಿದೆ. ಅದನ್ನು ಸಾಧಿಸಲು ಈ ಬಾರಿಯ ಬಜೆಟ್ನಲ್ಲಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಪ್ರಸಕ್ತ ಸಾಲಿನ ಬಜೆಟ್ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇವುಗಳಲ್ಲಿ ಜಿಡಿಪಿ ಪ್ರಗತಿ, 2025ಕ್ಕೆ ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯ ದೇಶವನ್ನಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯನ್ನು ಈಡೇರಿಸಲು ತೆಗೆದುಕೊಳ್ಳುವ ಕ್ರಮಗಳು, ತೆರಿಗೆ ಸಂಗ್ರಹದಲ್ಲಿನ ಬದಲಾವಣೆಗಳು, ಕೃಷಿ ಕ್ಷೇತ್ರಕ್ಕೆ ಆದ್ಯತೆ, ರೈಲ್ವೆ ಯೋಜನೆಗಳು, ನಿರುದ್ಯೋಗ ಸಮಸ್ಯೆಗೆ ಪರಿಹಾರ, ಆರೋಗ್ಯ, ಮೂಲಭೂತ ಸೌಕರ್ಯದ ವೃದ್ಧಿ ಸೇರಿದಂತೆ ಇತರೆ ಅನೇಕ ಅಂಶಗಳು ಸೇರಿಕೊಂಡಿವೆ.
ಅಲ್ಲದೆ, ದೇಶದ ಅನೇಕ ಕಡೆ ಬರ ಪರಿಸ್ಥಿತಿ ಉಂಟಾಗಿದ್ದು, ನೀರಿನ ಕೊರತೆ ನೀಗಿಸಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿಸಿದೆ. ಅಗತ್ಯ ವಸ್ತುಗಳು, ಐಷಾರಾಮಿ ಸರಕುಗಳ ಬೆಲೆ ಏರಿಕೆ ಮತ್ತು ಇಳಿಕೆ, ತೆರಿಗೆ, ಅದಾಯ ತೆರಿಗೆಯಲ್ಲಿ ಬದಲಾವಣೆಗಳ ಬಗ್ಗೆಯೂ ಹಲವು ನಿರೀಕ್ಷೆಗಳಿವೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಮೊದಲ ಬಜೆಟ್ನ ನೇರ ಪ್ರಸಾರದ ಮಾಹಿತಿ ಇಲ್ಲಿವೆ.
Jul 05, 2019, 5:23 pm IST
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಮಾತ್ರಕ್ಕೆ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎನ್ನುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿಳಿದಿರಲಿ. ತಂತ್ರ-ಮಂತ್ರದಿಂದ ಚುನಾವಣೆ ಗೆಲ್ಲಬಹುದೇನೋ, ಆದರೆ ಉದ್ಯೋಗವನ್ನು ಸೃಷ್ಟಿಸಲಾಗುವುದಿಲ್ಲ ಸಚಿವರೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಮಾತ್ರಕ್ಕೆ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎನ್ನುವುದು ಹಣಕಾಸ ಸಚಿವೆ @nsitharaman ಅವರಿಗೆ ತಿಳಿದಿರಲಿ. ತಂತ್ರ-ಮಂತ್ರದಿಂದ ಚುನಾವಣೆ ಗೆಲ್ಲಬಹುದೇನೋ,ಆದರೆ ಉದ್ಯೋಗವನ್ನು ಸೃಷ್ಟಿಸಲಾಗುವುದಿಲ್ಲ ಸಚಿವರೇ.#Budget2019
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಮಾತ್ರಕ್ಕೆ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎನ್ನುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿಳಿದಿರಲಿ. ತಂತ್ರ-ಮಂತ್ರದಿಂದ ಚುನಾವಣೆ ಗೆಲ್ಲಬಹುದೇನೋ, ಆದರೆ ಉದ್ಯೋಗವನ್ನು ಸೃಷ್ಟಿಸಲಾಗುವುದಿಲ್ಲ ಸಚಿವರೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಮಾತ್ರಕ್ಕೆ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎನ್ನುವುದು ಹಣಕಾಸ ಸಚಿವೆ @nsitharaman ಅವರಿಗೆ ತಿಳಿದಿರಲಿ. ತಂತ್ರ-ಮಂತ್ರದಿಂದ ಚುನಾವಣೆ ಗೆಲ್ಲಬಹುದೇನೋ,ಆದರೆ ಉದ್ಯೋಗವನ್ನು ಸೃಷ್ಟಿಸಲಾಗುವುದಿಲ್ಲ ಸಚಿವರೇ.#Budget2019
ವಿಡಿಯೋ ರೆಕಾರ್ಡರ್ಗಳ ಮೇಲಿನ ಮೂಲ ಸುಂಕ ತೆರಿಗೆ ಶೇ 20ರಷ್ಟು ತುಟ್ಟಿಯಾಗಲಿದೆ.
Jul 05, 2019, 5:16 pm IST
ನ್ಯೂಸ್ಪ್ರಿಂಟ್ ಕಾಗದಗಳ ಮೇಲಿನ ಮೂಲ ಸುಂಕ ತೆರಿಗೆ ಶೇ 10ರಷ್ಟು ಹೆಚ್ಚಳವಾಗಲಿದೆ.
Jul 05, 2019, 5:16 pm IST
ಆಪ್ಟಿಕಲ್ ಫೈಬರ್, ಕೇಬಲ್ ಮೇಲಿನ ಮೂಲ ಸುಂಕ ತೆರಿಗೆ ಶೇ 15ರಷ್ಟು ಹೆಚ್ಚಳ.
Jul 05, 2019, 5:16 pm IST
ನರೇಂದ್ರ ಮೋದಿ ಸರ್ಕಾರವು ಸಹಕಾರಿ ಗಣತಂತ್ರದ ಪರಿಕಲ್ಪನೆಯಲ್ಲಿ ನಂಬಿಕೆ ಹೊಂದಿಲ್ಲ ಎಂದು ಮಾಜಿ ಸಚಿವ ಪಿ. ಚಿದಂಬರಂ ಟೀಕಿಸಿದರು.
Jul 05, 2019, 5:15 pm IST
ಸೆರಮಿಕ್ ಟೈಲ್ಸ್ಗಳ ಮೇಲಿನ ಮೂಲ ಸುಂಕ ತೆರಿಗೆ ಶೇ 15ರಷ್ಟು ಹೆಚ್ಚಳ
Jul 05, 2019, 5:09 pm IST
ಬಜೆಟ್ ಪ್ರತಿಗಳನ್ನು ಸಾಗಿಸಲು ನಾನು ಲೆದರ್ ಬ್ಯಾಗ್ಅನ್ನು ಏಕೆ ಬಳಸಲಿಲ್ಲ? ಬ್ರಿಟಿಷರ ಮನಸ್ಥಿತಿಯಿಂದ ನಾವು ಹೊರಬರಲು ಇದು ಸರಿಯಾದ ಸಮಯ ಎಂದು ನನಗೆ ಅನಿಸಿತು. ನಮ್ಮದೇ ರೀತಿಯನ್ನು ನಾವು ಪಾಲಿಸಬೇಕು. ಇದನ್ನು ಹೊತ್ತುಕೊಂಡು ಹೋಗಲು ನನಗೆ ಸುಲಭವೂ ಆಗಿತ್ತು- ನಿರ್ಮಲಾ ಸೀತಾರಾಮನ್
Jul 05, 2019, 4:41 pm IST
ಜಾನುವಾರು ಆಹಾರ ಉತ್ಪಾದಿಸುವ ಸಣ್ಣ ಉದ್ಯಮಕ್ಕೆ ಬೆಂಬಲ ನೀಡುವ ಮತ್ತು ಹೆಚ್ಚಿನ ಗ್ರಾಮೀಣ ಮನೆಗಳಿಗೆ ವಿದ್ಯುತ್ ಹಾಗೂ ತೈಲ ಸಂಪರ್ಕ ಒದಗಿಸುವ ಸಲುವಾಗಿ ಸರ್ಕಾರವು ಕಂಪೆನಿಗಳು ಮುಂದೆ ಬರಲು ಅವಕಾಶ ನೀಡಿದೆ. ಗೋದ್ರೇಜ್ ಆಗ್ರೋವೆಟ್ ಲಿಮಿಟೆಡ್, ಹಿಂದುಸ್ತಾನ್ ಯುನಿಲಿವರ್ ಲಿ ಮತ್ತು ಮಹೀಂದ್ರಾ ಆಂಡ್ ಮಹೀಂದ್ರಾ ಲಿ. ಇದರಲ್ಲಿ ಆಸಕ್ತಿ ತೋರಿವೆ.
Jul 05, 2019, 4:40 pm IST
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಸಂಸ್ಥೆಯನ್ನು ಮಾರಾಟ ಮಾಡುವ ಬದಲು ಸರ್ಕಾರ ವಿಮಾನ ಹಣಕಾಸು ಮತ್ತು ಭೋಗ್ಯದ ಯೋಜನೆಯನ್ನು ಪ್ರಕಟಿಸಿದೆ. ಇದು ಏರ್ ಇಂಡಿಯಾ, ಸ್ಪೈಸ್ ಜೆಟ್, ಇಂಟರ್ ಗ್ಲೋಬ್ ಏವಿಯೇಷನ್ ಮತ್ತು ಟಾಟಾ ಸಿಯಾ ಏರ್ಲೈನ್ಸ್ಗೆ ನೆರವಾಗಲಿದೆ.
Jul 05, 2019, 4:38 pm IST
ವಿಮಾನಯಾನದಲ್ಲಿ ಮುಂದಿನ ದಿನಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ತೆರೆದುಕೊಳ್ಳುವುದನ್ನು ಪರಿಗಣಿಸಲಾಗುವುದು- ನಿರ್ಮಲಾ ಸೀತಾರಾಮನ್
Jul 05, 2019, 4:25 pm IST
ಆಂತರಿಕ ಸಾಲದ ಬೆಳವಣಿಗೆ ಶೇ 13.8ಕ್ಕೆ ಹೆಚ್ಚಲಿದೆ. ಕಳೆದ ವರ್ಷದಿಂದ ವಾಣಿಜ್ಯ ಬ್ಯಾಂಕುಗಳ ಎನ್ಪಿಎ 1 ಲಕ್ಷ ರೂಪಾಯಿವರೆಗೆ ಇಳಿಕೆಯಾಗಿದೆ.
Jul 05, 2019, 4:22 pm IST
ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ತೈಲದ ಮೇಲಿನ ತೆರಿಗೆಯಿಂದ ಜನಸಾಮಾನ್ಯರ ಮೇಲಿನ ಹೊರೆ ಹೆಚ್ಚಳವಾಗಲಿದೆ. ಕರ್ನಾಟಕಕ್ಕೆ ಯಾವುದೇ ಹೊಸ ಕೊಡುಗೆಗಳನ್ನು ನೀಡಿಲ್ಲ. ಮತ ಹಾಕಿದ ಜನರಿಗೆ ಮೋದಿ ಋಣ ತೀರಿಸಿಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಜೆಟ್ಅನ್ನು ಟೀಕಿಸಿದರು.
Jul 05, 2019, 4:20 pm IST
ರಕ್ಷಣಾ ಪಿಂಚಣಿಗಳಿಗಾಗಿ ಕೇಂದ್ರ ಸರ್ಕಾರವು 1,12,079.57 ಕೋಟಿ ಅನುದಾನ ನೀಡಿದೆ.
Jul 05, 2019, 4:18 pm IST
ನಿರ್ಮಲಾ ಸೀತಾರಾಮನ್ ಅವರಿಗೆ ಅನುಭವದ ಕೊರತೆ ಇದೆಯೇನೂ. ಅವರಿಗೆ ಅಧಿಕಾರಿಗಳು ಸರಿಯಾಗಿ ಗೈಡ್ ಮಾಡಿಲ್ಲ ಎನಿಸುತ್ತದೆ. ವಿತ್ತ ಸಚಿವರಿಗೆ ಮೋದಿ ಸರಿಯಾಗಿ ಮಾರ್ಗದರ್ಶನ ಮಾಡಿಲ್ಲ. ದಲಿತರು, ಅಲ್ಪಸಂಖ್ಯಾತರ ಬಗ್ಗೆ ಒಂದೇ ಒಂದು ಶಬ್ಧ ಪ್ರಸ್ತಾಪವಾಗಿಲ್ಲ. ಹಿಂದುಳಿದ ಸಮುದಾಯ ಮೇಲೆತ್ತಲು ಏನು ಮಾಡಿದ್ದೀರಿ? ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಟೀಕಿಸಿದರು.
Jul 05, 2019, 4:13 pm IST
ರಕ್ಷಣಾ ಪಿಂಚಣಿಗಳಿಗಾಗಿ ಕೇಂದ್ರ ಸರ್ಕಾರವು 1,12,079.57 ಕೋಟಿ ಅನುದಾನ ನೀಡಿದೆ.
ಗೋಡಂಬಿ, ಪಿವಿಸಿ, ಟೈಲ್ಸ್, ಆಟೋ ಬಿಡಿ ಭಾಗಗಳು, ಮಾರ್ಬಲ್ ಸ್ಲ್ಯಾಬ್, ಒಎಫ್ಸಿ, ಸಿಸಿಟಿವಿ ಕ್ಯಾಮೆರಾಗಳ ಮೇಲಿನ ಮೂಲ ಸುಂಕ ಹೆಚ್ಚಿಸಲಾಗಿದೆ.
Jul 05, 2019, 3:46 pm IST
ಸ್ಟಾರ್ಟ್ಅಪ್ಗಳ ಸ್ಥಾಪನೆಗಾಗಿ ಸಂಗ್ರಹಿಸಿದ ನಿಧಿಯು ಆದಾಯ ತೆರಿಗೆ ಇಲಾಖೆಯ ಪರಿಶೀಲನೆಗೆ ಒಳಗಾಗಬೇಕಾಗಿಲ್ಲ.
Jul 05, 2019, 3:45 pm IST
ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡುವ ಸಲುವಾಗಿ ಮನೆಯನ್ನು ಮಾರಾಟ ಮಾಡುವವರಿಗೆ ನೀಡುವ ವಿನಾಯಿತಿಯನ್ನು 2021ರ ಹಣಕಾಸು ವರ್ಷದವರೆಗೂ ವಿಸ್ತರಿಸಲಾಗಿದೆ.
Jul 05, 2019, 3:45 pm IST
ತೆರಿಗೆ ಪಾವತಿದಾರರಿಗೆ ಅನುಕೂಲವಾಗಲು ತೆರಿಗೆ ಕಾನೂನುಗಳನ್ನು ಸರಳೀಕರಣಗೊಳಿಸಲಾಗುತ್ತದೆ.
Jul 05, 2019, 3:33 pm IST
ಈ ಬಜೆಟ್ ಮೋಸದಿಂದ ಕೂಡಿದೆ. ಹಣಕಾಸು ಸಚಿವರು 2019ರ ಫೆಬ್ರವರಿಯಲ್ಲಿನ ಮಧ್ಯಂತರ ಬಜೆಟ್ ಅಂಶಗಳನ್ನೇ ಪರಿಷ್ಕರಿಸಿ ಇಡೀ ವರ್ಷಕ್ಕೆ ಅಂದಾಜಿಸಿದ್ದಾರೆ. ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಚುನಾವಣೆಯ ವೆಚ್ಚದ ಲೆಕ್ಕವನ್ನು ತೋರಿಸಿಲ್ಲ ಎಂದು ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಟೀಕಿಸಿದ್ದಾರೆ.
The Budget is fraudulent. The FM has used February 2019 interim Budget’s revised estimates as the revised estimates for the whole year 2018-19! Expenditure cuts in the last quarter in the run up to polls are not accounted for! So a rosy picture of the economy is based on jugglery
ಹಾಲು ಖರೀದಿ, ಪರಿಷ್ಕರಣೆ ಮತ್ತು ಮಾರಾಟಕ್ಕೆ ಮೂಲಸೌಕರ್ಯಗಳ ಅಭಿವೃದ್ಧಿಪಡಿಸುವ ಮೂಲಕ ಸಹಕಾರ ತತ್ವದ ಮೂಲಕ ಪಶುಸಂಗೋಪನೆಗೆ ಉತ್ತೇಜನ ನೀಡಲಾಗುವುದು.
Jul 05, 2019, 2:46 pm IST
45 ಲಕ್ಷ ರೂಪಾಯಿವರೆಗಿನ ಮನೆ ಖರೀದಿಗೆ ಇದ್ದ ಸಾಲದ ಮೇಲಿನ ಬಡ್ಡಿದರದ ಆದಾಯ ತೆರಿಗೆ ಕಡಿತದ ಮಿತಿಯನ್ನು 1.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
Jul 05, 2019, 2:35 pm IST
ಈ ಬಜೆಟ್ನಿಂದ ಮಧ್ಯಮ ವರ್ಗದ ಪ್ರಗತಿಗೆ ನೆರವಾಗಲಿದೆ. ಅಭಿವೃದ್ಧಿ ಕಾರ್ಯಗಳನ್ನು ಇನ್ನಷ್ಟು ಚುರುಕುಗೊಳ್ಳಲಿವೆ. ತೆರಿಗೆ ವ್ಯವಸ್ಥೆಯು ಸರಳಗೊಳ್ಳಲಿದ್ದು, ಮೂಲಸೌಕರ್ಯ ಆಧುನೀಕರಣಗೊಳ್ಳಲಿದೆ- ನರೇಂದ್ರ ಮೋದಿ
Jul 05, 2019, 2:28 pm IST
ಮೀನುಗಾರಿಕೆಗೆ ಉತ್ತೇಜನ ನೀಡಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆಗೆ ಮೂಲಸೌಕರ್ಯ, ಆಧುನೀಕರಣ, ಉತ್ಪಾದನೆ, ಉತ್ಪಾದಕತೆ ಮುಂತಾದ ವಿಭಾಗಗಳ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
Jul 05, 2019, 2:28 pm IST
ಬ್ಯಾಂಕುಗಳ ಒಂದು ಲಕ್ಷ ಕೋಟಿ ರೂಪಾಯಿ ಅನುತ್ಪಾದಕ ಆಸ್ತಿಯನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಲಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 70 ಸಾವಿರ ಕೋಟಿ ಹಣಕಾಸು ನೆರವು ನೀಡಲಿದೆ. ಬ್ಯಾಂಕುಗಳ ಏಕೀಕರಣಕ್ಕೆ ಆದ್ಯತೆ ನೀಡಲಾಗಿದೆ.
Jul 05, 2019, 2:25 pm IST
ಏರ್ ಇಂಡಿಯಾದಲ್ಲಿ ಹೂಡಿಕೆ ಹಿಂಪಡೆಯುವ ಮೂಲಕ ಅದನ್ನು ಖಾಸಗೀಕರಣ ಮಾಡಲು ಮುಂದಾಗಿದೆ.
READ MORE
7:13 AM, 5 Jul
ಬೆಳಿಗ್ಗೆ 11ರಿಂದ ಮಂಡನೆ
ರೈಲ್ವೆ ಬಜೆಟ್ ಅನ್ನು ಸಹ ಒಳಗೊಂಡಿರುವ ಹಣಕಾಸು ಬಜೆಟ್, ಶುಕ್ರವಾರ ಬೆಳಿಗ್ಗೆ 11 ಗಂಟೆಯಿಂದ ಲೋಕಸಭೆಯಲ್ಲಿ ಮಂಡನೆಯಾಗಲಿದೆ.
7:14 AM, 5 Jul
ಜಿಡಿಪಿ ಗುರಿ ಶೇ 7
ಈ ವರ್ಷ ಒಟ್ಟು ಆಂತರಿಕ ವೃದ್ಧಿ ದರವು (ಜಿಡಿಪಿ) ಶೇ 7ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.
7:23 AM, 5 Jul
ರೈತರಿಗೆ 1 ಲಕ್ಷ ರೂಪಾಯಿವರೆಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸುವ ಘೋಷಣೆ ಮಾಡುವ ನಿರೀಕ್ಷೆಯಿದೆ.
7:48 AM, 5 Jul
ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ದೇಶದ ಒಟ್ಟು ವೆಚ್ಚದ ಶೇ 20ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸಬೇಕು. ಆದರೆ, ಶೇ 10ರಷ್ಟು ಮಾತ್ರ ವಿನಿಯೋಗಿಸಲಾಗುತ್ತಿದೆ. ಈ ಬಜೆಟ್ನಲ್ಲಿ ಅದನ್ನು ಅಲ್ಪ ಪ್ರಮಾಣದಲ್ಲಿಯಾದರೂ ಹೆಚ್ಚಿಸುವ ನಿರೀಕ್ಷೆಯಿದೆ.
7:49 AM, 5 Jul
ಡಿಜಿಟಲ್ ಕಲಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಅದರ ಮೇಲಿರುವ ಶೇ 18ರ ತೆರಿಗೆಯನ್ನು ತೆಗೆದುಹಾಕಬೇಕಾದ ಅಗತ್ಯವಿದೆ.
7:50 AM, 5 Jul
ಚಿಲ್ಲರೆ ಹೂಡಿಕೆದಾರರಿಗೆ ನೀಡುತ್ತಿರುವ ತೆರಿಗೆ ವಿನಾಯಿತಿಯನ್ನು ಮುಂದುವರಿಸುವ ನಿರೀಕ್ಷೆಯಿದೆ.
7:51 AM, 5 Jul
ಖರೀದಿ ಸಾಮರ್ಥ್ಯ ಹೆಚ್ಚಳಕ್ಕೆ ತೆರಿಗೆ ಕಡಿತದ ಹೆಚ್ಚಳ ಸಾಧ್ಯತೆ.
7:52 AM, 5 Jul
ಕಾರ್ಪೊರೇಟ್ ತೆರಿಗೆ ಶೇ 1ರಷ್ಟು ಕಡಿತ ಮಾಡುವ ಸಾಧ್ಯತೆ ಇದೆ.
7:56 AM, 5 Jul
ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಮೋದಿ ಸರ್ಕಾರ, ಕೃಷಿ ವಲಯದ ಉತ್ತೇಜನಕ್ಕೆ ಯಾವ ಯೋಜನೆ ಪ್ರಕಟಿಸಬಹುದು ಎಂಬ ಕುತೂಹಲವಿದೆ.
8:00 AM, 5 Jul
ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳ ಬಂಡವಾಳ ಹಿಂತೆಗೆತ ಹೆಚ್ಚಾಗಿ ಮಾಡಬೇಕೆಂಬ ನಿರೀಕ್ಷೆಯಿದೆ. 90,000 ಕೋಟಿ ಬಂಡವಾಳ ಹಿಂತೆಗೆದ ಗುರಿ ಇದೆ.
8:06 AM, 5 Jul
ಉದ್ಯೋಗಿಗಳ ನೇಮಕಾತಿಗೆ ಹೆಚ್ಚಿನ ಇನ್ಸೆಂಟಿವ್ ಕೊಡಬೇಕು. ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು.
8:15 AM, 5 Jul
ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಲು ಅಧಿಕ ಪ್ರಮಾಣದ ಹೂಡಿಕೆ ನಡೆಸಬೇಕಾದ ಅಗತ್ಯವಿದೆ.
8:30 AM, 5 Jul
ನರೇಗಾ ಹಣವನ್ನು ಜಲಸಂರಕ್ಷಣೆಯ ಯೋಜನೆಗೆ ಬಳಸುವ ಸಾಧ್ಯತೆ ಇದೆ. ನೀರಿನ ಕೊರತೆ ನಿವಾರಣೆಗೆ ವಿವಿಧ ಘೋಷಣೆಗಳ ಸಾಧ್ಯತೆ.
8:46 AM, 5 Jul
ನೀರಿನ ಸಂರಕ್ಷಣೆಗಾಗಿ ಪೆಟ್ರೋಲ್, ಡೀಸೆಲ್ ಮೇಲೆ ವಾಟರ್ ಸೆಸ್ ವಿಧಿಸುವ ಸಾಧ್ಯತೆ ಇದೆ.
9:01 AM, 5 Jul
ಆದಾಯ ತೆರಿಗೆ ಮಿತಿಯನ್ನು ಕಳೆದ ಮಧ್ಯಂತರ ಬಜೆಟ್ ವೇಳೆ ಐದು ಲಕ್ಷದವರೆಗೆ ವಿಸ್ತರಿಸಲಾಗಿತ್ತು. ಈ ಬಾರಿ ತೆರಿಗೆ ಮಿತಿ ಹೆಚ್ಚಳದ ಸಾಧ್ಯತೆ ಕಡಿಮೆ. ಆದರೆ, 5-10 ಲಕ್ಷ ರೂಪಾಯಿ ಆದಾಯವುಳ್ಳವರ ಮೇಲಿನ ತೆರಿಗೆ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡುವ ಸಾಧ್ಯತೆ ಇದೆ.
9:21 AM, 5 Jul
ತೆರಿಗೆ ಪಾವತಿಯ ಮೂಲ ಮಿತಿಯಾದ 2.5 ಲಕ್ಷ ರೂಪಾಯಿಯಿಂದ 3 ಲಕ್ಷದವರೆಗೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ.
9:22 AM, 5 Jul
ಹಣಕಾಸು ಸಚಿವಾಲಯದಲ್ಲಿ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಸಭೆ ಮುಕ್ತಾಯ. ರಾಷ್ಟ್ರಪತಿ ಭವನಕ್ಕೆ ತೆರಳಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
9:49 AM, 5 Jul
ದೇಶವು 2024-25ರ ವೇಳೆಗೆ 356 ಲಕ್ಷ ಕೋಟಿ ಡಾಲರ್ ಆರ್ಥಿಕ ಪ್ರಗತಿ ಹೊಂದುವುದು ತಮ್ಮ ಗುರಿ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅದನ್ನು ಸಾಧಿಸಲು ಭಾರತದ ಜಿಡಿಪಿ ಶೇ 8ರಷ್ಟು ಇರುವ ಅಗತ್ಯವಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಶೇ 7 ಜಿಡಿಪಿ ಪ್ರಗತಿ ಸಾಧ್ಯತೆ ಇದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
9:50 AM, 5 Jul
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಮಂಡನೆಗೆ ಒಪ್ಪಿಗೆ ಪಡೆದುಕೊಳ್ಳಲಿದ್ದಾರೆ.
9:52 AM, 5 Jul
ಇದುವರೆಗೆ ಬಜೆಟ್ ಮಂಡಿಸುವ ಹಣಕಾಸು ಸಚಿವರು ಸೂಟ್ಕೇಸ್ನೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಶೋಕ ಸ್ಥಂಭದ ಲಾಂಛನವುಳ್ಳ ಕೆಂಪು ಬಣ್ಣದ ಚಿಕ್ಕ ಬ್ಯಾಗ್ನೊಂದಿಗೆ ಕಾಣಿಸಿಕೊಂಡಿದ್ದಾರೆ.
10:32 AM, 5 Jul
ಸಂಪ್ರದಾಯದಂತೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು.
10:39 AM, 5 Jul
ಜೂನ್ 11ರ ಬಳಿಕ ಇದೇ ಮೊದಲ ಬಾರಿಗೆ ಬಜೆಟ್ ಮಂಡನೆಗೂ ಮುನ್ನ ಸೆನ್ಸೆಕ್ಸ್ ಸೂಚ್ಯಂಕ 40,000 ಅಂಕಗಳಿಗೆ ಮರಳಿದೆ.
10:46 AM, 5 Jul
ಬಜೆಟ್ಗೆ ಅನುಮೋದನೆ ನೀಡಿದ ಕೇಂದ್ರ ಸಚಿವ ಸಂಪುಟ
10:50 AM, 5 Jul
ಸಂಸತ್ ಭವನಕ್ಕೆ ಬಜೆಟ್ ಪ್ರತಿಗಳನ್ನು ತಂದ ಸಿಬ್ಬಂದಿ. ಭದ್ರತಾ ಸಿಬ್ಬಂದಿಯಿಂದ ಬಜೆಟ್ ಪ್ರತಿಗಳ ಪರಿಶೀಲನೆ.
10:52 AM, 5 Jul
ಮಗಳು ನಿರ್ಮಲಾ ಸೀತಾರಾಮನ್ ಅವರ ಮೊದಲ ಬಾರಿಗೆ ಬಜೆಟ್ ಮಂಡನೆಯನ್ನು ವೀಕ್ಷಿಸಲು ಅವರ ಪೋಷಕರಾದ ನಾರಾಯಣನ್ ಸೀತಾರಾಮನ್ ಮತ್ತು ಸಾವಿತ್ರಿ ಅವರು ಸಂಸತ್ಗೆ ಬಂದರು.
#WATCH Delhi: Parents of Finance Minister Nirmala Sitharaman - Savitri and Narayanan Sitharaman - arrive at the Parliament. She will present her maiden Budget at 11 AM in Lok Sabha. #Budget2019pic.twitter.com/Wp3INz7ifN
ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಬಜೆಟ್ ಮಂಡನೆಗೂ ಮುನ್ನ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
Delhi: MoS Finance Anurag Thakur offers prayers ahead of #Budget2019. Finance Minister Nirmala Sitharaman to present the Budget at 11 am in Lok Sabha today pic.twitter.com/fFMWQiyoTH
Live Updates on Budget 2019: Finance Minister Nirmala Sitharaman is presenting her first Union Budget. Here are the live updates for Union Budget 2019-20.